ಶೃತಿ ಹಾಸನ್ 
ಸಿನಿಮಾ ಸುದ್ದಿ

ವಿಚ್ಚೇದನದ ನಂತರ ಅಪ್ಪ-ಅಮ್ಮ ಹ್ಯಾಪಿಯಾಗಿದ್ದಾರೆ: ಶೃತಿ ಹಾಸನ್

ಕಮಲ್ ಹಾಸನ್ ಪುತ್ರಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ನಾಯಕಿ ಶೃತಿ ಹಾಸನ್, ತಮ್ಮದೇ ಆದ ನಟನೆ, ಸಿನಿಮಾಗಳ ಆಯ್ಕೆ ಮೂಲಕ ಅತ್ಯಲ್ಪ ಸಮಯದಲ್ಲಿ ಸ್ಟಾರ್ ನಾಯಕಿ ಆಗಿ ಬೆಳೆದರು.

ಚೆನ್ನೈ: ಕಮಲ್ ಹಾಸನ್ ಪುತ್ರಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ನಾಯಕಿ ಶೃತಿ ಹಾಸನ್, ತಮ್ಮದೇ ಆದ ನಟನೆ, ಸಿನಿಮಾಗಳ ಆಯ್ಕೆ ಮೂಲಕ ಅತ್ಯಲ್ಪ ಸಮಯದಲ್ಲಿ ಸ್ಟಾರ್ ನಾಯಕಿ ಆಗಿ ಬೆಳೆದರು.

ಗಾಯಕಿ , ನಟಿ, ಡ್ಯಾನ್ಸರ್, ಸಂಗೀತ ನಿರ್ದೇಶಕಿ.. ಹೀಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿರುವ, ತಮಗನಿಸಿದ್ದನ್ನು ಮುಖಕ್ಕೆ ಹೊಡೆದಂತೆ ಹೇಳುವ ಪ್ರವೃತ್ತಿಯ ಶೃತಿ ಹಾಸನ್ ಹೊಸದಾಗಿ... ತನ್ನ ತಂದೆ ತಾಯಿ ವಿಚ್ಚೇದನ ಕುರಿತು ಮಾತನಾಡಿದ್ದಾರೆ.

ಶ್ರುತಿ ಹಾಸನ್ ಬಾಲ್ಯದಲ್ಲಿದ್ದಾಗಲೇ ಅವರ ತಂದೆ ತಾಯಿ ಕಮಲ್ ಹಾಸನ್ ಹಾಗೂ ಸಾರಿಕಾ ಬೇರ್ಪಟ್ಟಿದ್ದರು. ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಶೃತಿ ಹಾಶನ್ ಈ ಬಗ್ಗೆ ಮಾತನಾಡಿ .. 'ಅವರು ಬೇರ್ಪಟ್ಟಿದ್ದಕ್ಕೆ ನನಗೆ ಸಂತೋಷವಾಗಿದೆ. ಯಾಕೆಂದರೆ ಅವರಿಗೆ ಇಷ್ಟವಿಲ್ಲದೆ, ಯಾವುದೋ ಕಾರಣ ಹೇಳಿ ಅವರನ್ನು ಬಲವಂತದಿಂದ ಒಂದು ಗೂಡಿಸುವುದು ಸರಿಯಲ್ಲ.

ಅವರಿಬ್ಬರೂ ಅದ್ಭುತ ವ್ಯಕ್ತಿಗಳು. ನಾನು ಚಿಕ್ಕವಳಿದ್ದಾಗಲೇ ಅವರು ಪರಸ್ಪರ ಬೇರ್ಪಟ್ಟಿದ್ದರು. ಅದು ತುಂಬಾ ಸುಲಭವಾಗಿ ನಡೆಯಿತು. ಅವರು ಒಟ್ಟಾಗಿ ಇದ್ದದ್ದಕ್ಕಿಂತಲೂ ಬೇರ್ಪಟ್ಟ ನಂತರ ಅವರು ಸಂತೋಷವಾಗಿದ್ದಾರೆ. ಇನ್ನೂ ತಂದೆ ಕಮಲ್ ಹಾಸನ್ ಜೊತೆ ನಾನು ಹೆಚ್ಚು ನಿಕಟವಾಗಿದ್ದೇನೆ ಎಂದು ಶೃತಿ ಹಾಸನ್ ಹೇಳಿದ್ದಾರೆ.

ಕಮಲ್ ಹಾಸನ್ ಮೊದಲು ಡ್ಯಾನ್ಸರ್ ವಾಣಿ ಗಣಪತಿ ಅವರನ್ನು ವಿವಾಹವಾಗಿದ್ದರು. ಹತ್ತು ವರ್ಷಗಳ ಅವರ ವೈವಾಹಿಕ ಜೀವನ ಚೆನ್ನಾಗಿದ್ದರೂ, 1988 ರಲ್ಲಿ ಅವರು ಪರಸ್ಪರ ವಿಚ್ಚೇದನ ಪಡೆದಿದ್ದರು. ನಂತರ ಕಮಲ್ ಸಾರಿಕಾರನ್ನು ಪ್ರೀತಿಸಿದರು. 1980ರಲ್ಲಿ ವಿವಾಹವಾದರು. ಅವರ ದಾಂಪತ್ಯದ ಗುರುತಾಗಿ 1986 ರಲ್ಲಿ ಶ್ರುತಿ ಹಾಸನ್, 1991ರಲ್ಲಿ ಅಕ್ಷರಾ ಹಾಸನ್‌ ಜನಿಸಿದ್ದರು.

ಈ ನಡುವೆ, ಕಮಲ್ ಮತ್ತು ಸಾರಿಕಾ ನಡುವೆ ಮನಸ್ತಾಪ ಆರಂಭಗೊಂಡು, ಅದು ದೊಡ್ಡದಾದ ಕಾರಣ ಅವರು 2004 ರಲ್ಲಿ ವಿಚ್ಚೇದನ ಪಡೆದುಕೊಂಡಿದ್ದರು. 2015ರಲ್ಲಿ 'ಶಮಿತಾಬ್' ಚಿತ್ರದಲ್ಲಿ ಅಕ್ಷರಾ ಹಾಸನ್ ಹೆಸರು ಗಳಿಸಿದರೆ, ಶ್ರುತಿ ಹಾಸನ್ ತಮಿಳು, ತೆಲುಗು ಹಿಂದಿ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ್ನಣೆ ಪಡೆದುಕೊಂಡಿದ್ದಾರೆ ಪ್ರಸ್ತುತ ಅವರು 'ಸಲಾರ್' ನಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT