ವಿಜಯಲಕ್ಷ್ಮಿ 
ಸಿನಿಮಾ ಸುದ್ದಿ

ವಿಜಯಲಕ್ಷ್ಮಿಗೆ ಕನ್ನಡಿಗರಿಂದ ಲಕ್ಷಾಂತರ ರೂ. ಸಹಾಯ; ನನ್ನ ಸುತ್ತ ಈಗ ಸ್ಟ್ರಾಂಗ್ ಫ್ಯಾಮಿಲಿ ಇದೆ ಎಂದ 'ನಾಗಮಂಡಲ' ನಟಿ

ಮಾತೃವಿಯೋಗದ ದುಃಖದಲ್ಲಿರುವ 'ನಾಗಮಂಡಲ' ಖ್ಯಾತಿಯ ನಟಿ ವಿಜಯಲಕ್ಷ್ಮೀ ಅವರಿಗೆ ರಾಜ್ಯದ ಕಲಾಭಿಮಾನಿಗಳು ಲಕ್ಷಾಂತರ ರೂಪಾಯಿ ಸಹಾಯ ಮಾಡಿದ್ದಾರೆ.

ಬೆಂಗಳೂರು: ಮಾತೃವಿಯೋಗದ ದುಃಖದಲ್ಲಿರುವ 'ನಾಗಮಂಡಲ' ಖ್ಯಾತಿಯ ನಟಿ ವಿಜಯಲಕ್ಷ್ಮಿ ಅವರಿಗೆ ರಾಜ್ಯದ ಕಲಾಭಿಮಾನಿಗಳು ಲಕ್ಷಾಂತರ ರೂಪಾಯಿ ಸಹಾಯ ಮಾಡಿದ್ದಾರೆ.

ನಟಿಯ ಪರವಾಗಿ ಜನಸ್ನೇಹಿ ಅನಾಥಾಶ್ರಮ ಮಾಡಿಕೊಂಡಿದ್ದ ಮನವಿಗೆ 3 ಲಕ್ಷದ 2 ಸಾವಿರದ 900 ರೂ. ಹರಿದುಬಂದಿದ್ದು, ಆ ಹಣವನ್ನು ವಾಣಿಜ್ಯ ಮಂಡಳಿ ಮುಖೇನ ವಿಜಯಲಕ್ಷ್ಮೀಯವರಿಗೆ ಹಸ್ತಾಂತರಿಸಲಾಗಿದೆ.

ಈ ವೇಳೆ ಸುದ್ದಿಗಾರರೊಡನೆ ಮಾತನಾಡಿದ ನಟಿ, ಸಹಾಯದ ರೂಪದಲ್ಲಿ ಬಂದಿರುವ ಹಣವನ್ನು ವಾಪಸ್ ಅನಾಥಾಶ್ರಮಕ್ಕೇ ಕೊಡಬೇಕೆಂದು ಆಲೋಚಿಸಿದ್ದೆ. ಆದರೆ ಈ ಸಮಯದಲ್ಲಿ ಸಹೋದರಿಯ ಚಿಕಿತ್ಸೆಗೆ ಹಾಗೂ ವಾಸಿಸಲು ಸೂಕ್ತ ಮನೆಗಾಗಿ ಹಣದ ಅವಶ್ಯಕತೆಯಿರುವುದರಿಂದ ಅದನ್ನು ಯಾವ ರೀತಿ ಬಳಸಬೇಕೆಂದು ವಾಣಿಜ್ಯ ಮಂಡಳಿಯ ಹಿರಿಯರು ಸೂಚಿಸಿದ್ದಾರೆ ಎಂದರು.

ನನ್ನ ಸುತ್ತ ಈಗ ಸ್ಟ್ರಾಂಗ್ ಫ್ಯಾಮಿಲಿ ಇದೆ
ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಹಾಗೂ ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡಿರುವ ನಟಿ ವಿಜಯಲಕ್ಷ್ಮಿ, “ಪ್ರಸ್ತುತ ನನ್ನ ಸುತ್ತ ಸ್ಟ್ರಾಂಗ್ ಫ್ಯಾಮಿಲಿ ಇದೆ. ಕರ್ನಾಟಕ ವಾಣಿಜ್ಯ ಮಂಡಳಿ, ಕಲಾವಿದರ ಸಂಘ ನನ್ನ ಬೆನ್ನ ಹಿಂದಿದೆ” ಎಂದು ಹೇಳಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಭಾ ಮಾ ಹರೀಶ್, ಗಿರೀಶ್, ಮತ್ತಿತರರು ಉಪಸ್ಥಿತರಿದ್ದರು.

ಸಹೋದರಿ ಉಷಾ ಕೊಂಚ ಚೇತರಿಸಿಕೊಂಡ ಬಳಿಕ ಚಿತ್ರರಂಗದಲ್ಲಿ ಮುಂದುವರಿಯುವುದಾಗಿ ತಿಳಿಸಿದ ವಿಜಯಲಕ್ಷ್ಮಿ, ತಾಯಿಗೆ ಏನಾದೀತೋ ಎಂಬ ಭಯದಿಂದ ಕನ್ನಡಿಗರ ಬಳಿ ಭಿಕ್ಷೆ ನೀಡಿ ಎಂದು ಬೇಡಿದೆ. ಕೊನೆಗೂ ಅವರು ಉಳಿಯಲಿಲ್ಲ. ವಿಡಿಯೋಗಳ ಮೂಲಕ ಏನಾದರೂ ಮಾತನಾಡಿದ್ದರೂ ಅದರ ಹಿಂದೆ ಭಾವನೆಗಳಿವೆ ಎಂದರು.

“ಅಮ್ಮ ನನ್ನನ್ನು ಬಿಟ್ಟು ಹೋದರಾದರೂ, ದೊಡ್ಡ ಫ್ಯಾಮಿಲಿಯನ್ನು ಕೊಟ್ಟು ಹೋಗಿದ್ದಾರೆ. ಆಕೆ ಅನಾಥಾಶ್ರಮಕ್ಕೆ ಸೇರಕೂಡದು ಎಂದು ಬಯಸಿದ್ದೆ. ದೇವರ ದಯೆಯಿಂದ ಹಾಗಾಗಲಿಲ್ಲ. ಆದರೆ ಅಂತ್ಯಸಂಸ್ಕಾರ ಮಾತ್ರ ಅನಾಥಾಶ್ರಮದ ವತಿಯಿಂದ ನಡೆಯಿತಾದರೂ, ಸಂಸ್ಕಾರಯುತವಾಗಿ ನಡೆದಿದೆ” ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT