ಸಮಂತಾ-ನಾಗ ಚೈತನ್ಯ-ನಾಗಾರ್ಜುನ 
ಸಿನಿಮಾ ಸುದ್ದಿ

ನಾಗ ಚೈತನ್ಯ-ಸಮಂತಾ ದೂರವಾಗುತ್ತಿರುವ ಕುರಿತು ನಟ ನಾಗಾರ್ಜುನ್ ಹೇಳಿದ್ದೇನು?

ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ಅಕ್ಕಿನೇನಿ ವಿಚ್ಛೇಧನವನ್ನು ಘೋಷಿಸಿದ ನಂತರ ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಪ್ರತಿಕ್ರಿಯೆಸಿದ್ದು ಕುಟುಂಬಕ್ಕೆ 'ಸಮಂತಾ ಯಾವಾಗಲೂ ಪ್ರಿಯೆ' ಎಂದು ಹೇಳಿದರು.

ಹೈದರಾಬಾದ್: ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ಅಕ್ಕಿನೇನಿ ವಿಚ್ಛೇಧನವನ್ನು ಘೋಷಿಸಿದ ನಂತರ ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಪ್ರತಿಕ್ರಿಯೆಸಿದ್ದು ಕುಟುಂಬಕ್ಕೆ 'ಸಮಂತಾ ಯಾವಾಗಲೂ ಪ್ರಿಯೆ' ಎಂದು ಹೇಳಿದರು.

ಭಾರವಾದ ಹೃದಯದಿಂದ ನಾನು ಇದನ್ನು ಹೇಳುತ್ತೇನೆ! ಸ್ಯಾಮ್ ಮತ್ತು ಚಾಯ್ ನಡುವೆ ಏನೇ ನಡೆದರೂ ಅದು ದುರದೃಷ್ಟಕರ. ಹೆಂಡತಿ ಮತ್ತು ಗಂಡನ ನಡುವೆ ಏನಾಗುತ್ತದೆ ಎಂಬುದು ತುಂಬಾ ವೈಯಕ್ತಿಕವಾಗಿದೆ. ಸ್ಯಾಮ್ ಮತ್ತು ಚಾಯ್ ಇಬ್ಬರೂ ನನಗೆ ಪ್ರಿಯರು. ನನ್ನ ಕುಟುಂಬವು ಸ್ಯಾಮ್‌ನೊಂದಿಗೆ ಕಳೆದ ಕ್ಷಣಗಳನ್ನು ಯಾವಾಗಲೂ ಗೌರವಿಸುತ್ತದೆ ಮತ್ತು ಅವಳು ಯಾವಾಗಲೂ ನಮಗೆ ಪ್ರಿಯಳಾಗಿರುತ್ತಾಳೆ! ದೇವರು ಅವರಿಬ್ಬರಿಗೂ ಶಕ್ತಿಯನ್ನು ನೀಡಲಿ ಎಂದು ಅವರು ಬರೆದಿದ್ದಾರೆ.

ಚೈತನ್ಯ ಮತ್ತು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಪುಟಗಳಲ್ಲಿ  ತಾವು ದೂರವಾಗುತ್ತಿರುವುದಾಗಿ ದೃಢಪಡಿಸಿದರು. ಇಬ್ಬರು 'ತಮ್ಮದೇ ಆದ ಮಾರ್ಗಗಳನ್ನು ಅನುಸರಿಸಲು' ನಿರ್ಧರಿಸಿದ್ದಾರೆ. 'ವಿಶೇಷ ಬಾಂಡ್' ಅನ್ನು ಹಂಚಿಕೊಳ್ಳುವುದನ್ನು ಮುಂದುವರಿಸುತ್ತಾರೆ. ದಂಪತಿಯ ನಾಲ್ಕನೇ ವಿವಾಹ ವಾರ್ಷಿಕೋತ್ಸವಕ್ಕೆ ಒಂದು ವಾರ ಇರುವಾಗಲೇ ವಿಚ್ಛೇಧನವನ್ನು ಘೋಷಿಸಿದ್ದಾರೆ. 

ಚೈತನ್ಯ ಮತ್ತು ಸ್ಯಾಮ್, ಯೆ ಮಾಯಾ ಚೆಸಾವೆ, ಆಟೋನಗರ ಸೂರ್ಯ ಮತ್ತು ಮಜಿಲಿ ಚಿತ್ರಗಳಲ್ಲಿ ಜೊತೆಯಾಗಿ ಕೆಲಸ ಮಾಡಿದರು. ಅಕ್ಟೋಬರ್ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT