ಸಿನಿಮಾ ಸುದ್ದಿ

ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರನ ಪುಂಡಾಟ: ಕ್ಷುಲ್ಲಕ ಕಾರಣಕ್ಕೆ ಕಸಗುಡಿಸುವ ಮಹಿಳೆಯರ ಮೇಲೆ ಹಲ್ಲೆ

Shilpa D

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.  

ಅಕ್ಟೋಬರ್ 23 ರಂದು ಶನಿವಾರ  ಮಹಾಲಕ್ಷ್ಮಿ ಲೇಔಟ್ ನಲ್ಲಿ ಪಕ್ಕದ ಮನೆಯ ಕೆಲಸದವರ ಮೇಲೆ ಬಾಡಿಗಾರ್ಡ್ ಗಳ ಜೊತೆ ಬಂದ ಸ್ನೇಹಿತ್ ಜಗದೀಶ್ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. 

ಐಪಿಸಿ ಸೆಕ್ಷನ್ 354-ಮಹಿಳೆ ಗೌರವಕ್ಕೆ ಧಕ್ಕೆ ಐಪಿಸಿ ಸೆಕ್ಷನ್ 323-ಕೈಯಿಂದ ಹಲ್ಲೆ ನಡೆಸುವುದು. ಐಪಿಸಿ‌ ಸೆಕ್ಷನ್ 448 ಅತಿಕ್ರಮಣ ಪ್ರವೇಶ, 506 ಜೀವ ಬೆದರಿಕೆ ಆರೋಪದಡಿ ಸ್ನೇಹಿತ್ ಮತ್ತು ಇತರ 7 ಮಂದಿ ವಿರುದ್ಧ ದೂರು ದಾಖಲಾಗಿದೆ.  ರೇಖಾ ಜಗದೀಶ್, ಭುವನಾ, ಲತಾ, ನಿಕಿಲ್, ಕುಮಾರ್, ಅಶೋಕ್ ಮತ್ತು ರಕ್ಷಿತ್  ಎಂಬುವರ ವಿರುದ್ಧ ಅನುರಾಧ ಎಂಬಾಕೆ ದೂರು ಸಲ್ಲಿಸಿದ್ದಾರೆ.

ಶನಿವಾರ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಮಂಜುಳಾ ಪುರುಷೋತ್ತಮ್ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರು ಕಸ ಗುಡಿಸುತ್ತಿದ್ದರು, ಈ ವೇಳೆ ಪಕ್ಕಕ್ಕೆ ಸರಿಯುವಂತೆ ಸ್ನೇಹಿತ್ ಬಾಡಿಗಾರ್ಡ್ ಗಳಿಗೆ ಹೇಳಿದ್ದಾರೆ. ಈ ವೇಳೆ ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾರೆ, ಸ್ನೇಹಿತ್ ಮಹಿಳೆಯರ ಬಟ್ಟೆ ಎಳೆದಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

SCROLL FOR NEXT