ಸಿನಿಮಾ ಸುದ್ದಿ

'ಅಪ್ಪು' ಉಳಿಸಿಕೊಳ್ಳಲಾಗಲಿಲ್ಲ; ಶಾಂತಿಯುತವಾಗಿ ಕಳಿಸಿಕೊಡೋಣ: ರಾಘವೇಂದ್ರ ರಾಜ್ ಕುಮಾರ್ ಮನವಿ

Sumana Upadhyaya

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದಿಂದ ಅವರ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ. ಡಾ. ರಾಜ್ ಅವರ ಐವರು ಮಕ್ಕಳಲ್ಲಿ ಕಿರಿಯರು. ಹೀಗಾಗಿ ಎಲ್ಲರಿಗೂ ಅಚ್ಚುಮೆಚ್ಚು. ಇಂತಹ ಮನೆಮಗನನ್ನು ಕಳೆದುಕೊಂಡು ಎಲ್ಲರೂ ಕಣ್ಣೀರಾಗಿದ್ದರೂ, ಇದರ ನಡುವೆಯೇ ಮುಂದಿನ ಕಾರ್ಯದತ್ತ ಗಮನಹರಿಸಿದ್ದಾರೆ.

ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ನಾನು ಎರಡು ಸಲ ಆಸ್ಪತ್ರೆಗೆ ಸೇರಿದಾಗ ಸುರಕ್ಷಿತವಾಗಿ ವಾಪಸ್ ಕರೆತಂದರು. ಆದರೆ ನನ್ನಿಂದ ಅವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಪ್ಪ, ಅಮ್ಮನನ್ನು ನೋಡಲು ಬಹಳ ಬೇಗ ತೆರಳಿದ್ದಾನೆ ಎಂದಿದ್ದಾರೆ. ಇನ್ನುಳಿದಿರುವುದು ಅವನನ್ನು ಶಾಂತಿಯುತವಾಗಿ, ವಿಜೃಂಭಣೆಯಿಂದ ಕಳುಹಿಸಿಕೊಡುವುದು. ಈ ಕಾರ್ಯಕ್ಕೆ ಅಭಿಮಾನಿಗಳೆಲ್ಲ ಸಹಕರಿಸಬೇಕು. ತಂದೆಯವರ ಅಗಲಿಕೆಯ ವೇಳೆ ಆದಂತೆ ಆಗಬಾರದು ಎಂದು ಮನವಿ ಮಾಡಿದ್ದಾರೆ.

SCROLL FOR NEXT