ನೈಟ್ ಕರ್ಫ್ಯೂ ಚಿತ್ರ ತಂಡ 
ಸಿನಿಮಾ ಸುದ್ದಿ

ಧೀರನ್ ಅಭಿನಯದ 2ನೇ ಚಿತ್ರ 'ನೈಟ್ ಕರ್ಫ್ಯೂ'ಗೆ ಚಾಲನೆ

ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಧೀರನ್ ಅಭಿನಯದ 'ನೈಟ್ ಕರ್ಫ್ಯೂ' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಬೆಂಗಳೂರು: ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಧೀರನ್ ಅಭಿನಯದ 'ನೈಟ್ ಕರ್ಫ್ಯೂ' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಧೀರನ್ ಅವರ ಚೊಚ್ಚಲ ಚಿತ್ರ ಶಿವಾ 143 ಇನ್ನೂ ತೆರೆಗೆ ಬಂದಿಲ್ಲ, ಅದಾಗಲೇ ಅವರ ಎರಡನೇ ಚಿತ್ರದತ್ತ ಮುಖ ಮಾಡಿದ್ದಾರೆ. ಅವರ 2ನೇ ಚಿತ್ರಕ್ಕೆ ನೈಟ್ ಕರ್ಫ್ಯೂ ಎಂಬ ಥ್ರಿಲ್ಲರ್ ಹೆಸರನ್ನಿಡಲಾಗಿದ್ದು, ಚಿತ್ರವನ್ನು ನಟ ನಿರ್ದೇಶಕ ರವೀಂದ್ರ ವಂಶಿ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ನಿರ್ದೇಶಕರು, ಪುಟಾಣಿ ಸಫಾರಿ  ಮತ್ತು ವಾಸಂತಿ ನಲಿದಾಗ ಎಂಬ ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈ ಚಿತ್ರಗಳು ಅವರಿಗೆ ಸಾಕಷ್ಟು ಖ್ಯಾತಿ ಕೂಡ ನೀಡಿದ್ದವು. ಇದೀಗ ನೈಟ್ ಕರ್ಫ್ಯೂ ಅವರ ನಾಲ್ಕನೇ ಬಹು ನಿರೀಕ್ಷಿತ ಯೋಜನೆಯಾಗಿದೆ.

ಈ ಚಿತ್ರವು ಲಾಕ್‌ಡೌನ್ ಅವಧಿ ಕಥಾಹಂದರ ಹೊಂದಿದ್ದು, ಧೀರನ್ ಯುವ ವೈದ್ಯರಾಗಿ ನಟಿಸಲಿದ್ದಾರೆ. ಅನೇಕ ನಿಜ ಜೀವನದ ಘಟನೆಗಳು ಚಿತ್ರಕ್ಕೆ ಸ್ಫೂರ್ತಿ ನೀಡಿವೆ. ಬಿಎಸ್ ಚಂದ್ರಶೇಖರ್ ಅವರು ನೈಟ್ ಕರ್ಫ್ಯೂ ಅನ್ನು ನಿರ್ಮಿಸುತ್ತಿದ್ದು, ಬುಧವಾರ ಚಿತ್ರದ ಪರೀಕ್ಷಾ ಚಿತ್ರೀಕರಣವನ್ನು ನಡೆಸಲಾಗಿದ್ದು,  ಶೀಘ್ರದಲ್ಲೇ ಚಿತ್ರದ ಅಧಿಕೃತ ಘೋಷಣೆಯನ್ನು ಮಾಡಲಾಗುವುದು ಎನ್ನಲಾಗಿದೆ. ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರ ತಂಡ ಯೋಜಿಸಿದ್ದು, ಫೆಬ್ರವರಿ 2022 ರಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಗುರಿ ಹೊಂದಲಾಗಿದೆ.

ಏತನ್ಮಧ್ಯೆ, ಜಯಕುಮಾರ್ ಫಿಲ್ಮ್ಸ್ ನಿರ್ಮಾಣದ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಶಿವಾ 143 ಬಿಡುಗಡೆಗೆ ರಾಜಕುಮಾರ್ ಕುಟುಂಬದಿಂದ ಬಂದ ಮತ್ತೊಬ್ಬ ನಟ ಧೀರನ್ ಕಾಯುತ್ತಿದ್ದಾರೆ. ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮಾನ್ವಿತಾ ಕಾಮತ್ ಮಹಿಳಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಬಳಿಕ ಧೀರನ್ ಮತ್ತೊಮ್ಮೆ ನಿರ್ಮಾಪಕ ಜಯಣ್ಣ ಜೊತೆ ಸೇರಿಕೊಳ್ಳಲಿದ್ದಾರೆ. ಈ ತಂಡದ ಕೈಯಲ್ಲಿ ಸ್ಕ್ರಿಪ್ಟ್ ಹೊಂದಿದ್ದು, ಸೂಕ್ತ ನಿರ್ದೇಶಕರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಈ ಸಿನಿಮಾದಲ್ಲಿ ಛಾಯಾಗ್ರಾಹಕ ಜೀವನ್ ಇದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT