ರಾಘವೇಂದ್ರ ರಾಜ್ ಕುಮಾರ್ ನಿರ್ಮಾಣದ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ನಾಯಕಿ ಪಾತ್ರಧಾರಿ ಬದಲಾಗಿದ್ದಾರೆ. ನಟಿ ಶಿಲ್ಪಾ ರವಿ ಅವರು ವೈಯಕ್ತಿಕ ಕಾರಣಗಳಿಂದಾಗಿ ಈ ಸೀರಿಯಲ್ಗೆ ಗುಡ್ಬೈ ಹೇಳಿದ್ದಾರೆ.
ಅಷ್ಟೇ ಅಲ್ಲದೆ ಈ ಶಿಲ್ಪಾ ರವಿ ಪಾತ್ರಕ್ಕೆ ಇನ್ನೊಂದು ನಟಿಯ ಆಗಮನವಾಗಿದೆ, ಶಿಲ್ಪಾ ರವಿ ಅವರು ಅನಾರೋಗ್ಯ ಕಾರಣಗಳಿಂದ ಧಾರಾವಾಹಿಯಿಂದ ಹೊರನಡೆದಿದ್ದಾರೆ. 'ಜೀವ ಹೂವಾಗಿದೆ' ಸೀರಿಯಲ್ನಲ್ಲಿ ಶಿಲ್ಪಾ ರವಿ ಅವರು ಮಧು ಪಾತ್ರ ಮಾಡುತ್ತಿದ್ದಾರೆ.
ಈ ಸೀರಿಯಲ್ ಶುರುವಾದಾಗಿನಿಂದ ಶಿಲ್ಪಾ ಅವರು ಮಧು ಪಾತ್ರಕ್ಕೆ ಜೀವ ತುಂಬುತ್ತಿದ್ದರು. ಈ ಧಾರಾವಾಹಿಯನ್ನು ರಾಘವೇಂದ್ರ ರಾಜ್ಕುಮಾರ್ ಅವರ ಹೋಮ್ ಬ್ಯಾನರ್ನಲ್ಲಿ ನಿರ್ಮಾಣ ಮಾಡಲಾಗಿತ್ತು. ನಟಿ ಶಿಲ್ಪಾ ರವಿ ಪಾತ್ರದಲ್ಲಿ ದೀಪಾ ಕಟ್ಟೆ ನಟಿಸುತ್ತಿದ್ದಾರೆ. ಇಷ್ಟುದಿನಗಳ ಕಾಲ ದೀಪಾ ಕಟ್ಟೆ ಧಾರಾವಾಹಿಯಲ್ಲಿ ಪೋಷಕ ಪಾತ್ರ ಮಾಡುತ್ತಿದ್ದರು