ಭಾವನಾ ಮೆನನ್ 
ಸಿನಿಮಾ ಸುದ್ದಿ

ರಕ್ಷಣ್ ನಿರ್ದೇಶನದ 'ಪಿಂಕ್ ನೋಟ್' ಸಿನಿಮಾದಲ್ಲಿ ಡಬಲ್ ರೋಲ್ ನಲ್ಲಿ ಭಾವನಾ ಮೆನನ್!

ಶಿವರಾಜಕುಮಾರ್ ಅವರ ಭಜರಂಗಿ 2 ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟಿ ಭಾವನಾ ಮೆನನ್, ನಿರ್ದೇಶಕ ರಕ್ಷಣ್ ಅವರ ಮುಂದಿನ ಪಿಂಕ್ ನೋಟ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.

ಶಿವರಾಜಕುಮಾರ್ ಅವರ ಭಜರಂಗಿ 2 ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟಿ ಭಾವನಾ ಮೆನನ್, ನಿರ್ದೇಶಕ ರಕ್ಷಣ್ ಅವರ ಮುಂದಿನ ಪಿಂಕ್ ನೋಟ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಎರಡು ಶೆಡ್ಯೂಲ್‌ ಶೂಟಿಂಗ್ ಪೂರ್ಣಗೊಂಡಿದ್ದು, ಚಿತ್ರದ ಇತ್ತೀಚಿನ ಅಪ್‌ಡೇಟ್ ಏನೆಂದರೆ, ಭಾವನಾ ಪಿಂಕ್ ನೋಟ್‌ನಲ್ಲಿ ದ್ವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಲನಚಿತ್ರವು ವಿದೇಶಿ ಉದ್ಯೋಗದ ಆಮಿಷಕ್ಕೆ ಒಳಗಾಗುವ ಮಹಿಳೆಯರ ಜೀವನದ ಕಥೆ ಹೇಳುತ್ತದೆ.

ಪ್ರತಿಯೊಬ್ಬರಿಗೂ ದುಡ್ಡಿನ ಅವಶ್ಯಕತೆ ಇದೆ. ಅದರ ಹಿಂದೆ ಹೋದಾಗ ಏನಾಗುತ್ತದೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳುತ್ತಿದ್ದೇನೆ. ಜಾಕಿ ಭಾವನಾ ಅವರಿಗೆ ಕಥೆಯನ್ನು ಮೇಲ್‌ ಮೂಲಕ ಕಳಿಸಿದ್ದೆ. ಅದನ್ನು ಓದಿದ ಅವರು ಈ ರೀತಿಯ ಪಾತ್ರವನ್ನು ನಾನು ಇದುವರೆಗೂ ಮಾಡಿಲ್ಲ ಎಂದು ಖುಷಿಯಿಂದ ಒಪ್ಪಿಕೊಂಡರು. ದ್ವಿಪಾತ್ರದಲ್ಲಿ ಒಂದು ಪಾತ್ರ ಹೋಮ್ಲಿಯಾಗಿರುತ್ತದೆ, ಮತ್ತೊಂದು ಕೊಂಚ ವಿಭಿನ್ನವಾಗಿದೆ. ಈ ಸಿನಿಮಾವನ್ನು ದಾವಣಗೆರೆ ಮೂಲದ ರಾಜಕೀಯ ಧುರೀಣ ಆನಂದಪ್ಪ ಅವರು ನಿರ್ಮಾಣ ಮಾಡುತ್ತಿದ್ದಾರೆ’ ಎಂದಿದ್ದಾರೆ ನಿರ್ದೇಶಕ ರಕ್ಷಣ್‌.

ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲು ಪ್ರೇಮ್ (ನೆನಪಿರಲಿ) ಅವರನ್ನು ಅಂತಿಮಗೊಳಿಸಿದ್ದಾರೆ ಮತ್ತು ಮುಂದಿನ ತಿಂಗಳು ನಡೆಯಲಿರುವ ದುಬೈ ಶೆಡ್ಯೂಲ್‌ನಲ್ಲಿ ಅವರು ಸೆಟ್‌ಗೆ ಸೇರಲಿದ್ದಾರೆ ಎಂದು ಹೇಳಲಾಗಿದೆ.

ದಿಗಂತ್ ಅವರೊಂದಿಗಿನ ನಿರ್ದೇಶಕರ ಚಿತ್ರವು ಹಲವು ಕಾರಣಗಳಿಂದ ಸ್ಥಗಿತಗೊಂಡಿದೆ, ಹೀಗಾಗಿ ಅವರು ಈಗ ಪಿಂಕ್ ನೋಟ್‌ನೊಂದಿಗೆ ತೆರಳಿದ್ದಾರೆ. ಎಚ್ ಆನಂದಪ್ಪ ನಿರ್ಮಾಣದ ಈ ಚಿತ್ರಕ್ಕೆ ಸೆಲ್ವಂ ಅವರ ಛಾಯಾಗ್ರಹಣ, ಜಸ್ಸಿ ಗಿಫ್ಟ್ ಅವರ ಸಂಗೀತ ಮತ್ತು ನಾಗೇಂದ್ರ ಪ್ರಸಾದ್ ನಾಲ್ಕು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT