ಪಾದರಾಯ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

'ಪಾದರಾಯ' ಬಹುಭಾಷಾ ಸಿನಿಮಾಗೆ ಜೋಡಿಯಾದ ಚಕ್ರವರ್ತಿ ಚಂದ್ರಚೂಡ್ -ನಾಗಶೇಖರ್

ವಿಕ್ರಾಂತ್ ರೋಣ ನಿರ್ಮಾಪಕ, ಶಾಲಿನಿ ಆರ್ಟ್ಸ್‌ನ ಮಂಜುನಾಥ ಗೌಡ ಅವರು ಈ ಹಿಂದೆ ಕನ್ನಡದಲ್ಲಿ ಜನ್ಮ ಮತ್ತು ತಮಿಳಿನಲ್ಲಿ ತಂಬಿ ಊರುಕ್ಕು ಪುದುಸು ಚಿತ್ರ ಮಾಡಿದ್ದ ನಿರ್ದೇಶಕ ಚಕ್ರವರ್ತಿ ಚಂದ್ರುಚೂಡ್ ಅವರ ಮುಂದಿನ ಚಿತ್ರವನ್ನು ಬಂಡವಾಳ ಹೂಡಲಿದ್ದಾರೆ.

ವಿಕ್ರಾಂತ್ ರೋಣ ನಿರ್ಮಾಪಕ, ಶಾಲಿನಿ ಆರ್ಟ್ಸ್‌ನ ಮಂಜುನಾಥ ಗೌಡ ಅವರು ಈ ಹಿಂದೆ ಕನ್ನಡದಲ್ಲಿ ಜನ್ಮ ಮತ್ತು ತಮಿಳಿನಲ್ಲಿ ತಂಬಿ ಊರುಕ್ಕು ಪುದುಸು ಚಿತ್ರ ಮಾಡಿದ್ದ ನಿರ್ದೇಶಕ ಚಕ್ರವರ್ತಿ ಚಂದ್ರುಚೂಡ್ ಅವರ ಮುಂದಿನ ಚಿತ್ರವನ್ನು ಬಂಡವಾಳ ಹೂಡಲಿದ್ದಾರೆ.

ಬಿಗ್ ಬಾಸ್' ಖ್ಯಾತಿಯ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರು ಈಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಸಿನಿಮಾಗೆ 'ಪಾದರಾಯ' ಎಂದು ಟೈಟಲ್ ಇಡಲಾಗಿದೆ. ನಾಗಶೇಖರ್ 'ಪಾದರಾಯ' ಸಿನಿಮಾಗೆ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. 'ವಿಕ್ರಾಂತ್ ರೋಣ' ಸಿನಿಮಾ ಮಾಡಿದ್ದ ಜಾಕ್ ಮಂಜು ಮತ್ತು ನಾಗಶೇಖರ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಐದು ಭಾಷೆಗಳಲ್ಲಿ 'ಪಾದರಾಯ' ಸಿನಿಮಾ ತೆರೆಗೆ ಬರಲಿದೆ. ಇದು ನೈಜ ಘಟನೆ ಆಧಾರಿತ ಸಿನಿಮಾವಾಗಿದೆ,

ಚಿತ್ರವು 2013-2014ರ ನಡುವೆ ಅಯೋಧ್ಯೆಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದೆ. ಸ್ಕ್ರಿಪ್ಟ್ ಸಿದ್ಧವಾಗಿದೆ, ಮತ್ತು ನಾವು ಸಂಭಾಷಣೆಯ ಕೆಲಸ ಮಾಡುತ್ತಿದ್ದೇವೆ ಮತ್ತು ಚಿತ್ರಕಥೆ ಮತ್ತು ಇತರ ಸಿದ್ಧತೆಗಳು ಕೆಲಸದಲ್ಲಿವೆ. ನಾವು 2023 ರ ಜನವರಿಯಲ್ಲಿ ಕರ್ನಾಟಕದ ಅಂಜನಾದ್ರಿ ಬೆಟ್ಟಗಳಲ್ಲಿ ಯೋಜನೆ ಆರಂಭವಾಗಲಿದೆ.

ಪಾದರಾಯ' ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡುತ್ತಿದ್ದಾರೆ. ಸತ್ಯ ಹೆಗಡೆ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ತಮಿಳಿನ ಖ್ಯಾತ ಸಂಕಲನಕಾರ ಆಂಟನಿ ಅವರು 'ಪಾದರಾಯ' ಸಿನಿಮಾಗೆ ಸಂಕಲನ ಮಾಡುತ್ತಿರುವುದು ವಿಶೇಷ. ಸದ್ಯ ನಾಯಕಿ ಪಾತ್ರಕ್ಕೆ ನಟಿಯ ಹುಡುಕಾಟ ನಡೆಯುತ್ತಿದೆ. ನಮ್ಮ ಸಿನಿಮಾದಲ್ಲಿ ತುಂಬ ಸರ್ಪ್ರೈಸ್‌ ಇದೆ. ಮುಂದಿನ ದಿನಗಳಲ್ಲಿ ಅವೆಲ್ಲ ಬಹಿರಂಗವಾಗಲಿದೆ' ಎಂದು ಚಕ್ರವರ್ತಿ ಚಂದ್ರಚೂಡ್ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

SCROLL FOR NEXT