ಬೈರಾಗಿ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಬೈರಾಗಿ' ಚಿತ್ರ ಶಿವಣ್ಣ ಜನ್ಮ ದಿನದ ಅಡ್ವಾನ್ಸ್ ಉಡುಗೊರೆ: ನಿರ್ಮಾಪಕ ಕೃಷ್ಣ ಸಾರ್ಥಕ್

ಇದೇ ಜುಲೈ 1 ರಂದು ಬಿಡುಗಡೆಯಾಗಲಿರುವ ಶಿವರಾಜಕುಮಾರ್ ಅವರ ಬೈರಾಗಿ ಶಿವರಾಜ್ ಕುಮಾರ್ ಅವರ ಜನ್ಮ ದಿನದ ಅಡ್ವಾನ್ಸ್ ಉಡುಗೊರೆ ಎಂದು ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಹೇಳಿದ್ದಾರೆ.

ಬೆಂಗಳೂರು: ಇದೇ ಜುಲೈ 1 ರಂದು ಬಿಡುಗಡೆಯಾಗಲಿರುವ ಶಿವರಾಜಕುಮಾರ್ ಅವರ ಬೈರಾಗಿ ಶಿವರಾಜ್ ಕುಮಾರ್ ಅವರ ಜನ್ಮ ದಿನದ ಅಡ್ವಾನ್ಸ್ ಉಡುಗೊರೆ ಎಂದು ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್ ಹೇಳಿದ್ದಾರೆ.

ನಟ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ ಜುಲೈ 1ಕ್ಕೆ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಲಾಭದಲ್ಲಿದ್ದು, ಚಿತ್ರದ ಸ್ಯಾಟಲೈಟ್‌ ಹಕ್ಕುಗಳು 10 ಕೋಟಿ ರೂಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ. ಸದ್ಯಕ್ಕೆ ಈ ಸಿನಿಮಾ ಕನ್ನಡದಲ್ಲಷ್ಟೇ ಬಿಡುಗಡೆಯಾಗುತ್ತಿದ್ದು, ಇತರೆ ಭಾಷೆಗಳಿಂದಲೂ ಡಬ್ಬಿಂಗ್‌ಗೆ ಬೇಡಿಕೆ ಬಂದಿದೆ ಎಂದು ಚಿತ್ರದ ನಿರ್ಮಾಪಕ ಕೃಷ್ಣ ಸಾರ್ಥಕ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಎಸ್‌.ಡಿ. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರ ನಟ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾವಾಗಿದೆ. ಬೈರಾಗಿ ಸುತ್ತಲಿನ ಹೈಪ್ ಈಗಾಗಲೇ ಹೆಚ್ಚಾಗಿದ್ದು, ವಿಜಯ್ ಮಿಲ್ಟನ್ ನಿರ್ದೇಶನದ ಕಮರ್ಷಿಯಲ್ ಎಂಟರ್‌ಟೈನರ್ ಈಗಾಗಲೇ ಉತ್ತಮ ಪ್ರಿ-ರಿಲೀಸ್ ಬಿಸಿನೆಸ್ ಮಾಡಿದೆ ಎಂದು ನಿರ್ಮಾಪಕ ಕೃಷ್ಣ ಸಾರ್ಥಕ್ ಮಾಹಿತಿ ಹಂಚಿಕೊಂಡಿದ್ದಾರೆ. "ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳ ಮಾರಾಟದಿಂದ ಈಗಾಗಲೇ 10 ಕೋಟಿ ರೂ. ಸಂಗ್ರಹವಾಗಿದ್ದು, ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಕೂಡ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ಥಿಯೇಟರ್ ಮಾಲೀಕರಿಂದ ನನಗೆ ಸಿಗುತ್ತಿರುವ ಬೇಡಿಕೆಯು ಚಿತ್ರವು ದೊಡ್ಡ ಲಾಭವನ್ನು ಗಳಿಸುವತ್ತ ಗಮನಹರಿಸುತ್ತದೆ ”ಎಂದು ಮಾಧ್ಯಮ ಸಂವಾದದಲ್ಲಿ ನಿರ್ಮಾಪಕರು ಹೇಳಿದರು.

ಧನಂಜಯ್ ಮತ್ತು ಶಿವಣ್ಣ ಕಾಂಬಿನೇಷನ್ ಟಗರು  ಈ ಹಿಂದೆ ಭಾರಿ ಸಕ್ಸಸ್ ಕಂಡಿತ್ತು. ಬೈರಾಗಿ ಈ ಜೋಡಿಯ 2ನೇ ಚಿತ್ರವಾಗಿದ್ದು ತೆರೆ ಕಾಣಲು ಅಭಿಮಾನಿಗಳು ಕಾಯುತ್ತಿದ್ದಾರೆ. ಪೃಥ್ವಿ ಅಂಬರ್, ಅಂಜಲಿ ಮತ್ತು ಯಶಾ ಶಿವಕುಮಾರ್ ಕೂಡ ಈ ಚಿತ್ರ ನಟಿಸಿದ್ದಾರೆ. ಇದೇ ವೇಳೆ ಡಾ.ರಾಜ್‌ಕುಮಾರ್‌ ಅವರ ಹುಟ್ಟೂರಾದ ಚಾಮರಾಜನಗರದಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್‌ ಕಾರ್ಯಕ್ರಮ ಆಯೋಜಿಸಲಾಗಿದೆ. ಚಾಮರಾಜನಗರದಲ್ಲಿ ಡಾ. ರಾಜ್‌ಕುಮಾರ್ ಅವರ ಸಮ್ಮುಖದಲ್ಲಿ ಒಂದೇ ಒಂದು ಕಾರ್ಯಕ್ರಮ ನಡೆದಿದ್ದು, ಇದು ಎರಡನೇ ಅದ್ಧೂರಿ ಕಾರ್ಯಕ್ರಮವಾಗಲಿದೆ.

ಪ್ರೀ ರಿಲೀಸ್ ಈವೆಂಟ್ ನಡೆಸಲು ಚಾಮರಾಜನಗರದಲ್ಲಿ ವಾಸಿಸುವವರಿಂದ 1000 ಕ್ಕೂ ಹೆಚ್ಚು ಸಂದೇಶಗಳು ಬಂದಿವೆ ಮತ್ತು ಅವರ ಕೋರಿಕೆಯ ಮೇರೆಗೆ ನಾನು ಹೋಗುತ್ತಿದ್ದೇನೆ ಎಂದು ನಿರ್ಮಾಪಕ ಕೃಷ್ಣ ಹೇಳಿದ್ದಾರೆ. ಇದಕ್ಕಾಗಿ ವಿಶೇಷ ರೋಡ್‌ಶೋ ಅನ್ನು ಸಹ ಯೋಜಿಸಿದ್ದಾರೆ, ಇದು ಬೆಂಗಳೂರಿನಲ್ಲಿ ಪ್ರಾರಂಭವಾಗಿ ಚಾಮರಾಜನಗರದಲ್ಲಿ ಕೊನೆಗೊಳ್ಳುತ್ತದೆ. "ನಾವು ಸಾಮಾನ್ಯ ಬೆಲ್ಟ್ ಅನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಹಾಗಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರದೇಶವನ್ನು ಕವರ್ ಮಾಡಲು ನಾವು ಯೋಜಿಸಿದ್ದೇವೆ ಮತ್ತು ಬಿಡದಿ, ಮದ್ದೂರು, ಮಂಡ್ಯ ಮತ್ತು ಮೈಸೂರಿನಲ್ಲಿ ಶಿವಣ್ಣ ಮತ್ತು ತಂಡವು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಪ್ರೀ ರಿಲೀಸ್ ಕಾರ್ಯಕ್ರಮಕ್ಕೂ ಮುನ್ನ ಶಿವಣ್ಣ ಅವರ ಪೂರ್ವಿಕರ ಮನೆಯಾದ ಗಾಜನೂರಿಗೆ ಹೋಗುವ ಪ್ಲಾನ್ ಕೂಡ ಇದೆ’ ಎಂದು ಅವರು ಹೇಳಿದರು.

ಜಗದೀಶ್ ಫಿಲಂಸ್ ಅಡಿಯಲ್ಲಿ ಚಿತ್ರವನ್ನು ವಿತರಿಸುತ್ತಿರುವ ಕೃಷ್ಣ ಸಾರ್ಥಕ್, ಜುಲೈ 12 ರಂದು ನಟನ 60 ನೇ ಹುಟ್ಟುಹಬ್ಬದ ಮೊದಲು ಶಿವಣ್ಣನಿಗೆ ಬೈರಾಗಿ ಉಡುಗೊರೆಯಾಗಿದೆ ಎಂದು ಹೇಳಿದರು. ಅನೂಪ್ ಸೀಳಿನ್ ಅವರ ಸಂಗೀತದೊಂದಿಗೆ ವಿಜಯ್ ಮಿಲ್ಟನ್ ಛಾಯಾಗ್ರಾಹಣ ಚಿತ್ರಕ್ಕಿದೆ.  
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT