ಮೇಘಾಶೆಟ್ಟಿ 
ಸಿನಿಮಾ ಸುದ್ದಿ

ನನ್ನ ಟಿವಿ ಧಾರಾವಾಹಿಯಲ್ಲಿನ ಅನುಭವ ಸಿನಿಮಾ ಕೆರಿಯರ್ ಗೆ ಅನುಕೂಲವಾಯಿತು: ನಟಿ ಮೇಘಾ ಶೆಟ್ಟಿ

ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲ್ಲಿ'  ಮೂಲಕ ನಾಡಿನಾದ್ಯಂತ ಚಿರಪರಿಚಿತವಾಗಿರುವ ನಟಿ ಮೇಘಾ ಶೆಟ್ಟಿ, ಧಾರಾವಾಹಿ ಕೆಲಸ ಮುಂದುವರಿಕೆ ಜೊತೆಗೆ, ಬೆಳ್ಳಿ ಪರದೆ ಮೇಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಜನಪ್ರಿಯ ಧಾರಾವಾಹಿ 'ಜೊತೆ ಜೊತೆಯಲ್ಲಿ'  ಮೂಲಕ ನಾಡಿನಾದ್ಯಂತ ಚಿರಪರಿಚಿತವಾಗಿರುವ ನಟಿ ಮೇಘಾ ಶೆಟ್ಟಿ, ಧಾರಾವಾಹಿ ಕೆಲಸ ಮುಂದುವರಿಕೆ ಜೊತೆಗೆ, ಬೆಳ್ಳಿ ಪರದೆ ಮೇಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ನಾಲ್ಕು ಚಿತ್ರಗಳ ಚಿತ್ರೀಕರಣ ಮುಗಿಸಿರುವ ಅವರು, ಶಿವ ತೇಜಸ್ ನಿರ್ದೇಶನದ, ಸುಮಂತ್ ಕ್ರಾಂತಿ ನಿರ್ಮಾಣದ 'ದಿಲ್ ಪಸಂದ್ ' ರಿಲೀಸ್ ಸಜ್ಜಾಗಿದ್ದು, ಸಖತ್ ಎಕ್ಸ್ಟೈಟ್ ಆಗಿದ್ದಾರೆ. ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಅವರಿಗೆ ಮೇಘಾ ನಾಯಕಿಯಾಗಿದ್ದಾರೆ. ನಿಶ್ವಿತಾ ನಾಯ್ಡು ಮತ್ತಿತರರು ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ. 

ಕಿರುತೆರೆಯಿಂದ ಕಲಿತದ್ದು, ತನ್ನ ಸಿನಿಮಾ ಕೆರಿಯರ್ ಗೆ ಅನುಕೂಲವಾಗಿದೆ. ತಂದೆ, ಅಜ್ಜಿ ರಂಗಕರ್ಮಿಗಳು, ಕಲೆ ಅನುವಂಶಿಕವಾಗಿ ಬಂದಿದೆ ಅನ್ನಿಸುತ್ತಿದೆ. ಆದಾಗ್ಯೂ, ಅಭಿನಯದ ಹಿನ್ನೆಲೆ ಇಲ್ಲದವರು ಕೂಡಾ ಕಲಿಯಲು ಧಾರವಾಹಿ ಉತ್ತಮ ವೇದಿಕೆಯಾಗಿದೆ. ಒಂದು ಸಿನಿಮಾದಲ್ಲಿ ನನ್ನ ಅಭಿನಯ ಚೆನ್ನಾಗಿದೆ ಅಂತಾ ಪ್ರೇಕ್ಷಕರು ಗುರುತಿಸಿದರೆ ಅದಕ್ಕೆ ನನ್ನ ಧಾರವಾಹಿಯಲ್ಲಿನ ಅನುಭವ ಕಾರಣ ಎನ್ನುತ್ತಾರೆ ಮೇಘಾ ಶೆಟ್ಟಿ.

ಸಿನಿಮಾ ಚಿತ್ರೀಕರಣಕ್ಕೆ ಹೋದಾಗ ಅನುಭವ ಭಿನ್ನವಾಗಿತ್ತು. ವಿಭಿನ್ನ ವಾತವಾರಣದೊಂದಿಗೆ ದೊಡ್ಡ ತಂಡವೇ ಅಲ್ಲಿತ್ತು. ಅಲ್ಲಿ ಯಾರೂ ನನಗೆ ಪರಿಚಿತರು ಇರಲಿಲ್ಲ.ಆರಂಭದಲ್ಲಿ ಇಂತಹ ಪರಿಸ್ಥಿತಿ ಎದುರಿಸುವುದು ಕಷ್ಟವಾಗಿತ್ತು. ಆದರೆ, 
ನಾನು ಕಂಪರ್ಟ್ ಆಗಿ ನಟಿಸಲು ಸಹಕರಿಸಿದ ಎಲ್ಲ ನಟರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು. 

ನಿಶ್ವಿತಾ ನಾಯ್ಡು, ಡಾರ್ಲಿಂಗ್ ಕೃಷ್ಣ

ಮನೋರಂಜನಾತ್ಮಕ ಕೇಂದ್ರೀತ ಪ್ರಮುಖ ಪಾತ್ರಗಳನ್ನು ನಿರ್ವಹಿಸಲು ಬಯಸುವ ಮೇಘಾ ಶೆಟ್ಟಿ, ದಿಲ್ ಪಸಂದ್ ಚಿತ್ರದಲ್ಲಿ ಎರಡು ರೀತಿಯಲ್ಲಿ ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಸಂಪ್ರದಾಯಸ್ಥ ಮಿಂಚುವನ್ನು ಪರಿಸ್ಥಿತಿ ಆಧುನಿಕತೆಯತ್ತ ಹೊರಳುವಂತೆ ಮಾಡುತ್ತದೆ. ಇದು ಹಾಸ್ಯ ಮಿಶ್ರಿತ ಪ್ಯಾಮಿಲಿ ಎಂಟರ್ ಟೈನರ್ ಚಿತ್ರವಾಗಿದ್ದು, ಎಲ್ಲಾ  ಪ್ರೇಕ್ಷಕರನ್ನು ಸೆಳೆಯುವ ದಿಲ್ ಪಸಂದ್ ಆಗಲಿದೆ ಎಂದರು.

ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ಅರಣ್ಯದಲ್ಲೂ ಶೂಟಿಂಗ್  ನಡೆಸಿರುವ ಮೇಘಾ ಶೆಟ್ಟಿ, ಆ ಧಾರವಾಹಿಯೊಂದಿಗೆ ಭಾವನಾತ್ಮಾಕ ಸಂಬಂಧವಿದೆ. ಎಲ್ಲವನ್ನು ಜವಾಬ್ದಾರಿಯನ್ನಾಗಿ ತೆಗೆದುಕೊಂಡು ಪ್ರೀತಿಯಿಂದ ಮಾಡುತ್ತೇನೆ. ಪ್ರಸ್ತುತ ಕೆಲಸದಲ್ಲಿ ಎಂಜಾಯ್ ಮಾಡುತ್ತಿರುವುದಾಗಿ ಅವರು ತಿಳಿಸಿದರು. 

ಮಹೇಶ್ ಗೌಡ ನಿರ್ದೇಶನದ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಗಣೇಶ್ ಜೊತೆಗೆ ಅಭಿನಯಿಸುತ್ತಿರುವ ಮೇಘಾ ಶೆಟ್ಟಿ, ಕೈವಾ, ಆಫರೇಷನ್ ಲಂಡನ್ ಕೆಫೆ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾಗಳನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೋ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT