ಪ್ರಕಾಶ್ ರಾಜ್ 
ಸಿನಿಮಾ ಸುದ್ದಿ

ನನ್ನ ರಾಜಕೀಯ ನಿಲುವುಗಳಿಂದ ವೃತ್ತಿ ಜೀವನದ ಮೇಲೆ ಎಫೆಕ್ಟ್; ಕೆಲವರಿಗೆ ನನ್ನ ಜೊತೆ ಕೆಲಸ ಮಾಡಲು ಇಷ್ಟವಿಲ್ಲ: ಪ್ರಕಾಶ್ ರಾಜ್

ಬಹುಭಾಷಾ ನಟ ಪ್ರಕಾಶ್ ರಾಜ್‌ ಕರಿಯರ್‌ ಈಗ ಮೊದಲಿನಂತೆ ಇಲ್ಲ. ಅವರ ರಾಜಕೀಯ ನಿಲುವುಗಳು, ಅವರ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿವೆ. ಸ್ವತಃ ಅದನ್ನು ಪ್ರಕಾಶ್ ಹೇಳಿಕೊಂಡಿದ್ದಾರೆ

ಬಹುಭಾಷಾ ನಟ ಪ್ರಕಾಶ್ ರಾಜ್‌ ಕರಿಯರ್‌ ಈಗ ಮೊದಲಿನಂತೆ ಇಲ್ಲ. ಅವರ ರಾಜಕೀಯ ನಿಲುವುಗಳು, ಅವರ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿವೆ. ಸ್ವತಃ ಅದನ್ನು ಪ್ರಕಾಶ್ ಹೇಳಿಕೊಂಡಿದ್ದಾರೆ.

ಸಹ ಕಲಾವಿದರು ತನ್ನೊಂದಿಗೆ ನಟಿಸಲು ಭಯಪಡುತ್ತಾರೆ ಎಂದು ನಟ ಪ್ರಕಾಶ್​ ರಾಜ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ತನ್ನ ರಾಜಕೀಯ ದೃಷ್ಟಿಕೋನವೇ ಇದಕ್ಕೆ ಕಾರಣ. ಆದರೆ ನಾನು ಯಾವುದಕ್ಕೂ ಚಿಂತಿಸುವುದಿಲ್ಲ ಎಂದಿದ್ದಾರೆ.

ನನ್ನ ಜೊತೆ ನಟಿಸಿದರೆ ಅಪಾಯದಲ್ಲಿ ಸಿಲುಕಬೇಕಾಗುತ್ತದೆ ಎಂಬುದು ಕೆಲ ಕಲಾವಿದರ ಆತಂಕವಾಗಿದೆ. ನಾನು ಅವರ ಅಸೌಖ್ಯವನ್ನು ಅರ್ಥ ಮಾಡಿಕೊಳ್ಳಬಲ್ಲೆ ಮತ್ತು ನನ್ನ ಜೊತೆ ನಟಿಸುವುದರಿಂದ ಅಂತರ ಕಾಯ್ದುಕೊಂಡರೂ ನಾನು ಪಶ್ಚಾತ್ತಾಪ ಪಡುವುದಿಲ್ಲ ಎಂದು ಪ್ರಕಾಶ್​ ರಾಜ್​ ತಿಳಿಸಿದ್ದಾರೆ.

ತಮ್ಮನ್ನು ತಾವು ಸಮರ್ಥಿಸಿಕೊಂಡ ಪ್ರಕಾಶ್ ರಾಜ್, ರಾಜಕೀಯದ ಬಗ್ಗೆ ಮಾತನಾಡುವುದನ್ನು ಮುಂದುವರಿಸುತ್ತೇನೆ. ನಾನು ನಂಬಿರುವ ಸಿದ್ಧಾಂತಗಳಿಂದ ನಾನು ಹಿಂದೆ ಸರಿದರೆ, ಅದು ಇತರರಿಗೆ ಲಾಭವಾಗುತ್ತದೆ. ಹೀಗಾಗಿ ಅದು ಸಂಭವಿಸುವುದನ್ನು ನಾನು ಬಯಸುವುದಿಲ್ಲ. ಇತರೆ ನಟರ ವಿರುದ್ಧ ನಾನು ಯಾವುದೇ ದ್ವೇಷವನ್ನು ಹೊಂದಿಲ್ಲ ಎಂದರು.

ನಾನು ಈ ಬಗ್ಗೆ ವಿಷಾದಿಸುವುದಿಲ್ಲ. ಏಕೆಂದರೆ ನನ್ನ ಪರಂಪರೆಯು ನನ್ನ ತೆರೆಯ ಮೇಲಿನ ಕೆಲಸಕ್ಕಿಂತ ಹೆಚ್ಚಾಗಿರಬೇಕು ಎಂದು ಬಯಸುತ್ತೇನೆ. ಈಗ ನನಗೆ ಯಾರು ಯಾರೆಂದು ತಿಳಿದಿದೆ. ನಾನು ಹೆಚ್ಚು ವಿಮೋಚನೆ ಹೊಂದಿದ್ದೇನೆ. ನಾನು ನನ್ನ ಧ್ವನಿಯನ್ನು ಎತ್ತದಿದ್ದರೆ, ನನ್ನ ಪಾತ್ರಗಳಿಂದಾಗಿ ಮಾತ್ರ ನಾನು ಉತ್ತಮ ನಟ ಎಂದು ಗುರುತಿಸಲ್ಪಡುತ್ತಿದ್ದೆ. ಆಗ ನನ್ನ ವ್ಯಕ್ತಿತ್ವ ಜನರಿಗೆ ಗೊತ್ತಾಗುತ್ತಿರಲಿಲ್ಲ. ಹೀಗೆ ಮಾಡುವುದರಿಂದ ಖರ್ಚು ಬರುತ್ತದೆ. ಆದರೆ ನಾನು ಅದನ್ನು ನಿಭಾಯಿಸಬಲ್ಲೆ..' ಎಂದಿದ್ದಾರೆ ನಟ ಪ್ರಕಾಶ್ ರಾಜ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT