ನಟ ಪ್ರಜ್ವಲ್ ದೇವ್ ರಾಜ್ 
ಸಿನಿಮಾ ಸುದ್ದಿ

ಪ್ರಜ್ವಲ್ ದೇವ್ ರಾಜ್ ಮುಂದಿನ ಸಿನಿಮಾದಲ್ಲಿ ಸಂದೇಶಗಳಿಲ್ಲ, ಮನರಂಜನೆಯದ್ದೇ "ಅಬ್ಬರ"!

ಪ್ರಜ್ವಲ್ ದೇವರಾಜ್ ಅವರ ಹೊಸ ಸಿನಿಮಾ ಬಗ್ಗೆ ದೀರ್ಘಾವಧಿಯಿಂದ ಹೆಚ್ಚು ನಿರೀಕ್ಷೆಗಳಿವೆ. ಪ್ಯಾಂಡಮಿಕ್ ಅವಧಿಯಲ್ಲೇ ಪೂರ್ಣಗೊಂಡಿದ್ದ, ರಾಮ್ ನಾರಾಯಣ್ ಅವರ ನಿರ್ದೇಶನದ ಸಿನಿಮಾ ಅಬ್ಬರ ನ.18 ರಂದು ತೆರೆ ಕಾಣುತ್ತಿದೆ.

ಬೆಂಗಳೂರು: ಪ್ರಜ್ವಲ್ ದೇವರಾಜ್ ಅವರ ಹೊಸ ಸಿನಿಮಾ ಬಗ್ಗೆ ದೀರ್ಘಾವಧಿಯಿಂದ ಹೆಚ್ಚು ನಿರೀಕ್ಷೆಗಳಿವೆ. ಪ್ಯಾಂಡಮಿಕ್ ಅವಧಿಯಲ್ಲೇ ಪೂರ್ಣಗೊಂಡಿದ್ದ, ರಾಮ್ ನಾರಾಯಣ್ ಅವರ ನಿರ್ದೇಶನದ ಅಬ್ಬರ ಸಿನಿಮಾ ಪಟ್ಟಣ ಹಾಗೂ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಇಷ್ಟವಾಗುವ ರೀತಿಯಲ್ಲಿರಲಿದೆ ಎನ್ನುತ್ತಾರೆ ಪ್ರಜ್ವಲ್ ದೇವರಾಜ್.

ಬಹಳ ಹಿಂದೆಯೇ ಸಿನಿಮಾ ಡಬ್ಬಿಂಗ್ ಭಾಗವೂ ಮುಕ್ತಾಯಗೊಂಡಿದ್ದು, ಬಾಕಿ ಉಳಿದಿದ್ದ ಹಾಡಿನ ಭಾಗಷ್ಟೇ ಇತ್ತೀಚೆಗೆ ಪೂರ್ಣಗೊಳಿಸಲಾಗಿದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ. 

ನ.18 ರಂದು ಸಿನಿಮಾ ಬಿಡುಗಡೆಗೆ ಸಜ್ಜುಗೊಂಡಿದ್ದು, ಯಾವುದೇ ಉದ್ದೇಶಿತ ಸಂದೇಶಗಳಿಲ್ಲದ ಅಪ್ಪಟ ಮನರಂಜನೆಯ ಚಿತ್ರ ಎಂದು ಪ್ರಜ್ವಲ್ ಅಭಿಪ್ರಾಯಪಟ್ಟಿದ್ದು, ಪೂರ್ವಗ್ರಹಿಕೆಗಳಿಲ್ಲದೇ ಸೀದಾ ಥಿಯೇಟರ್ ಗಳಿಗೆ ಬಂದು ಸಿನಿಮಾವನ್ನು ಆನಂದಿಸುವಂತಹ ಚಿತ್ರ ಇದಾಗಿದೆ, ಈ ರೀತಿಯ ಸಿನಿಮಾ ಮಾಡಿ ಹಲವು ವರ್ಷಗಳಾಗಿತ್ತು.   ವಿಷಯ-ಆಧಾರಿತ ಕಥೆಗಳು ಮತ್ತು ಹೊಸ ರೀತಿಯ ಕಥೆಗಳ ನಡುವೆ, ಈ ರೀತಿಯ ಸಿನಿಮಾಗಳನ್ನೂ ಜನ ಮೆಚ್ಚುತ್ತಾರೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಪ್ರಜ್ವಲ್. 

ಅಬ್ಬರ ಸೇಡಿನ ಕಥೆಯಾಗಿದ್ದು, ಅದಕ್ಕೆ ಹಾಸ್ಯದ ಮತ್ತೊಂದು ಮುಖವೂ ಇದೆ. ಕಥೆಯಲ್ಲಿ ಸಾಹಸಮಯ ದೃಶ್ಯಗಳಿದ್ದು, ರವಿಶಂಕರ್, ಶೋಭ್ ರಾಜ್ ಅವರಂತಹ ವಿಲ್ಲನ್ ಪಾತ್ರಧಾರಿಗಳಿದ್ದರೂ ಅವರನ್ನು ನಕಾರಾತ್ಮಕ ಪಾತ್ರಗಳಲ್ಲಿ ತೋರಿಸಿಲ್ಲ. 

ಗೋವಿಂದ ಗೌಡ ಹಾಗೂ ವಿಜಯ್ ಚೆಂಡೂರ್ ಅವರ ಹಾಸ್ಯವನ್ನು ಮಕ್ಕಳು ಇಷ್ಟಪಡುತ್ತಾರೆ ಎಂದು ಪ್ರಜ್ವಲ್ ಹೇಳಿದ್ದಾರೆ. 

ನಾನು ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಹಲವು ತಿರುವುಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ನನ್ನದು ಬಹುತೇಕ ತ್ರಿಪಾತ್ರಾಭಿನಯವಾಗಿದೆ ರಾಜ್ ಶ್ರೀ ಪೊನ್ನಪ್ಪ, ಲೇಖಾ ಚಂದ್ರ ಹಾಗೂ ನಿಮಿಕಾ ರತ್ನಾಕರ್ ಅವರು ನಾಯಕರಿಯರ ಪಾತ್ರದಲ್ಲಿ ನಟಿಸಿದ್ದಾರೆ. ಅಬ್ಬರ ಸಿನಿಮಾವನ್ನು ಸಿ&ಎಂ ಮೂವಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು ರವಿ ಬಸ್ರೂರ್ ಹಾಗೂ ಜೆಕೆ ಗಣೇಶ್ ಅವರ ಸಿನಿಮೆಟೋಗ್ರಾಫಿ ಹೊಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT