ನಯನಾ 
ಸಿನಿಮಾ ಸುದ್ದಿ

ಮಗನೇ, ನಿನಗಿದು ಲಾಸ್ಟ್ ಕಾಲ್, ಹೇಗ್​​ ಓಡಾಡ್ತೀಯ ನೋಡ್ತೀನಿ: ಆ ನನ್ನ ಮಗನ ಚಪ್ ಚಪ್ಲಿಲಿ ಹೊಡಿಬೇಕು! ಕಾಮಿಡಿ ಕಿಲಾಡಿ ನಯನಾ ಆವಾಜ್!

ಜೀವ ಬೆದರಿಕೆ ಮತ್ತು ನಿಂದನೆ ಆರೋಪದ ಮೇಲೆ ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ ದೂರು ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ಬೆದರಿಕೆ ಹಾಕಿರೋ ಆರೋಪ ಮಾಡಲಾಗಿದ್ದುಕಾಮಿಡಿ ಕಿಲಾಡಿ ಗ್ಯಾಂಗ್ಸ್​ನಲ್ಲಿ ನಟಿಸಿದ್ದ ಸೋಮಶೇಖರ್  ದೂರು ನೀಡಿದ್ಧಾರೆ.

ಬೆಂಗಳೂರು : ಜೀವ ಬೆದರಿಕೆ ಮತ್ತು ನಿಂದನೆ ಆರೋಪದ ಮೇಲೆ ಕಾಮಿಡಿ ಕಿಲಾಡಿ ನಟಿ ನಯನಾ ವಿರುದ್ಧ ದೂರು ದಾಖಲಾಗಿದೆ. ಹಣದ ಹಂಚಿಕೆ ವಿಚಾರಕ್ಕೆ ಬೆದರಿಕೆ ಹಾಕಿರೋ ಆರೋಪ ಮಾಡಲಾಗಿದ್ದುಕಾಮಿಡಿ ಕಿಲಾಡಿ ಗ್ಯಾಂಗ್ಸ್​ನಲ್ಲಿ ನಟಿಸಿದ್ದ ಸೋಮಶೇಖರ್  ದೂರು ನೀಡಿದ್ಧಾರೆ.

ಖಾಸಗಿ ಚಾನಲ್​​ನಲ್ಲಿ  ಕಾಮಿಡಿ ಕಿಲಾಡಿ ಗ್ಯಾಂಗ್ಸ್​ ಪ್ರಸಾರವಾಗಿದ್ದು, ದ್ವಿತೀಯ ಬಹುಮಾನ ಪಡೆದಿದ್ದ PUC ಟೀಂಗೆ 3 ಲಕ್ಷ ಹಣ ಬಂದಿತ್ತು, ಅದ್ರಲ್ಲಿ ಶೇ. 30ರಷ್ಟು ಕಟ್​ ಆಗಿ ಪ್ರತಿಯೊಬ್ಬರಿಗೆ 70 ಸಾವಿರ ಬಂದಿತ್ತು, PUC ಟೀಂನಲ್ಲಿ ಸೋಮಶೇಖರ್‌ ಸೇರಿ ಇನ್ನೂ ಮೂವರು ನಟಿಸಿದ್ದರು.

ಜ್ಯೂನಿಯರ್​ ಆರ್ಟಿಸ್ಟ್​ಗಳಿಗೆ ಅಂತಾ ಮೂವರಿಗೆ ಹಣ, ಟೀಂನ ಮತ್ತಿಬ್ಬರು ಸೀನಿಯರ್ಸ್​ ಅನೀಶ್​, ಚಿದಾನಂದ್​ಗೆ ತಿಂಗಳ ಪೇಮೆಂಟ್​ ನೀಡಲಾಗಿದೆ. ಇಬ್ಬರು ಸೀನಿಯರ್​ಗಳಿಗೆ ಹಣ ನೀಡಲು ನಯನಾ ಅವಾಜ್‌ ಹಾಕಿದ್ಧಾರೆ.

ಮೂವರಿಗೆ ಜೂನಿಯರ್ ಆರ್ಟಿಸ್ಟ್​ ಅಂತಾನೆ ಹಣ ನೀಡಲಾಗುತ್ತದೆ. ಆ ತಂಡದಲ್ಲಿ ಇನ್ನೂ ಇಬ್ಬರು ಸೀನಿಯರ್​ಗಳಿಗೆ ತಿಂಗಳ ಸಂಬಳ ಇರ್ತಿತ್ತು. ಅನೀಶ್ ಮತ್ತು ಚಿದಾನಂದ್ PUC ತಂಡದಲ್ಲಿ ಸೀನಿಯರ್​ಗಳಾಗಿದ್ದರು. ಇಬ್ಬರು ಸೀನಿಯರ್​ಗಳಿಗೆ ಹಣ ನೀಡುವಂತೆ ಇದೀಗ ನಯನಾ ಅವಾಜ್‌ ಹಾಕಿದ್ದಾರೆ.

ಚಪ್ ಚಪ್ಲಿಲಿ ಹೊಡಿಬೇಕು ಬೋ….ಮಗ ಎಂದೆಲ್ಲ ಬೈದಿದ್ದಾರೆ. ನೀನು ಹಣ ಕೊಟ್ರೆ ಸರಿ, ಇಲ್ಲ ಅಂದ್ರೆ ಸರಿ ಇರಲ್ಲ. ನೀನು ಹಣ ಕೊಟ್ಟಿಲ್ಲ ಅಂದ್ರೆ ನಾವು ಏನು ಮಾಡೋಕು ಯೋಚಿಸಲ್ಲ. ಮುಂದಿನ ಬಾರಿ ನಿನ್ನನ್ನು ಪೊಲೀಸರು ಬಂದು ಅರೆಸ್ಟ್ ಮಾಡ್ತಾರೆ. ನಾನು ಸ್ಟೇಷನ್​ನಲ್ಲೇ ಇದೀನಿ ಎಂದು ನಯನಾ ಅವಾಜ್​ ಹಾಕಿರುವ ಆಡಿಯೋ ವೈರಲ್​ ಆಗಿದೆ.

ನಯನಾ‌ ಏನೂ ಅಂತ ನಿನಗೆ ಗೊತ್ತಿಲ್ಲ ಮಗನೆ , ನಿನಗಿದು ಲಾಸ್ಟ್ ಕಾಲ್, ಬೆಂಗಳೂರಲ್ಲಿ ಹೇಗ್​​ ಓಡಾಡ್ತೀಯ ನೋಡ್ತೀನಿ, ನಟಿ ನಯನಾ ರೌಡಿಗಳ ರೀತಿ ಅವಾಜ್ ಹಾಕಿದ್ಧಾರೆ.  ನಯನಾ ಹಣದ ವಿಚಾರಕ್ಕೆ ಕೆಳ ಮಟ್ಟಕ್ಕೆ ಇಳಿದಿದ್ಧಾರೆ.ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿ ಆರ್ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT