ಗಂಧದ ಗುಡಿ ಟ್ರೈಲರ್ 
ಸಿನಿಮಾ ಸುದ್ದಿ

ಅಪ್ಪು ಡ್ರೀಮ್ ಪ್ರಾಜೆಕ್ಟ್ 'ಗಂಧದ ಗುಡಿ' ಟ್ರೈಲರ್ ಬಿಡುಗಡೆ, ಪ್ರಧಾನಿ ಮೋದಿ ಪ್ರಶಂಸೆ

ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಾಕ್ಷ್ಯಚಿತ್ರ 'ಗಂಧದ ಗುಡಿ' ಟ್ರೈಲರ್ ಇಂದು ಬಿಡುಗಡೆಯಾಗಿದೆ. ಅಪ್ಪು ಡ್ರೀಮ್ ಪ್ರಾಜೆಕ್ಟ್ ನಲ್ಲಿ ನಾಡಿನ ಅದ್ಬುತ ಪ್ರಕೃತಿ ಸಂಪತ್ತನ್ನು ಸೆರೆಹಿಡಿಯಲಾಗಿದೆ.

ದಿವಂಗತ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಾಕ್ಷ್ಯಚಿತ್ರ 'ಗಂಧದ ಗುಡಿ' ಟ್ರೈಲರ್ ಇಂದು ಬಿಡುಗಡೆಯಾಗಿದೆ. ಅಪ್ಪು ಡ್ರೀಮ್ ಪ್ರಾಜೆಕ್ಟ್ ನಲ್ಲಿ ನಾಡಿನ ಅದ್ಬುತ ಪ್ರಕೃತಿ ಸಂಪತ್ತನ್ನು ಸೆರೆಹಿಡಿಯಲಾಗಿದೆ.

2 ನಿಮಿಷ 39 ಸೆಕೆಂಡ್ ಗಳ ಟ್ರೈಲರ್ ನಲ್ಲಿ ನಾಡಿನ ಅರಣ್ಯ, ಜಲ ಹಾಗೂ ವನ್ಯ ಸಂಪತ್ತನ್ನು ತೋರಿಸಲಾಗಿದೆ.ಟ್ರೈಲರ್ ನಲ್ಲಿ ತಮ್ಮ ನೆಚ್ಚಿನ ನಟನನ್ನು ಅಪ್ಪು ಅಭಿಮಾನಿಗಳು ಕಣ್ತುಂಬಿಕೊಂಡು, ಸಂತೋಷ ಪಡುತ್ತಿದ್ದಾರೆ.

ಯೂ ಟ್ಯೂಬ್ ನಲ್ಲಿ ಬಿಡುಗಡೆಯಾದ ತುಸು ಸಮಯದಲ್ಲಿಯೇ 4 ಲಕ್ಷ 36 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ.  6 ಸಾವಿರದ 365 ಕಾಮೆಂಟ್ ಗಳು ಬಂದಿವೆ. ಗಂಧದ ಗುಡಿ ಟೀಸರ್ ನೋಡಿ ಖುಷಿಯಾದ ಅಭಿಮಾನಿಗಳು ಇಂಥ ಹೊತ್ತಿನಲ್ಲಿ ಪುನೀತ್ ಇಲ್ಲದಿರುವುದಕ್ಕೆ ಮಮ್ಮಲ ಮರುಗುತ್ತಿದ್ದಾರೆ.

ಗಂಧದ ಗುಡಿ ಸಂಪೂರ್ಣ ಕಾಡಿನಲ್ಲಿಯೇ ಚಿತ್ರೀಕರಣವಾಗಿದೆ. ಇದರ ಟೀಸರ್ ದೃಶ್ಯಗಳು, ಬೆಳಕಿನ ಸಂಯೋಜನೆ, ಹಿನ್ನಲೆ ಸಂಗೀತ ಅನನ್ಯವಾಗಿದೆ. ಪುನೀತ್ ತಾವೇ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮತ್ತೆಮತ್ತೆ ವೀಕ್ಷಿಸಬೇಕೆನ್ನಿಸುವ ರೀತಿಯಲ್ಲಿ ಟೀಸರ್ ಇರುವುದು ಗಮನಾರ್ಹ. ಮೇಕಿಂಗ್ ನಲ್ಲಿ ಗಮನಾರ್ಹ ಪಾತ್ರ ವಹಿಸಿರುವ ಅಮೋಘವರ್ಷ ಅವರ ಪರಿಶ್ರಮ  ಎದ್ದುಕಾಣುತ್ತಿದೆ.

ಗಂಧದ ಗುಡಿ ಟ್ರೈಲರ್ ಗೆ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್ ಕುಮಾರ್ ವಿಶ್ವದಾದ್ಯಂತ ಲಕ್ಷಾಂತರ ಮಂದಿಯ ಹೃದಯದಲ್ಲಿದ್ದಾರೆ. ಅವರೊಬ್ಬ ಪ್ರತಿಭಾವಂತ, ತೇಜಸ್ಸಿನ ವ್ಯಕ್ತಿಯಾಗಿದ್ದರು.  ಗಂಧದ ಗುಡಿ ಪ್ರಕೃತಿ ಮಾತೆ, ಕರ್ನೌಟಕ ನೈಸರ್ಗಿಕ ಸೌಂದರ್ಯಕ್ಕೆ ಗೌರವವಾಗಿದೆ. ಅವರ ಪ್ರಯತ್ನಕ್ಕೆ ಶುಭಾಶಯ ಎಂದು ಟ್ವೀಟ್ ಮಾಡಿದ್ದಾರೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಣದ ಈ ಸಾಕ್ಷ್ಯಚಿತ್ರವನ್ನು ಅಮೋಘ ವರ್ಷ ನಿರ್ದೇಶಿಸಿದ್ದಾರೆ. ಇದೇ ತಿಂಗಳ 28 ರಂದು ಈ ಸಾಕ್ಷ್ಯಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT