ನಿಶ್ವಿಕಾ ನಾಯ್ಡು 
ಸಿನಿಮಾ ಸುದ್ದಿ

ಗುರು ಶಿಷ್ಯರು ಕನ್ನಡ ಚಿತ್ರರಂಗದಲ್ಲಿ ಹೆಗ್ಗುರುತು ಮೂಡಿಸಲಿದೆ: ನಿಶ್ವಿಕಾ ನಾಯ್ಡು

ಸ್ಯಾಂಡಲ್ವುಡ್ ನಟಿ ನಿಶ್ವಿಕಾ ನಾಯ್ಡು ಅವರು ಇತ್ತೀಚೆಗೆ ಮನಸ್ಸಿನಲ್ಲಿ ನಿಲ್ಲುವಂಥ ನಿಲ್ಲುವ ಪಾತ್ರಗಳನ್ನು ಮಾಡುವತ್ತ ಗಮನಹರಿಸಿದ್ದಾರೆ. ತನ್ನ ಮುಂಬರುವ ಗುರು ಶಿಷ್ಯರು ಚಿತ್ರದಲ್ಲಿ ಮೊದಲ ಬಾರಿಗೆ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ.

ಸ್ಯಾಂಡಲ್ವುಡ್ ನಟಿ ನಿಶ್ವಿಕಾ ನಾಯ್ಡು ಅವರು ಇತ್ತೀಚೆಗೆ ಮನಸ್ಸಿನಲ್ಲಿ ನಿಲ್ಲುವಂಥ ಪಾತ್ರಗಳನ್ನು ಮಾಡುವತ್ತ ಗಮನಹರಿಸಿದ್ದಾರೆ. ತನ್ನ ಮುಂಬರುವ ಗುರು ಶಿಷ್ಯರು ಚಿತ್ರದಲ್ಲಿ ಮೊದಲ ಬಾರಿಗೆ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನು ನಟಿ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಾಗದ ಪಾತ್ರ ಎಂದು ಹೇಳಿದ್ದಾರೆ.

"ನಾನು ನನ್ನ ವೃತ್ತಿಜೀವನದ ಒಂದು ಹಂತದಲ್ಲಿದ್ದು ಪಾತ್ರಗಳನ್ನು ಪ್ರಯೋಗಿಸಲು ಬಯಸುತ್ತೇನೆ. ನನಗೆ ಬರುವ ಪ್ರತಿಯೊಂದು ಪಾತ್ರವೂ ಸವಾಲಾಗಿರಬೇಕು. ಅದೇ ಹಳೇ ಕೆಲಸ ಮಾಡುವುದರಲ್ಲಿ ಅರ್ಥವಿಲ್ಲ. ನನ್ನ ಬಳಿ ಸಿನಿಮಾಗಳ ದೊಡ್ಡ ಪಟ್ಟಿ ಇಲ್ಲದಿದ್ದರೂ, ನಾನು ಯಾವಾಗಲೂ ಹೊಸ ಪಾತ್ರಗಳನ್ನು ಮಾಡಲು ಪ್ರಯತ್ನಿಸುತ್ತೇನೆ. ಪ್ರತಿ ಚಿತ್ರದಲ್ಲೂ ವಿಭಿನ್ನವಾಗಿ ಕಾಣುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಜಡೇಶಾ ಕೆ ಹಂಪಿ ನಿರ್ದೇಶನದ ಗುರು ಶಿಷ್ಯರು ಶರಣ್ ಜೊತೆಗಿನ ನಿಶ್ವಿಕಾ ಅವರ ಮೊದಲ ಚಿತ್ರವಾಗಿದೆ. ನನಗೆ ತಿಳಿದ ಮಟ್ಟಿಗೆ ಬೆಳ್ಳಿತೆರೆಯಲ್ಲಿ ಅದರಲ್ಲೂ ಕನ್ನಡದಲ್ಲಿ ಖೋ-ಖೋ ಆಟವನ್ನು ಆಧರಿಸಿದ ಚಿತ್ರ ಬಂದಿಲ್ಲ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದು ಹೆಗ್ಗುರುತು ಮೂಡಿಸಲಿರುವ ಗುರು ಶಿಷ್ಯರ ಚಿತ್ರದ ಭಾಗವಾಗಲು ನನಗೆ ಖುಷಿಯಾಗಿದೆ ಎಂದರು.

ನಿಶ್ವಿಕಾ ಅವರು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹುಚ್ಚು ಅಭಿಮಾನಿಯೂ ಹೌದು. ವಾಸ್ತವವಾಗಿ, ಅವರು ಚಿತ್ರದ ಕ್ರಿಯೇಟಿವ್ ಹೆಡ್ ಮತ್ತು ಸಹ-ನಿರ್ಮಾಪಕ ತರುಣ್ ಕಿಶೋರ್ ಸುಧೀರ್ ಅವರ ಚಿತ್ರದಲ್ಲಿ ನಟಿಸಲು ಸಿದ್ಧರಾಗಿದ್ದರು.

'ಚಿತ್ರದಲ್ಲಿ ನನ್ನ ಪಾತ್ರ ಸೂಜಿ. ಈ ಪಾತ್ರ ಚಿತ್ರದಲ್ಲಿ ಬಹು ಪ್ರಮುಖವಾಗಿತ್ತು. ನಾನು ಮಾತನಾಡುವ ಮತ್ತು ವರ್ತಿಸುವ ರೀತಿ ಬಹಳ ಮುಖ್ಯ. ನಾನು ಪಾತ್ರಕ್ಕೆ ಹೊಂದಿಕೊಳ್ಳಬೇಕಿತ್ತು. ನಾನು ಸಾಕಷ್ಟು ತೂಕವನ್ನು ಇಳಿಸಿಕೊಂಡೆ, ನಾನು ಹಳ್ಳಿಯವಳಾಗಿ ಕಾಣಿಸಬೇಕಿತ್ತು. ನಾನು ಅಲ್ಲಿನ ಆಡುಭಾಷೆಯಲ್ಲಿಯೇ ಮಾತನಾಡಬೇಕಿತ್ತು. ಸೂಜಿ ಕೆಲಸ ಮಾಡುವ ಮಹಿಳೆ, ಅವಳು ಡೈರಿ ಫಾರ್ಮ್ ನಡೆಸುತ್ತಾಳೆ. ಸಾಂಪ್ರದಾಯಿಕ ವೇಷಭೂಷಣಗಳನ್ನು ಧರಿಸಿ ಸೈಕ್ಲಿಂಗ್ ಮಾಡಲು ಪ್ರಯತ್ನ ಮಾಡಬೇಕಾಯಿತು. ಚಿತ್ರದ ವಿಡಿಯೋ ಸಾಂಗ್ ಗಳನ್ನು ನೋಡಿರುವ ಜನರು ನನಗೆ ಉತ್ತಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ನನ್ನ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ ಎಂದು ನಿಶ್ವಿಕಾ ಹೇಳುತ್ತಾರೆ.

ನಟ ಶರಣ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡ ನಿಶ್ವಿಕಾ ಅವರು ಅವರೊಂದಿಗೆ ಹಂಚಿಕೊಂಡ ಬಾಂಧವ್ಯದ ಬಗ್ಗೆ ಸಂತೋಷಪಟ್ಟಿದ್ದಾರೆ. ಮುಂಬರುವ ಪ್ರತಿಭೆಗಳು ಮತ್ತು ಬಾಲ ಕಲಾವಿದರೊಂದಿಗೆ ಕೆಲಸ ಮಾಡುವ ಬಗ್ಗೆ ನಿಶ್ವಿಕಾ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT