ಗುರು ಶಿಷ್ಯರು ಚಿತ್ರದಲ್ಲಿ ನಟ ಶರಣ್ 
ಸಿನಿಮಾ ಸುದ್ದಿ

ಗುರು ಶಿಷ್ಯರು ಚಿತ್ರ ಕ್ರೀಡೆ ಮತ್ತು ಮನರಂಜನೆಯ ಹೂರಣ: ನಟ ಶರಣ್

ವೃತ್ತಿ ಜೀವನದ ಆರಂಭದಲ್ಲಿ ಕಾಮಿಡಿಯನ್ ಆಗಿ ನಂತರ ಹಿರೋ ಆಗಿ ಬಡ್ತಿ ಪಡೆದ ಶರಣ್ ಸ್ಯಾಂಡಲ್ ವುಡ್ ನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಅವರು ಹೀರೋ ಆಗಿರುವ ಚಿತ್ರದಲ್ಲಿ ಹಾಸ್ಯವೇ ಜೀವಾಳ. ಆದಾಗ್ಯೂ, ಶರಣ್ ಇದೀಗ ವಿಭಿನ್ನ ಪಾತ್ರ ಪ್ರಯೋಗ ಮೂಲಕ ತಮ್ಮಲ್ಲಿನ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ವೃತ್ತಿ ಜೀವನದ ಆರಂಭದಲ್ಲಿ ಕಾಮಿಡಿಯನ್ ಆಗಿ ನಂತರ ಹಿರೋ ಆಗಿ ಬಡ್ತಿ ಪಡೆದ ಶರಣ್ ಸ್ಯಾಂಡಲ್ ವುಡ್ ನ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದಾರೆ. ಅವರು ಹೀರೋ ಆಗಿರುವ ಚಿತ್ರದಲ್ಲಿ ಹಾಸ್ಯವೇ ಜೀವಾಳ. ಆದಾಗ್ಯೂ, ಶರಣ್ ಇದೀಗ ವಿಭಿನ್ನ ಪಾತ್ರ ಪ್ರಯೋಗ ಮೂಲಕ ತಮ್ಮಲ್ಲಿನ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.

ಜಡೇಶಾ ಕೆ ಹಂಪಿ ಅವರ ಗುರು ಶಿಷ್ಯರು ಇಂತಹ ಸಿನಿಮಾಗಳಲ್ಲಿ ಒಂದಾಗಿದ್ದು, ಶರಣ್ ಅವರ ವಿಶಿಷ್ಠ ಪ್ರತಿಭೆ ಪ್ರದರ್ಶನಗೊಂಡಿದೆ. ನಿರ್ದೇಶಕ ತರುಣ್ ಸುಧೀರ್ ಸಹ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಶರಣ್ ದೈಹಿಕ ಶಿಕ್ಷಕರಾಗಿ ಅಭಿನಯಿಸಿದ್ದಾರೆ. ನಾಳೆ (ಸೆ.23) ಈ ಸಿನಿಮಾ ತೆರೆ ಮೇಲೆ ಬರುತ್ತಿದೆ.

ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶರಣ್, 'ಗುರುಶಿಷ್ಯರು ನನ್ನ ವಲಯದೊಳಗೆ ಅದ್ಬುತ ಸಿನಿಮಾವಾಗಿದೆ. ಇದೊಂದು ವಿಭಿನ್ನವಾದ ಗೇಮ್ ಆಗಿದೆ. ಈ ಚಿತ್ರದಲ್ಲಿ ಶರಣ್ ಅವರ ಸಾಮಾನ್ಯ ಮ್ಯಾನರೀಸಂ ಇಲ್ಲಿ ಹೆಚ್ಚಾಗಿ ನೋಡುವುದಕ್ಕೆ ಆಗಲ್ಲ. ಖೋ ಖೋ ಗೇಮ್ ನೊಂದಿಗೆ ಎಂಟರ್ ಟೈನ್ ಮೆಂಟ್ ಕೂಡಾ ಇರಲಿದೆ ಎಂದು ತಿಳಿಸಿದರು. 

ತರುಣ್ ಕಿಶೋರ್ ಸುಧೀರ್

ಖೋ ಖೋ ವಿಷಯಾಧಾರಿತದ ಸಿನಿಮಾದ ಕ್ರೇಡಿಟ್ ನಿರ್ದೇಶಕ ಜಡೇಶಾ ಮತ್ತು ತರುಣ್ ಅವರಿಗೆ ಸಲ್ಲಬೇಕು. ಎಲ್ಲವೂ ವಿಭಿನ್ನವಾಗಿದೆ. ಹೊಸತನದತ್ತ ಗಮನ ನೀಡಲಾಗಿದೆ. ಈ ಸಿನಿಮಾದಲ್ಲಿನ ಅಭಿನಯ ಹೊಸ ವಿಧದ ಅಭಿನಯವನ್ನು ಕಲಿಸಿದೆ. ದೈಹಿಕ ಸವಾಲಿನಿಂದ ಕೂಡಿದ ಪಾತ್ರವಾಗಿತ್ತು. ಗುರುಶಿಷ್ಯರು ಕ್ರೀಡೆ, ಮನರಂಜನೆಯನ್ನು ಒಟ್ಟಿಗೆ ಪರದೆ ಮೇಲೆ ತರಲಿದ್ದು, ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಭಾವಾನಾತ್ಮಕ ಸಂಬಂಧವನ್ನು ತೋರಿಸಲಿದೆ ಎಂದು ಅವರು ಹೇಳಿದ್ದಾರೆ. 

ಶರಣ್ ಹೊರತುಪಡಿಸಿದಂತೆ 11 ಬಾಲಕರು ಈ ಚಿತ್ರದಲ್ಲಿ ಖೋ ಖೋ ಆಟಗಾರರಾಗಿ ಅಭಿನಯಿಸಿದ್ದಾರೆ. 

ಗುರು ಶಿಷ್ಯರು ಚಿತ್ರದ ಬಗ್ಗೆ ನಿರ್ದೇಶಕ ತರುಣ್ ಸುದೀರ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸಹೋದರ ನಂದಕಿಶೋರ್ ಜೊತೆಗೆ ರಾಂಬೋ ಚಿತ್ರದಲ್ಲಿ ಕೆಲಸ ಅಭಿನಯಿಸಿದ್ದಾಗಿನಿಂದ ಈವರೆಗಿನ ಕನ್ನಡ ಚಿತ್ರೋದ್ಯಮದಲ್ಲಿ ಇದು ಕ್ರಿಯಾತ್ಮಕ ಮೊದಲ ಚಿತ್ರವಾಗಿದೆ. ಕ್ರಿಯೇಟಿವ್ ಮುಖ್ಯಸ್ಥರಾಗಿ ಪ್ರಯೋಜನ ಪಡೆದಿರುವುದಾಗಿ ತಿಳಿಸಿದರು. ತರುಣ್ ಸುಧೀರ್ ಈ ಚಿತ್ರದ ಕ್ರಿಯೇಟಿವ್ ಮುಖ್ಯಸ್ಥರ ಜೊತೆಗೆ ಸಹ ನಿರ್ಮಾಪಕ ಕೂಡಾ ಆಗಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT