ಸಿನಿಮಾ ಸುದ್ದಿ

ನಾನು ಕನ್ನಡಿಗ, ಸ್ಯಾಂಡಲ್‌ವುಡ್‌ ಮೂಲಕ ಪಾದಾರ್ಪಣೆ ಮಾಡಿದ್ದು ಸಂತೋಷವಾಗಿದೆ: ಝೈದ್ ಖಾನ್

Sumana Upadhyaya

ಬೆಂಗಳೂರಿನ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅವರ ಚೊಚ್ಚಲ ಸಿನಿಮಾ, ಜಯತೀರ್ಥ ಜಯಣ್ಣ ನಿರ್ದೇಶನದ ಬನಾರಸ್ ನವೆಂಬರ್ 4ರಂದು ತೆರೆಗೆ ಬರಲಿದೆ. ಚಿತ್ರದ ನಿರ್ಮಾಪಕರು ಟ್ರೈಲರನ್ನು ಬಿಡುಗಡೆ ಮಾಡಿದರು, ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಬಾಲಿವುಡ್ ನಟ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ ಮೊದಲಾದವರು ಕೂಡ ನಟಿಸಿದ್ದಾರೆ. 

ತಿಲಕರಾಜ್ ಬಲ್ಲಾಳ್ ನಿರ್ಮಿಸಿರುವ ಝೈದ್ ಖಾನ್ ಅವರ ಮೊದಲ ಚಿತ್ರವು ಬಹು ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಲಿದೆ. ಬನಾರಸ್ ಇದುವರೆಗೆ ಪ್ರೇಮಕಥೆ ಎಂದು ಬಿಂಬಿಸಲಾಗಿತ್ತು, ಆದರೆ ಮೊನ್ನೆ ಟ್ರೈಲರ್ ಬಿಡುಗಡೆಯಾದಾಗ ಅದರಲ್ಲಿ ಝೈದ್ ಖಾನ್ ಗಗನಯಾತ್ರಿಯಾಗಿ ಕಾಣಿಸಿಕೊಂಡಿರುವ ಟೈಮ್‌ಟ್ರಾವೆಲ್ ಚಿತ್ರ ಎಂದು ತಂಡವು ಎಲ್ಲರನ್ನು ಅಚ್ಚರಿಗೊಳಿಸಿತು. ರೊಮ್ಯಾಂಟಿಕ್ ಸಿನಿಮಾವು ವೈಜ್ಞಾನಿಕ ಕಾಲ್ಪನಿಕ ಕಥೆಯನ್ನು ಹೊಂದಿದೆ. 

ಬನಾರಸ್ ಚಿತ್ರದ ಸ್ಟಿಲ್

"ಟೈಮ್ ಟ್ರಾವೆಲ್  ಭಾರತೀಯ ಚಿತ್ರರಂಗದಲ್ಲಿ ತೋರಿಸಿರುವುದು ಕಡಿಮೆ, ಬನಾರಸ್‌ನಲ್ಲಿ ಅದನ್ನು ಪ್ರಯತ್ನಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಎಂದು ನಿರ್ದೇಶಕ ಜಯತೀರ್ಥ ಹೇಳಿದರು, ಕಾಶಿಯ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದ್ದು, ಶೀರ್ಷಿಕೆಯು ಕಥೆಗೆ ಹೊಂದಿಕೆಯಾಗುತ್ತದೆ. ಚಿತ್ರದಲ್ಲಿ ತಾತ್ವಿಕ ಮತ್ತು ದೈವಿಕತೆ ಇರುತ್ತದೆ. ನಾವು ಚಿತ್ರದ ಶೇಕಡಾ 90ರಷ್ಟು ಭಾಗವನ್ನು ಬನಾರಸ್‌ನಲ್ಲಿ ಚಿತ್ರೀಕರಿಸಿದ್ದೇವೆ. ಎಂದರು.

ಝೈದ್ ಖಾನ್ ಅವರಿಗೆ ಬಾಲಿವುಡ್ ನಿಂದ ಅವಕಾಶಗಳು ಬಂದಿದ್ದವಂತೆ. ಆದರೆ ಅವರು ತಮ್ಮ ವೃತ್ತಿಜೀವನವನ್ನು ಕನ್ನಡ ಚಿತ್ರದೊಂದಿಗೆ ಪ್ರಾರಂಭಿಸಬೇಕೆಂದು ಸ್ಯಾಂಡಲ್ ವುಡ್ ಆಯ್ಕೆ ಮಾಡಿಕೊಂಡರು. ನಾನು ಕನ್ನಡಿಗ, ಮತ್ತು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುವುದು ಇಲ್ಲಿ ಮುಂದುವರಿಯುವುದು ನನ್ನ ಕನಸಾಗಿತ್ತು ಎಂದು ಹೇಳಿಕೊಂಡರು.

ಚಿತ್ರದ ನಾಯಕಿ ಸೋನಾಲ್ ಮೊಂಟೇರೊ, ಚಿತ್ರತಂಡದ ಭಾಗವಾಗಿರುವುದಕ್ಕೆ ಖುಷಿಯಿದೆ. ಬನಾರಸ್ ನನ್ನ ಮೊದಲ ಪ್ಯಾನ್-ಇಂಡಿಯಾ ಸಿನಿಮಾ ಎಂದರು. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ನೀಡಿದ್ದು, ಅಜನೀಶ್ ಬಿ ಲೋಕನಾಥ್ ಸಂಗೀತವಿದೆ.

SCROLL FOR NEXT