ನೈನಾ ಸರ್ವರ್ 
ಸಿನಿಮಾ ಸುದ್ದಿ

ಬೆತ್ತನಗೆರೆ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ ನೈನಾ ಸರ್ವರ್, ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಛಾಪು

ಬೆತ್ತನಗೆರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ನೈನಾ ಸರ್ವರ್, ನಂತರ ಕೋಲಾರ ಮತ್ತು ಊಟಿ ಮೂಲಕ ದಕ್ಷಿಣ ಸಿನಿರಂಗದಲ್ಲಿ ಫುಲ್ ಸರ್ಕಲ್ ಬಂದಿರುವ ಖುಷಿಯಲ್ಲಿದ್ದಾರೆ. ಅವರು ತಮಿಳಿನಲ್ಲಿ ಕೆಲಸ ಮಾಡಿದ್ದಾರೆ ಮತ್ತು ಅವರ ಚೊಚ್ಚಲ ತೆಲುಗು ಚಿತ್ರ ಹಾಗೂ ಮೊದಲ ಮಲಯಾಳಂ ಚಿತ್ರ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಬೆತ್ತನಗೆರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ನೈನಾ ಸರ್ವರ್, ನಂತರ ಕೋಲಾರ ಮತ್ತು ಊಟಿ ಮೂಲಕ ದಕ್ಷಿಣ ಸಿನಿರಂಗದಲ್ಲಿ ಫುಲ್ ಸರ್ಕಲ್ ಬಂದಿರುವ ಖುಷಿಯಲ್ಲಿದ್ದಾರೆ. ಅವರು ತಮಿಳಿನಲ್ಲಿ (ಅದ್ರ ಮಚ್ಚನ್ ವಿಸಿಲು, ಕೊಳಂಜಿ) ಕೆಲಸ ಮಾಡಿದ್ದಾರೆ ಮತ್ತು ಅವರ ಚೊಚ್ಚಲ ತೆಲುಗು (ಸೂರ್ಯಪೇಟ್ ಜಂಕ್ಷನ್) ಚಿತ್ರ ಹಾಗೂ ಮೊದಲ ಮಲಯಾಳಂ ಚಿತ್ರ (ಕಾಜುರಾಹೋ ಡ್ರೀಮ್ಸ್) ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಈಶ್ವರ್ ಮತ್ತು ಅಭಿಮನ್ಯು ಸಿಂಗ್ ನಟಿಸಿರುವ ಸೂರ್ಯಪೇಟ್ ಜಂಕ್ಷನ್ ಈ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದರೆ, ಕಾಜುರಾಹೋ ಡ್ರೀಮ್ಸ್ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸದ್ಯಕ್ಕೆ ಒಳ್ಳೆಯ ಅವಕಾಶಗಳನ್ನು ಪಡೆಯುತ್ತಿರುವ ನಟಿ, ಪ್ರತಿಯೊಬ್ಬ ಮಹಿಳಾ ನಟಿಯರೂ ಸಾಧ್ಯವಾದಷ್ಟು ಭಾಷೆಗಳಲ್ಲಿ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುವುದು ಕನಸಾಗಿರುತ್ತದೆ ಎಂದು ಹೇಳುತ್ತಾರೆ.

ಇಂದು, ಉದ್ಯಮಗಳ ನಡುವೆ ಯಾವುದೇ ಗಡಿಗಳಿಲ್ಲ. ಇದುವೇ ಉತ್ತಮ ಕಂಟೆಂಟ್‌ಗಳು ಮತ್ತು ಪಾತ್ರಗಳನ್ನು ತೆಗೆದುಕೊಳ್ಳಲು ನಮಗೆ ಹೆಚ್ಚಿನ ಅವಕಾಶವನ್ನು ನೀಡಿದೆ. ಪ್ರತಿ ಭಾಷೆಯಲ್ಲಿ ಕೆಲಸ ಮಾಡುವುದು ವಿಭಿನ್ನ ಅನುಭವವಾಗಿದೆ. ಒಬ್ಬ ನಟನಿಗೆ ಕ್ಯಾಮೆರಾ ಎದುರಿಸುವ ಪ್ರಕ್ರಿಯೆ ಒಂದೇ ಆಗಿರುತ್ತದೆ. ಆದರೆ, ತಂಡ, ವಾತಾವರಣ ಮತ್ತು ಯೋಜನೆಯು ಎಲ್ಲ ವ್ಯತ್ಯಾಸಗಳನ್ನು ಉಂಟುಮಾಡುತ್ತದೆ ಎಂದು ಅವರು ಹೇಳುತ್ತಾರೆ.

ನೈನಾ ಸರ್ವರ್ ಇದೀಗ ದಕ್ಷಿಣ ಭಾರತದ ಭಾಷೆಗಳಲ್ಲಿ ಹೆಚ್ಚಿನ ಯೋಜನೆಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ. 

'ನನ್ನ ಬಳಿ ಶ್ರೀನಗರ ಕಿಟ್ಟಿ ನಾಯಕನಾಗಿ ನಟಿಸಿರುವ 'ಕಣ್ಮಣಿ' ಎಂಬ ಕನ್ನಡ ಚಿತ್ರವೂ ಇದೆ. ಈ ಯೋಜನೆಯು ಸೆಟ್ಟೇರಬೇಕಿದ್ದು, ನಾವು ಶೂಟಿಂಗ್ ಪೂರ್ಣಗೊಳ್ಳಲು ಕಾಯುತ್ತಿದ್ದೇವೆ' ಎಂದು ನೈನಾ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT