ಸಿನಿಮಾ ಸುದ್ದಿ

ಅಭಿಮಾನಿಯ ಫೋನ್ ಒಡೆಯುವುದಾಗಿ ನಟಿ ನಯನತಾರಾ ಎಚ್ಚರಿಕೆ, ವಿಡಿಯೋ ವೈರಲ್!

Nagaraja AB

ಮುಂಬೈ: ಚಿತ್ರ ನಟಿ ನಯನತಾರಾ ತಮ್ಮ ಪತಿ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಅಭಿಮಾನಿಯೊಬ್ಬರ ಮೇಲೆ ಕೆರಳಿದ ಘಟನೆ ನಡೆದಿದೆ.

ಇವರಿಬ್ಬರು ಇತ್ತೀಚೆಗೆ ಕುಂಭಕೋಣಂ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಪಂಗುನಿ ಉತಿರಂ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ದಂಪತಿ ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳು ಗುಂಪು ಗುಂಪಾಗಿ ಸೇರಿದ್ದಾರೆ. ಇದೇ ಸಂದರ್ಭದಲ್ಲಿ ಅಭಿಮಾನಿಯೊಬ್ಬ ತನ್ನ ಮೊಬೈಲ್ ನಿಂದ ಚಿತ್ರೀಕರಿಸುತ್ತಿರುವುದನ್ನು ಗಮನಿಸಿದ ನಯನತಾರಾ, ಕೋಪಗೊಂಡಿದ್ದು, ಅಭಿಮಾನಿಯ ಫೋನ್ ಒಡೆಯುವುದಾಗಿ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.

ವಿಘ್ನೇಶ್ ಮತ್ತು ನಯನತಾರಾ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ವಿವಾಹ ಮಹೋತ್ಸವದಲ್ಲಿ ರಜನಿಕಾಂತ್ ಮತ್ತು ಶಾರುಖ್ ಖಾನ್ ಭಾಗವಹಿಸಿದ್ದರು.ಮದುವೆಯಾದ ತಿಂಗಳ ನಂತರ ಇಬ್ಬರೂ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದಿರುವುದಾಗಿ ಹೇಳಿಕೊಂಡಿದ್ದರು. 

SCROLL FOR NEXT