ಮಾಧ್ಯಮ ಸಂವಾದದಲ್ಲಿ ನಟ ನಾನಿ 
ಸಿನಿಮಾ ಸುದ್ದಿ

'ಹಾಯ್ ನಾನ್ನ' ಚಿತ್ರ ಎಲ್ಲಾ ಭಾಷೆಯ ಪ್ರೇಕ್ಷಕರೊಂದಿಗೆ ಬಲವಾದ ಭಾವನಾತ್ಮಕ ಸಂಬಂಧ ಹೊಂದಿದೆ: ನಾನಿ

ತಮ್ಮ ಹಿಂದಿನ ಚಿತ್ರ ದಸರಾಕ್ಕೆ ಅವರು ಪಡೆದ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ನಟ, ಶೌರ್ಯುವ್ ನಿರ್ದೇಶನದ 'ಹಾಯ್ ನಾನ್ನ' ಸಿನಿಮಾಗೂ ತಮ್ಮ ಪ್ರೀತಿ ಮತ್ತು ಬೆಂಬಲ ನೀಡಲು ವಿನಂತಿಸಿದರು. ಚಿತ್ರವು ಡಿಸೆಂಬರ್ 7 ರಂದು ಬಿಡುಗಡೆಯಾಗಲಿದ್ದು, ಮಾಧ್ಯಮ ಸಂವಾದಕ್ಕೂ ಮೊದಲು, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. 

ಮುಂಬರುವ ಬಹುಭಾಷಾ ಚಿತ್ರವಾದ 'ಹಾಯ್ ನಾನ್ನ' ಚಿತ್ರದ ನಟ ನಾನಿ, ಬಹು ನಿರೀಕ್ಷಿತ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಚಿತ್ರವು ಡಿಸೆಂಬರ್ 7 ರಂದು ಬಿಡುಗಡೆಯಾಗಲಿದ್ದು, ಮಾಧ್ಯಮ ಸಂವಾದಕ್ಕೂ ಮೊದಲು, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಸ್ವಲ್ಪ ಸಮಯ ಕಳೆದರು. 

ತಮ್ಮ ಹಿಂದಿನ ಚಿತ್ರ ದಸರಾಕ್ಕೆ ಅವರು ಪಡೆದ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ನಟ, ಶೌರ್ಯುವ್ ನಿರ್ದೇಶನದ 'ಹಾಯ್ ನಾನ್ನ' ಸಿನಿಮಾಗೂ ತಮ್ಮ ಪ್ರೀತಿ ಮತ್ತು ಬೆಂಬಲ ನೀಡಲು ವಿನಂತಿಸಿದರು. 'ನಾಗೇಂದ್ರ ಕಾಸಿ ಅವರ ಸಹಯೋಗದೊಂದಿಗೆ ರಚಿಸಲಾದ ಸ್ಕ್ರಿಪ್ಟ್, ಹಾಯ್ ನಾನ್ನ ಶೀರ್ಷಿಕೆಯು ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳ ಪ್ರೇಕ್ಷಕರೊಂದಿಗೆ ಬಲವಾದ ಭಾವನಾತ್ಮಕ ಸಂಪರ್ಕವನ್ನು ಹೊಂದಿದೆ ಮತ್ತು ಹಿಂದಿಯಲ್ಲಿ ಹಾಯ್ ಪಪ್ಪಾ ಆಗಿ ತೆರೆಕಾಣಲಿದೆ ಎಂದರು.

'ದಸರಾ ಸಿನಿಮಾದಲ್ಲಿ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆದರೆ, ಹಾಯ್ ನಾನ್ನ ಚಿತ್ರದಲ್ಲಿ ಕ್ಲಾಸಿ ಮತ್ತು ಭಾವನಾತ್ಮಕವಾಗಿ ಕಾಣಿಸಿಕೊಂಡಿದ್ದೇನೆ' ಎಂದು ನಟ ಹೇಳಿದರು. ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಜಯರಾಮ್ ಮತ್ತು ಪ್ರಿಯದರ್ಶಿ ಜೊತೆಗೆ ಶ್ರುತಿ ಹಾಸನ್, ಕಿಯಾರಾ ಖನ್ನಾ ಮತ್ತು ಅಂಗದ್ ಬೇಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವೈರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಮೋಹನ್ ಚೆರುಕುರಿ ಮತ್ತು ವಿಜಯೇಂದರ್ ರೆಡ್ಡಿ ನಿರ್ಮಿಸಿರುವ ಹಾಯ್ ನಾನ್ನ ಕನ್ನಡ ಅವತರಣಿಕೆಯನ್ನು ಶಾಲಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಜಾಕ್ ಮಂಜು (ಮಂಜುನಾಥ್ ಗೌಡ) ವಿತರಿಸಲಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸಾನು ಜಾನ್ ವರ್ಗೀಸ್ ನಿರ್ವಹಿಸಿದ್ದರೆ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಮತ್ತು ಪ್ರವೀಣ್ ಆಂಟೋನಿ ಅವರ ಸಂಕಲನ ಚಿತ್ರಕ್ಕಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT