ಮಾಧ್ಯಮ ಸಂವಾದದಲ್ಲಿ ನಟ ನಾನಿ 
ಸಿನಿಮಾ ಸುದ್ದಿ

'ಹಾಯ್ ನಾನ್ನ' ಚಿತ್ರ ಎಲ್ಲಾ ಭಾಷೆಯ ಪ್ರೇಕ್ಷಕರೊಂದಿಗೆ ಬಲವಾದ ಭಾವನಾತ್ಮಕ ಸಂಬಂಧ ಹೊಂದಿದೆ: ನಾನಿ

ತಮ್ಮ ಹಿಂದಿನ ಚಿತ್ರ ದಸರಾಕ್ಕೆ ಅವರು ಪಡೆದ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ನಟ, ಶೌರ್ಯುವ್ ನಿರ್ದೇಶನದ 'ಹಾಯ್ ನಾನ್ನ' ಸಿನಿಮಾಗೂ ತಮ್ಮ ಪ್ರೀತಿ ಮತ್ತು ಬೆಂಬಲ ನೀಡಲು ವಿನಂತಿಸಿದರು. ಚಿತ್ರವು ಡಿಸೆಂಬರ್ 7 ರಂದು ಬಿಡುಗಡೆಯಾಗಲಿದ್ದು, ಮಾಧ್ಯಮ ಸಂವಾದಕ್ಕೂ ಮೊದಲು, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. 

ಮುಂಬರುವ ಬಹುಭಾಷಾ ಚಿತ್ರವಾದ 'ಹಾಯ್ ನಾನ್ನ' ಚಿತ್ರದ ನಟ ನಾನಿ, ಬಹು ನಿರೀಕ್ಷಿತ ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಚಿತ್ರವು ಡಿಸೆಂಬರ್ 7 ರಂದು ಬಿಡುಗಡೆಯಾಗಲಿದ್ದು, ಮಾಧ್ಯಮ ಸಂವಾದಕ್ಕೂ ಮೊದಲು, ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಸ್ವಲ್ಪ ಸಮಯ ಕಳೆದರು. 

ತಮ್ಮ ಹಿಂದಿನ ಚಿತ್ರ ದಸರಾಕ್ಕೆ ಅವರು ಪಡೆದ ಬೆಂಬಲಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ ನಟ, ಶೌರ್ಯುವ್ ನಿರ್ದೇಶನದ 'ಹಾಯ್ ನಾನ್ನ' ಸಿನಿಮಾಗೂ ತಮ್ಮ ಪ್ರೀತಿ ಮತ್ತು ಬೆಂಬಲ ನೀಡಲು ವಿನಂತಿಸಿದರು. 'ನಾಗೇಂದ್ರ ಕಾಸಿ ಅವರ ಸಹಯೋಗದೊಂದಿಗೆ ರಚಿಸಲಾದ ಸ್ಕ್ರಿಪ್ಟ್, ಹಾಯ್ ನಾನ್ನ ಶೀರ್ಷಿಕೆಯು ಎಲ್ಲಾ ದಕ್ಷಿಣ ಭಾರತೀಯ ಭಾಷೆಗಳ ಪ್ರೇಕ್ಷಕರೊಂದಿಗೆ ಬಲವಾದ ಭಾವನಾತ್ಮಕ ಸಂಪರ್ಕವನ್ನು ಹೊಂದಿದೆ ಮತ್ತು ಹಿಂದಿಯಲ್ಲಿ ಹಾಯ್ ಪಪ್ಪಾ ಆಗಿ ತೆರೆಕಾಣಲಿದೆ ಎಂದರು.

'ದಸರಾ ಸಿನಿಮಾದಲ್ಲಿ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆದರೆ, ಹಾಯ್ ನಾನ್ನ ಚಿತ್ರದಲ್ಲಿ ಕ್ಲಾಸಿ ಮತ್ತು ಭಾವನಾತ್ಮಕವಾಗಿ ಕಾಣಿಸಿಕೊಂಡಿದ್ದೇನೆ' ಎಂದು ನಟ ಹೇಳಿದರು. ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಜಯರಾಮ್ ಮತ್ತು ಪ್ರಿಯದರ್ಶಿ ಜೊತೆಗೆ ಶ್ರುತಿ ಹಾಸನ್, ಕಿಯಾರಾ ಖನ್ನಾ ಮತ್ತು ಅಂಗದ್ ಬೇಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವೈರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಮೋಹನ್ ಚೆರುಕುರಿ ಮತ್ತು ವಿಜಯೇಂದರ್ ರೆಡ್ಡಿ ನಿರ್ಮಿಸಿರುವ ಹಾಯ್ ನಾನ್ನ ಕನ್ನಡ ಅವತರಣಿಕೆಯನ್ನು ಶಾಲಿನಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಜಾಕ್ ಮಂಜು (ಮಂಜುನಾಥ್ ಗೌಡ) ವಿತರಿಸಲಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸಾನು ಜಾನ್ ವರ್ಗೀಸ್ ನಿರ್ವಹಿಸಿದ್ದರೆ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಮತ್ತು ಪ್ರವೀಣ್ ಆಂಟೋನಿ ಅವರ ಸಂಕಲನ ಚಿತ್ರಕ್ಕಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT