ಮಂಡ್ಯ ಹೈದ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಮಂಡ್ಯದ ಹಳ್ಳಿ ಸೊಗಡನ್ನು ಪಸರಿಸಲು ಬರುತ್ತಿದೆ ಮಂಡ್ಯ ಹೈದ; ಟೀಸರ್ ಬಿಡುಗಡೆ

ಕನ್ನಡ ಇಂಡಸ್ಟ್ರಿಯಲ್ಲಿ ಮಂಡ್ಯ ಎಂಬುದು ಒಂದು ವಿಶಿಷ್ಠ ಮತ್ತು ಶೀರ್ಷಿಕೆಯಾಗಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ನೆಲದ ಕಥೆಗಳನ್ನು ಪ್ರದರ್ಶಿಸುವ ಹಲವಾರು ಚಲನಚಿತ್ರಗಳು ಬಂದಿವೆ. ಇದೀಗ ಮಂಡ್ಯದ ಹುಡುಗನೊಬ್ಬ ಪ್ರೀತಿಗಾಗಿ ಹೋರಾಡುತ್ತಿರುವ ಬಗ್ಗೆ ಕಥೆ ಹೇಳಲು ಬರಹಗಾರ ಹಾಗೂ ನಿರ್ದೇಶಕ ವಿ ಶ್ರೀಕಾಂತ್ ಮಂಡ್ಯ ಹೈದ ಮೂಲಕ ಬರುತ್ತಿದ್ದಾರೆ.

ಕನ್ನಡ ಇಂಡಸ್ಟ್ರಿಯಲ್ಲಿ ಮಂಡ್ಯ ಎಂಬುದು ಒಂದು ವಿಶಿಷ್ಠ ಮತ್ತು ಶೀರ್ಷಿಕೆಯಾಗಿ ವಿಶೇಷ ಸ್ಥಾನವನ್ನು ಹೊಂದಿದೆ. ಈ ನೆಲದ ಕಥೆಗಳನ್ನು ಪ್ರದರ್ಶಿಸುವ ಹಲವಾರು ಚಲನಚಿತ್ರಗಳು ಬಂದಿವೆ. ಇದೀಗ ಮಂಡ್ಯದ ಹುಡುಗನೊಬ್ಬ ಪ್ರೀತಿಗಾಗಿ ಹೋರಾಡುತ್ತಿರುವ ಬಗ್ಗೆ ಕಥೆ ಹೇಳಲು ಬರಹಗಾರ ಹಾಗೂ ನಿರ್ದೇಶಕ ವಿ ಶ್ರೀಕಾಂತ್ ಮಂಡ್ಯ ಹೈದ ಮೂಲಕ ಬರುತ್ತಿದ್ದಾರೆ.

ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಇದೀಗ ಟೈಟಲ್ ಟ್ರ್ಯಾಕ್ ಮತ್ತು ಟೀಸರ್ ಅನ್ನು ಬಿಡುಗಡೆ ಮಾಡಿದೆ. ಮಂಡ್ಯದ ಹುಡುಗನಾಗಿ ಅಭಯ್ ಚಂದ್ರಶೇಖರ್ ನಟಿಸಿದ್ದು, ನಾಯಕಿಯಾಗಿ ಭೂಮಿಕಾ ನಟಿಸಿದ್ದಾರೆ.

ತೇಜಸ್ ಕ್ರಿಯೇಷನ್ಸ್ ಅಡಿಯಲ್ಲಿ ಅಭಯ್ ತಂದೆ ಚಂದ್ರಶೇಖರ್ ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. 'ಇದು ನಮ್ಮ ಬ್ಯಾನರ್‌ನಲ್ಲಿ ಐದನೇ ಚಿತ್ರ ಮತ್ತು ಅಭಯ್ ಅವರ ಎರಡನೇ ಚಿತ್ರ. ಮಂಡ್ಯದಲ್ಲಿ ಹೆಚ್ಚಿನ ಕಥೆ ನಡೆಯುತ್ತದೆ. ಆ ಹಳ್ಳಿಯ ಕಂಪನ್ನು ನಿಮಗೆ ನೀಡುತ್ತದೆ. ಬೆಂಗಳೂರಿನಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ನಮ್ಮಲ್ಲಿ ಹದಿನೈದು ಹಾಸ್ಯನಟರು, ಅನುಭವಿ ಕಲಾವಿದರು ಮತ್ತು ಐದು ಹಾಡುಗಳಿವೆ. ಸುರೇಂದ್ರನಾಥ್ ಅವರ ಸಂಗೀತ ಸಂಯೋಜನೆ ಇದೆ' ಎಂದು ಚಂದ್ರಶೇಖರ್ ತಿಳಿಸಿದರು.

ಮಂಡ್ಯದ ಲೈಫ್ ಸ್ಟೈಲ್ ಮತ್ತು ಪ್ರೀತಿಯಲ್ಲಿ ಬಿದ್ದಾಗ ಏನೆಲ್ಲಾ ಆಗುತ್ತದೆ ಎಂಬುದನ್ನು ತೋರಿಸುವ ಫ್ಯಾಮಿಲಿ ಎಂಟರ್ ಟೈನರ್ ಇದಾಗಿದೆ ಎಂದು ನಿರ್ದೇಶಕ ಶ್ರೀಕಾಂತ್ ತಿಳಿಸಿದ್ದಾರೆ.

'ನಾನು ಮಂಡ್ಯದ ಹುಡುಗ ಶಿವನಾಗಿ ನಟಿಸುತ್ತಿದ್ದೇನೆ ಮತ್ತು ಆತನ ಜೀವನದ ಘಟನೆಗಳು ಈ ಚಿತ್ರದಲ್ಲಿ ದೊಡ್ಡ ವಿಷಯವಾಗಿದೆ' ಎಂದು ಅಭಯ್ ಹೇಳುತ್ತಾರೆ. ಮಂಡ್ಯ ಹೈದ ಚಿತ್ರದಲ್ಲಿ ಬಾಲ ರಾಜವಾಡಿ, ಸುನಂದ್ ಮತ್ತು ಚಂದ್ರಶೇಖರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT