ಪ್ರವೀಣ್ ಕುಮಾರ್ - ಸುದೀಪ್ 
ಸಿನಿಮಾ ಸುದ್ದಿ

ಸುದೀಪ್ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡುತ್ತಿರುವುದು ಖುಷಿಯಾಗಿದೆ: ರಾಜ್ಯ ಮಟ್ಟದ ಕ್ರಿಕೆಟಿಗ ಪ್ರವೀಣ್ ಕುಮಾರ್

ರಾಜ್ಯ ಮಟ್ಟದ ಕ್ರಿಕೆಟಿಗ ಪ್ರವೀಣ್ ಕುಮಾರ್ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ಯುವ ಪ್ರತಿಭೆ, ನಟ ಸುದೀಪ್ ಅವರ ಮುಂದಿನ ಕಲೈಪುಲಿ ಎಸ್ ಥಾನು ಮತ್ತು ಕಿಚ್ಚ ಸುದೀಪ್ ನಿರ್ಮಾಣದ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ರಾಜ್ಯ ಮಟ್ಟದ ಕ್ರಿಕೆಟಿಗ ಪ್ರವೀಣ್ ಕುಮಾರ್ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಈ ಯುವ ಪ್ರತಿಭೆ, ನಟ ಸುದೀಪ್ ಅವರ ಮುಂದಿನ ಕಲೈಪುಲಿ ಎಸ್ ಥಾನು ಮತ್ತು ಕಿಚ್ಚ ಸುದೀಪ್ ನಿರ್ಮಾಣದ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಪ್ರವೀಣ್ ನೆಗೆಟಿವ್ ಶೇಡ್‌ ಇರುವ ಬೈಕ್‌ ಸವಾರನಾಗಿ ಚಿತ್ರದ ಪ್ರಮುಖ ಪಾತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಲಿದ್ದಾರೆ. 'ನಾನು ಯಾವಾಗಲೂ ನಾಟಕ ಮತ್ತು ಚಿತ್ರಮಂದಿರಗಳ ಕಡೆಗೆ ಒಲವನ್ನು ಹೊಂದಿದ್ದೆ ಮತ್ತು ನಟನೆಗೆ ಪ್ರವೇಶಿಸಲು ಉತ್ಸುಕನಾಗಿದ್ದೆ. ಒಂದು ನಿರ್ದಿಷ್ಟ ವಯಸ್ಸಿನ ನಂತರ, ನಾನು ಪೂರ್ಣ ಪ್ರಮಾಣದ ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ ಮತ್ತು ಇದೀಗ ನನ್ನ ನಟನೆಯ ಕನಸು ನನಸಾಗುತ್ತಿರುವುದು ಸಂತೋಷ ನೀಡಿದೆ' ಎಂದು ಅವರು ಹೇಳಿದರು.

ಮ್ಯಾಕ್ಸ್ ಚಿತ್ರವನ್ನು ಇದೇ ಮೊದಲ ಬಾರಿಗೆ ನಿರ್ದೇಶಕನ ಜವಾಬ್ದಾರಿಯನ್ನು ನಿಭಾಯಿಸುತ್ತಿರುವ ವಿಜಯ್ ಕಾರ್ತಿಕೇಯನ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದು ಬಹುಭಾಷಾ ಚಿತ್ರವಾಗಿದೆ. ಚಿತ್ರದ ಶೇ 20 ರಷ್ಟು ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಪ್ರವೀಣ್ ಕುಮಾರ್, ಮುಂದಿನ 5 ರಿಂದ 6 ದಿನಗಳಲ್ಲಿ ಚಿತ್ರೀಕರಣವನ್ನು ಪೂರ್ಣಗೊಳಿಸಲಿದ್ದಾರೆ. 

ಪ್ರವೀಣ್ ಅವರು ಕಿಶನ್ ಜೊತೆಗೆ ಡಿಯರ್ ಕಣ್ಮಣಿ ಚಿತ್ರಕ್ಕಾಗಿ ನಟನೆಯನ್ನು ಪ್ರಾರಂಭಿಸಬೇಕಾಗಿತ್ತು. ಆದರೆ, ದುರದೃಷ್ಟವಶಾತ್, ಆ ಚಿತ್ರ ಪ್ರಾರಂಭವಾಗಲಿಲ್ಲ. ಮ್ಯಾಕ್ಸ್‌ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರ್ನಾಡ್, ಸುಕೃತಾ ವಾಗ್ಲೆ ಮತ್ತು ಅನಿರುದ್ಧ್ ಭಟ್ ಜೊತೆಗೆ ನಟಿಸುತ್ತಿರುವುದಕ್ಕೆ ಅವರು ಉತ್ಸುಕರಾಗಿದ್ದಾರೆ.

ಪ್ರವೀಣ್ ಕುಮಾರ್

KRG ಸ್ಟುಡಿಯೋಸ್ ನಿರ್ಮಾಣದ ರೋಹಿತ್ ಪದಕಿ ನಿರ್ದೇಶನದ ಉತ್ತರಕಾಂಡ, ಶಂಕರ್ ಗುರು ನಿರ್ದೇಶನದ ಅಣ್ಣಾ ಇನ್ ಮೆಕ್ಸಿಕೋ ಸೇರಿದಂತೆ ಇತರೆ ಕೆಲ ಚಿತ್ರಗಳಲ್ಲಿ ಪ್ರವೀಣ್ ನಟಿಸುತ್ತಿದ್ದಾರೆ. 

'ನಾನು ಚಕ್ರವರ್ತಿ ಚಂದ್ರಚೂಡ್ ಅವರ ನಿರ್ದೇಶನದ ಹುಲಿನಾಯಕನ ಭಾಗವಾಗಿದ್ದೇನೆ ಮತ್ತು ನನಗೆ Kirik’ et’11 ಚಿತ್ರದಲ್ಲಿಯೂ ಪಾತ್ರ ಸಿಕ್ಕಿದೆ. ಕ್ಯಾಮೆರಾವನ್ನು ಎದುರಿಸುವುದೇ ಒಂದು ವಿಶೇಷವಾದ ಅನುಭವವಾಗಿದ್ದು, ಕ್ರಿಕೆಟ್ ಬಗ್ಗೆ ನನಗಿದ್ದ ಉತ್ಸಾಹವೇ ಇಲ್ಲಿಯೂ ಕಾಣುತ್ತಿದೆ. ನಾನು ಕ್ಯಾಮೆರಾಗೆ ನಾಚಿಕೆಪಡುವವನಲ್ಲ ಮತ್ತು ಆರ್ಕ್ ಲೈಟ್‌ಗಳನ್ನು ಆನಂದಿಸುತ್ತೇನೆ' ಎಂದು ಹೇಳುತ್ತಾರೆ ಪ್ರವೀಣ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ವ್ಯಾಪಾರ ಒಪ್ಪಂದ ಹಳ್ಳ ಹಿಡಿದಿದೆ': ಲುಟ್ನಿಕ್ ಹೇಳಿಕೆ ತಳ್ಳಿಹಾಕಿದ MEA, ಹೇಳಿದ್ದೇನು?

ದ್ವೇಷ ಭಾಷಣ ಬಿಟ್ಟು 19 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತ; ಎರಡು ಮಸೂದೆ ವಾಪಸ್

ಬಳ್ಳಾರಿ ಬ್ಯಾನರ್​​ ಗಲಾಟೆ ಪ್ರಕರಣ:​​ ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ

ಹಿಮಾಚಲ: 500 ಅಡಿ ಆಳದ ಕಂದಕಕ್ಕೆ ಉರುಳಿದ ಬಸ್; ಭೀಕರ ಅಪಘಾತದಲ್ಲಿ 9 ಮಂದಿ ಸಾವು

ಮಹಾರಾಷ್ಟ್ರದಲ್ಲಿ ಹೊಸ ಟ್ವಿಸ್ಟ್: ಬಿಜೆಪಿ ಹೊರಗಿಡಲು ಶಿವಸೇನೆ-NCP ಮೈತ್ರಿ!

SCROLL FOR NEXT