ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ 
ಸಿನಿಮಾ ಸುದ್ದಿ

ಮದುವೆಗೆ ಸಂಬಂಧಿಸಿದ ಸ್ಕ್ರಿಪ್ಟ್‌ಗಳು ಯಾವಾಗಲೂ ಉತ್ತಮ ಸಿನಿಮಾ ಆಗುತ್ತವೆ: ಲವ್ ಬರ್ಡ್ಸ್ ಬಗ್ಗೆ ಕೃಷ್ಣ-ಮಿಲನಾ ಮಾತು

ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಮದುವೆಯಾಗಿ ಎರಡು ವರ್ಷ ಕಳೆದಿದೆ. ‘ಲವ್‌ ಮಾಕ್ಟೇಲ್‌’ ಮತ್ತು ‘ಲವ್‌ ಮಾಕ್ಟೇಲ್‌ 2' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದ್ದ ಇಬ್ಬರು ಮತ್ತೆ ಪಿಸಿ ಶೇಖರ್ ಅವರ ಮುಂಬರುವ ರೋಮ್ಯಾಂಟಿಕ್ ಡ್ರಾಮಾ 'ಲವ್ ಬರ್ಡ್ಸ್‌' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಮದುವೆಯಾಗಿ ಎರಡು ವರ್ಷ ಕಳೆದಿದೆ. ‘ಲವ್‌ ಮಾಕ್ಟೇಲ್‌’ ಮತ್ತು ‘ಲವ್‌ ಮಾಕ್ಟೇಲ್‌ 2' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡು ಮೆಚ್ಚುಗೆಗೆ ಪಾತ್ರವಾಗಿದ್ದ ಇಬ್ಬರು ಮತ್ತೆ ಪಿಸಿ ಶೇಖರ್ ಅವರ ಮುಂಬರುವ ರೋಮ್ಯಾಂಟಿಕ್ ಡ್ರಾಮಾ 'ಲವ್ ಬರ್ಡ್ಸ್‌' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಕೃಷ್ಣ ಮತ್ತು ಮಿಲನಾ ಚಿತ್ರ ಬಿಡುಗಡೆಗೆ ಮುನ್ನ ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡುತ್ತಾ, 'ಲವ್‌ ಮಾಕ್ಟೇಲ್‌ ಸರಣಿಯೊಂದಿಗೆ ಮತ್ತು ಈಗ ಲವ್ ಬರ್ಡ್ಸ್‌ನೊಂದಿಗೆ ನಮ್ಮ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ಪ್ರಯಾಣದಲ್ಲಿ ಪ್ರೀತಿಯು ಎಂದಿಗೂ ಮರೆಯಾಗುತ್ತಿಲ್ಲ ಎಂದು ನಗುವ ಮಿಲನಾ, 'ನಾನು ಲವ್ ಬರ್ಡ್ಸ್ ಅನ್ನು ಔಟ್ ಅಂಡ್ ಔಟ್ ಫ್ಯಾಮಿಲಿ ಎಂಟರ್‌ಟೈನರ್ ಎಂದು ಕರೆಯಲು ಬಯಸುತ್ತೇನೆ ಮತ್ತು ಶೀರ್ಷಿಕೆಯು ಅಂತಹ ಕಥಾವಸ್ತುವಿಗೆ ಸೂಕ್ತವಾಗಿದೆ ಎನ್ನುತ್ತಾರೆ. ಕೃಷ್ಣ ಮಾತನಾಡಿ, ಮದುವೆಯ ಮೊದಲು ಮತ್ತು ನಂತರ ಪ್ರೀತಿ ತುಂಬಾ ಜೀವಂತವಾಗಿರುತ್ತದೆ. ಇದು ಯಾವಾಗಲೂ ರೋಮಾಂಚನಕಾರಿಯಾಗಿ ಉಳಿಯುತ್ತದೆ. ಮಿಲನಾ ಮತ್ತು ನಾನು ಹೀಗೆಯೇ ಕಾಯ್ದುಕೊಂಡಿದ್ದೇವೆ. ಆದಾಗ್ಯೂ, ನಟರಾಗಿ ನಾವು ಕೆಲಸಕ್ಕೆ ಬಂದಾಗ ಸಂಪೂರ್ಣವಾಗಿ ವೃತ್ತಿಪರರಾಗಿದ್ದೇವೆ' ಎಂದು ಹೇಳುತ್ತಾರೆ.

ಲವ್ ಬರ್ಡ್ಸ್ ಚಿತ್ರಕ್ಕಾಗಿ ಕೃಷ್ಣನನ್ನು ಮೊದಲು ಆಯ್ಕೆ ಮಾಡಲಾಯಿತು ಮತ್ತು ನಂತರ ನಿರ್ದೇಶಕರು ಮಿಲನಾ ಅವರನ್ನು ಕರೆತಂದರು. ತನ್ನ ಪತಿಯೊಂದಿಗೆ ಕೆಲಸ ಮಾಡಲು ಏಕೆ ಆರಿಸಿಕೊಂಡೆ ಎಂಬುದಕ್ಕೆ ಉತ್ತರಿಸುವ ಮಿಲನಾ, 'ಲವ್ ಮಾಕ್ಟೇಲ್ ಸರಣಿಯು ನಮ್ಮ ಪಾತ್ರಗಳು ಪ್ರೀತಿಯಲ್ಲಿ ಮುಳುಗಿರುವುದನ್ನು ತೋರಿಸಿದರೆ, ಲವ್ ಬರ್ಡ್ಸ್ ಜಗಳಗಳು ಮತ್ತು ವಾದಗಳಲ್ಲಿ ತೊಡಗಿರುವ ದಂಪತಿಯನ್ನು ಒಳಗೊಂಡಿದೆ. ನಮ್ಮ ಪಾತ್ರಗಳಾದ ದೀಪಕ್ ಮತ್ತು ಪೂಜಾ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯ ಸನ್ನಿವೇಶಗಳನ್ನು ಪ್ರಸ್ತುತಪಡಿಸುತ್ತಾರೆ. ನಮ್ಮ ಹಿಂದಿನ ಚಿತ್ರಗಳು ಹೀಗಿರಲಿಲ್ಲ, ಅದಕ್ಕಾಗಿಯೇ ನಾವು ಲವ್ ಬರ್ಡ್ಸ್ ಅನ್ನು ಆರಿಸಿದ್ದೇವೆ. ಇದು ಎಲ್ಲರಿಗೂ ಸಂಬಂಧಿಸಬಹುದಾದ ಕಥೆಯಾಗಲಿದೆ ಎಂದು ನನಗೆ ವಿಶ್ವಾಸವಿದೆ' ಎಂದು ಅವರು ಹೇಳುತ್ತಾರೆ.

ಲವ್ ಬರ್ಡ್ಸ್ ಆಧುನಿಕ ದಂಪತಿಗಳ ಸುತ್ತ ಸುತ್ತುತ್ತದೆ ಮತ್ತು ಅವರು ಮದುವೆಯ ನಂತರ ಯಶಸ್ವಿ ಜೀವನವನ್ನು ಹೇಗೆ ನಡೆಸುತ್ತಾರೆ. ಮದುವೆಯು ಗಂಭೀರ ಸಮಸ್ಯೆಯೇ ಎಂದು ಕೇಳಿದಾಗ, 'ಇದು ದಂಪತಿ ಅದನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ನಿಯಮಗಳೊಂದಿಗೆ ಓವರ್‌ಲೋಡ್ ಆಗಿದ್ದರೆ, ಅದು ಗಂಭೀರವಾಗಿರಬಹುದು. ವಿಷಯಗಳನ್ನು ಲಘುವಾಗಿ ತೆಗೆದುಕೊಂಡಾಗ ಸಂಬಂಧಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎನ್ನುತ್ತಾರೆ. ಕೃಷ್ಣ ಮಾತನಾಡಿ, 'ಮದುವೆಯನ್ನು ಚೆನ್ನಾಗಿ ನಿಭಾಯಿಸಿದರೆ ಒಳ್ಳೆಯದಾಗುತ್ತದೆ. 'ಒಬ್ಬರು ವೃತ್ತಿಜೀವನವನ್ನು ನಿರ್ವಹಿಸುವಂತೆಯೇ ಸಂತೋಷದ ವೈವಾಹಿಕ ಜೀವನವನ್ನು ನಡೆಸಲು ಕಲಿಯಬೇಕು' ಎಂದು ಅವರು ಹೇಳುತ್ತಾರೆ.

ಕೃಷ್ಣ ಮತ್ತು ಮಿಲನಾ ಅವರಿಗೆ ಮದುವೆ ಎಂದಾಗ ನಡೆಯುವ ಎಲ್ಲಾ ಪ್ರಕ್ರಿಯೆಗಳು ಉತ್ತಮ ಮನರಂಜನೆ ನೀಡುತ್ತವೆ. 'ಪ್ರೀತಿ ಅಥವಾ ಮ್ಯಾಟ್ರಿಮೋನಿ ಮೂಲಕ ಹುಡುಗ ಮತ್ತು ಹುಡುಗಿಯ ಹುಡುಕಾಟದಿಂದ ಪ್ರಾರಂಭವಾಗುವ ಮದುವೆಯು ಪ್ರಕ್ರಿಯೆಯು, ನಂತರದ ಜೀವನವು ಪ್ರತಿ ದಿನವೂ ಆಸಕ್ತಿದಾಯಕವಾಗಿರುತ್ತದೆ' ಎನ್ನುತ್ತಾರೆ ಮಿಲಾನಾ. 'ಮದುವೆಗೆ ಸಂಬಂಧಿಸಿದ ಸ್ಕ್ರಿಪ್ಟ್ ಯಾವಾಗಲೂ ಉತ್ತಮ ಸಿನಿಮಾಗೆ ದಾರಿ ಮಾಡಿಕೊಡುತ್ತದೆ' ಎಂದು ಕೃಷ್ಣ ಹೇಳುತ್ತಾರೆ.

ಆದರ್ಶ ದಂಪತಿ ಎಂದು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುವ ಕೃಷ್ಣ ಮತ್ತು ಮಿಲನಾ ಲವ್ ಬರ್ಡ್ಸ್‌ನಲ್ಲಿ ತಮಗೆ ವಿರುದ್ಧವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಪರಸ್ಪರರ ವಿರುದ್ಧ ಹೋರಾಡುತ್ತಿದ್ದಾರೆ. 'ನಾವು ನಿರಂತರವಾಗಿ ಜಗಳಗಳು ಮತ್ತು ವಾದಗಳಲ್ಲಿ ತೊಡಗಿಸಿಕೊಂಡಾಗ ಅದು ತುಂಬಾ ತಮಾಷೆಯಾಗಿತ್ತು. ದಂಪತಿ ನಡುವಿನ ಆಂತರಿಕ ಘರ್ಷಣೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಚಿತ್ರವು ತಿಳಿಸಲು ಪ್ರಯತ್ನಿಸುತ್ತದೆ. ಇದು ಈಗ ಒಂದು ಪ್ರಮುಖ ವಿಷಯವಾಗಿದೆ' ಎಂದು ಮಿಲನಾ ಹೇಳುತ್ತಾರೆ. ಆದರೆ, ಕೃಷ್ಣ ಅವರು ಸಿನಿಮಾದಲ್ಲಿನ ಫೈಟ್ ದೃಶ್ಯಗಳನ್ನು ಆನಂದಿಸಿದ್ದಾರೆ ಮತ್ತು ‘ಆನ್‌ಸ್ಕ್ರೀನ್’ನಲ್ಲಿ ತನ್ನ ಹೆಂಡತಿಯೊಂದಿಗೆ ಕೂಗಾಡುವುದು ಹಾಯಾಗಿತ್ತು ಎನ್ನುತ್ತಾರೆ.

ಲವ್ ಬರ್ಡ್ಸ್ ಅನ್ನು ಕಡ್ಡಿಪುಡಿ ಚಂದ್ರು ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ವೀಣಾ ಸುಂದರ್ ಮತ್ತು ಖ್ಯಾತ ಯೂಟ್ಯೂಬರ್ ಗೌರವ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಮತ್ತು ಶಕ್ತಿ ಶೇಖರ್ ಕ್ರಮವಾಗಿ ಸಂಗೀತ ಮತ್ತು ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT