ಲಾವಣ್ಯ ಸಾಹುಕಾರ್ ಮತ್ತು ಅಕ್ಷಿತ್ ಶಶಿಕುಮಾರ್ 
ಸಿನಿಮಾ ಸುದ್ದಿ

ಬಹುಭಾಷಾ ಆಕ್ಷನ್ ಥ್ರಿಲ್ಲರ್‌ಗಾಗಿ ಒಂದಾಗಿದ್ದಾರೆ ಅಕ್ಷಿತ್ ಶಶಿಕುಮಾರ್ ಮತ್ತು ಸತೀಶ್ ಮಲೆಂಪಟಿ

ಕಿರುಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಸತೀಶ್ ಮಲೆಂಪಟಿ ಅವರು ಬಹುಭಾಷಾ ಆಕ್ಷನ್ ಥ್ರಿಲ್ಲರ್‌ನೊಂದಿಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಅಕ್ಷಿತ್ ಶಶಿಕುಮಾರ್ ನಾಯಕನಾಗಿ ನಟಿಸಿದ್ದಾರೆ.

ಕಿರುಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಸತೀಶ್ ಮಲೆಂಪಟಿ ಅವರು ಬಹುಭಾಷಾ ಆಕ್ಷನ್ ಥ್ರಿಲ್ಲರ್‌ನೊಂದಿಗೆ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಅಕ್ಷಿತ್ ಶಶಿಕುಮಾರ್ ನಾಯಕನಾಗಿ ನಟಿಸಿದ್ದಾರೆ. ಒಂದೊಂದು ಭಾಷೆಯಲ್ಲೂ ವಿಭಿನ್ನ ಶೀರ್ಷಿಕೆಗಳಿರುವ ಈ ಚಿತ್ರಕ್ಕೆ ಕನ್ನಡದಲ್ಲಿ 'ಕಾಡಾಡಿ' ಎಂದು ಹೆಸರಿಡಲಾಗಿದೆ. ಚಿತ್ರೀಕರಣ ಮುಗಿದ ನಂತರ, ನಿರ್ಮಾಪಕರು ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಕೆಲವು ಸ್ಟಿಲ್‌ಗಳನ್ನು ಹಂಚಿಕೊಂಡಿದ್ದಾರೆ.

ಕೊನೆಯದಾಗಿ ಹಿಟ್ 2 ನಲ್ಲಿ ಕಾಣಿಸಿಕೊಂಡ ಲಾವಣ್ಯ ಸಾಹುಕಾರ ಅವರು ಮಹಿಳಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಕಥೆಯು ಈ ನಟಿಯ ಸುತ್ತ ಸುತ್ತುತ್ತದೆ. ಚಾಂದಿನಿ ತಮಿಳರಸನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

ಇನ್ನುಳಿದಂತೆ ಚಿತ್ರದಲ್ಲಿ ಬೆಲ್ ಬಾಟಮ್ ನಟ, ಆರ್‌ಜೆ ಎಸ್‌ಟಿ ಸತೀಶ್ ಚಂದ್ರ, ರಾಘು ರಾಮಣ್ಣಕೊಪ್ಪ, ರವಿ ಕಾಳೆ, ತೆಲುಗು ನಟರಾದ ಪೋಸಾನಿ ಕೃಷ್ಣ ಮುರಳಿ, ಶ್ರವಣ್ ರಾಘವೇಂದ್ರ, ತಮಿಳು ನಟಿ ಮಾರಿಮುತ್ತು ಇತರರು ನಟಿಸಿದ್ದಾರೆ. ಡಿ ಯೋಗಿ ಪ್ರಸಾದ್ ಅವರ ಛಾಯಾಗ್ರಹಣದೊಂದಿಗೆ, ಸಂಯೋಜಕ ಭೀಮ್ ಸಿಸಿರೋಲಿಯೊ ಅವರ ಸಂಗೀತವಿದೆ.

'ವಿಶೇಷ ಹಾಡೊಂದನ್ನು ಹೊರತುಪಡಿಸಿ ಉಳಿದ ಎಲ್ಲಾ ಭಾಗಗಳ ಚಿತ್ರೀಕರಣವನ್ನು ನಾವು ಪೂರ್ಣಗೊಳಿಸಿದ್ದೇವೆ. ಅದಕ್ಕೆ ನಟರನ್ನು ಅಂತಿಮಗೊಳಿಸಿದ ನಂತರ ಅದನ್ನು ಚಿತ್ರೀಕರಿಸಲಾಗುವುದು' ಎಂದು ಸತೀಶ್ ಮಲೆಂಪಟಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT