ಸಿನಿಮಾ ಸುದ್ದಿ

 'ವಾಲ್ಟೇರ್ ವೀರಯ್ಯ' ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಗೈರು: ಮಾಧ್ಯಮಗಳ ವಿರುದ್ಧ ನಟಿ ಶ್ರುತಿ ಹಾಸನ್ ಕಿಡಿ

Nagaraja AB

ಮುಂಬೈ:  ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ 'ವಾಲ್ಟೇರ್ ವೀರಯ್ಯ' ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಗೈರಾದ ಬಗ್ಗೆ ಮಾಧ್ಯಮಗಳ ವರದಿಗಳ ಬಗ್ಗೆ ನಟಿ ಶ್ರುತಿ ಹಾಸನ್ ತಿರುಗಿ ಬಿದಿದ್ದಾರೆ. ಮಾನಸಿಕ ತೊಂದರೆಯಿಂದ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದ್ದವು. 

ಈ ಸಂಬಂಧ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಶ್ರುತಿ ಹಾಸನ್, ವೈರಲ್ ಜ್ವರದ ಕಾರಣದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.'

'ಈ ರೀತಿಯ ತಪ್ಪು ಮಾಹಿತಿ ಮತ್ತು  ಅತಿಯಾದ ನಾಟಕೀಯತೆ ಅಥವಾ ಚೆಲ್ಲಾಟದಿಂದ ಜನರು ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಲು ಹೆದರುತ್ತಾರೆ . ಏನನ್ನು ಊಹಿಸಿ? ಇದು ಕೆಲಸ ಮಾಡುವುದಿಲ್ಲ. ನಾನು ಯಾವಾಗಲೂ ಮಾನಸಿಕ ಆರೋಗ್ಯದ ಕಡೆ ಗಮನಹರಿಸುತ್ತಿರುತ್ತೇನೆ.  ಯಾವಾಗಲೂ ನನ್ನ ಎಲ್ಲಾ ಅಂಶಗಳ ಬಗ್ಗೆ ಕಾಳಜಿಯನ್ನು ಪ್ರೋತ್ಸಾಹಿಸುತ್ತೇನೆ. ನನಗೆ ವೈರಲ್ ಜ್ವರವಿತ್ತು. ಈ ಕಾರಣದಿಂದ ಸಮಾರಂಭದಿಂದ ದೂರು ಉಳಿದಿದ್ದಾಗಿ ಬರೆದುಕೊಂಡಿದ್ದಾರೆ. 

'ವಾಲ್ಟೇರ್ ವೀರಯ್ಯ' ತೆಲುಗು ಹಾಗೂ ಹಿಂದಿ ವರ್ಸನ್ ನಲ್ಲಿ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು,  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 
 

SCROLL FOR NEXT