ನಟಿ ರಜಿನಿ 
ಸಿನಿಮಾ ಸುದ್ದಿ

ಕಿರುತೆರೆಗೂ, ಸಿನಿಮಾ ನಟನೆಗೂ ಯಾವುದೇ ವ್ಯತ್ಯಾಸವಿಲ್ಲ: 'ಅಂಬುಜಾ' ಚಿತ್ರದ ನಟಿ ರಜಿನಿ

'ಅಂಬುಜಾ' ಸಿನಿಮಾ ನಟಿ ಶುಭಾ ಪೂಂಜಾ ಅವರ 50ನೇ ಸಿನಿಮಾ ಆಗಿದ್ದು, ದೂರದರ್ಶನದಲ್ಲಿ ತಮ್ಮ ಛಾಪು ಮೂಡಿಸಿರುವ ಮತ್ತು ದಶಕಗಳ ಅನುಭವವನ್ನು ಹೊಂದಿರುವ ನಟಿ ರಜಿನಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ.

'ಅಂಬುಜಾ' ಸಿನಿಮಾ ನಟಿ ಶುಭಾ ಪೂಂಜಾ ಅವರ 50ನೇ ಸಿನಿಮಾ ಆಗಿದ್ದು, ದೂರದರ್ಶನದಲ್ಲಿ ತಮ್ಮ ಛಾಪು ಮೂಡಿಸಿರುವ ಮತ್ತು ದಶಕಗಳ ಅನುಭವವನ್ನು ಹೊಂದಿರುವ ನಟಿ ರಜಿನಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ. ಶ್ರೀನಿ ಹನುಮಂತರಾಜು ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಕುರಿತು ಮಾತನಾಡುವ ರಜಿನಿ, ಸಣ್ಣ ಪರದೆ ಮತ್ತು ಬೆಳ್ಳೆ ತೆರೆಯ ನಟನೆ ಕುರಿತು ಮಾತನಾಡುತ್ತಾರೆ. 'ಕೆಲಸ, ಸಮಯ ಮತ್ತು ಶಾಟ್ ಆವರ್ತನದ ಮಾಧ್ಯಮ ಮಾತ್ರ ಭಿನ್ನವಾಗಿರುತ್ತದೆ ಎನ್ನುತ್ತಾರೆ. 

ರಜಿನಿ ಬೆಳ್ಳಿತೆರೆಯಲ್ಲಿ ಮಿಂಚಲು ಇಚ್ಛಿಸುತ್ತಾರಾ? ಎಂದು ಕೇಳಿದ ಪ್ರಶ್ನೆಗೆ 'ಹೌದು, ನಿಜವಾಗಿ', ಎಂದು ತಕ್ಷಣವೇ ಉತ್ತರಿಸುತ್ತಾರೆ. 'ಜನಪ್ರಿಯ ಧಾರಾವಾಹಿಯಾದ 'ಅಮೃತವರ್ಷಿಣಿ' ತಯಾರಿಕೆಯ ಸಮಯದಲ್ಲಿಯೂ ಸಹ, ನಿರ್ದೇಶಕರಿಂದ ಹಲವಾರು ಆಫರ್‌ಗಳು ನನಗೆ ಬಂದಿದ್ದವು. ಆದರೆ, ಆ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ಹೇಳುತ್ತಾರೆ.

ಇದೀಗ, ಶ್ರೀನಿ ಹನುಮಂತರಾಜು ಅವರ ಮಹಿಳಾ ಪ್ರಧಾನ ಸಿನಿಮಾದ ಭಾಗವಾಗಲು ಮತ್ತು ಶೀರ್ಷಿಕೆಯ ಪಾತ್ರವನ್ನೇ ನಿಭಾಯಿಸಲು ನನ್ನನ್ನು ಸಂಪರ್ಕಿಸಿದಾಗ, ಒಪ್ಪಿಕೊಳ್ಳದೇ ಇರಲು ನನಗೆ ಯಾವುದೇ ಕಾರಣಗಳು ಇರಲಿಲ್ಲ. ನನ್ನ ಕನಸನ್ನು ನನಸು ಮಾಡಿದ ಅಂಬುಜಾ ಸಿನಿಮಾದ ಭಾಗವಾಗಲು ನನಗೆ ಸಂತೋಷವಾಯಿತು ಎಂದು ಅವರು ಹೇಳುತ್ತಾರೆ.

ಅಂಬುಜಾ ಸಿನಿಮಾದಲ್ಲಿ ರಜಿನಿ ಒಂದು ಬಲಿಷ್ಠವಾದ ಲಂಬಾಣಿ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಲಂಬಾಣಿ ಉಡುಗೆ 25 ಕಿಲೋಗ್ರಾಂಗಳಷ್ಟು ತೂಗುತ್ತದೆ. ಇದು ಒಂದು ವಿಶಿಷ್ಟವಾದ ಸವಾಲುಗಳನ್ನು ಒಡ್ಡುತ್ತದೆ. ನಾನು ನನ್ನ ಪಾತ್ರಕ್ಕೆ ಅಭಿನಯಿಸುವಾಗ ವೇಷಭೂಷಣದ ತೂಕದಿಂದಾಗಿ ನೃತ್ಯವು ಪ್ರಯಾಸದಾಯಕ ಕೆಲಸವಾಯಿತು. ಆದರೂ, ನಾನು ಪಾತ್ರಕ್ಕೆ ಅಗತ್ಯವಿರುವ ನ್ಯಾಯ ಸಲ್ಲಿಸಿದ್ದೇನೆ' ಎನ್ನುತ್ತಾರೆ ರಜಿನಿ.

ಅಂಬುಜಾ ಜೊತೆಗೆ, ರಜಿನಿ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಿರ್ಮಾಣದ ವಿವಿಧ ಹಂತಗಳಲ್ಲಿರುವ 'ಅಸುರನ ಕೈಯಲಿ ಪಾರಿಜಾತ' ಮತ್ತು ಇನ್ನೂ ಹೆಸರಿಸದ ಚಿತ್ರವೊಂದರಲ್ಲಿ ರಜಿನಿ ನಟಿಸುತ್ತಿದ್ದಾರೆ. 'ನಾನು ಸದ್ಯ ಧಾರಾವಾಹಿಗಳು ಮತ್ತು ಚಲನಚಿತ್ರಗಳ ಕ್ಷೇತ್ರಗಳ ನಡುವಿನ ಈ ಸ್ಥಿತ್ಯಂತರವನ್ನು ಆನಂದಿಸುತ್ತಿದ್ದೇನೆ ಮತ್ತು ನಾನು ಎರಡೂ ಮಾಧ್ಯಮವನ್ನು ಉತ್ಸಾಹ ಮತ್ತು ಸಂತೋಷದಿಂದ ನಿರ್ವಹಿಸುತ್ತಿದ್ದೇನೆ' ಎಂದು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT