ನಟಿ ರಜಿನಿ 
ಸಿನಿಮಾ ಸುದ್ದಿ

ಕಿರುತೆರೆಗೂ, ಸಿನಿಮಾ ನಟನೆಗೂ ಯಾವುದೇ ವ್ಯತ್ಯಾಸವಿಲ್ಲ: 'ಅಂಬುಜಾ' ಚಿತ್ರದ ನಟಿ ರಜಿನಿ

'ಅಂಬುಜಾ' ಸಿನಿಮಾ ನಟಿ ಶುಭಾ ಪೂಂಜಾ ಅವರ 50ನೇ ಸಿನಿಮಾ ಆಗಿದ್ದು, ದೂರದರ್ಶನದಲ್ಲಿ ತಮ್ಮ ಛಾಪು ಮೂಡಿಸಿರುವ ಮತ್ತು ದಶಕಗಳ ಅನುಭವವನ್ನು ಹೊಂದಿರುವ ನಟಿ ರಜಿನಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ.

'ಅಂಬುಜಾ' ಸಿನಿಮಾ ನಟಿ ಶುಭಾ ಪೂಂಜಾ ಅವರ 50ನೇ ಸಿನಿಮಾ ಆಗಿದ್ದು, ದೂರದರ್ಶನದಲ್ಲಿ ತಮ್ಮ ಛಾಪು ಮೂಡಿಸಿರುವ ಮತ್ತು ದಶಕಗಳ ಅನುಭವವನ್ನು ಹೊಂದಿರುವ ನಟಿ ರಜಿನಿ ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸುತ್ತಿದ್ದಾರೆ. ಶ್ರೀನಿ ಹನುಮಂತರಾಜು ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಕುರಿತು ಮಾತನಾಡುವ ರಜಿನಿ, ಸಣ್ಣ ಪರದೆ ಮತ್ತು ಬೆಳ್ಳೆ ತೆರೆಯ ನಟನೆ ಕುರಿತು ಮಾತನಾಡುತ್ತಾರೆ. 'ಕೆಲಸ, ಸಮಯ ಮತ್ತು ಶಾಟ್ ಆವರ್ತನದ ಮಾಧ್ಯಮ ಮಾತ್ರ ಭಿನ್ನವಾಗಿರುತ್ತದೆ ಎನ್ನುತ್ತಾರೆ. 

ರಜಿನಿ ಬೆಳ್ಳಿತೆರೆಯಲ್ಲಿ ಮಿಂಚಲು ಇಚ್ಛಿಸುತ್ತಾರಾ? ಎಂದು ಕೇಳಿದ ಪ್ರಶ್ನೆಗೆ 'ಹೌದು, ನಿಜವಾಗಿ', ಎಂದು ತಕ್ಷಣವೇ ಉತ್ತರಿಸುತ್ತಾರೆ. 'ಜನಪ್ರಿಯ ಧಾರಾವಾಹಿಯಾದ 'ಅಮೃತವರ್ಷಿಣಿ' ತಯಾರಿಕೆಯ ಸಮಯದಲ್ಲಿಯೂ ಸಹ, ನಿರ್ದೇಶಕರಿಂದ ಹಲವಾರು ಆಫರ್‌ಗಳು ನನಗೆ ಬಂದಿದ್ದವು. ಆದರೆ, ಆ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ಹೇಳುತ್ತಾರೆ.

ಇದೀಗ, ಶ್ರೀನಿ ಹನುಮಂತರಾಜು ಅವರ ಮಹಿಳಾ ಪ್ರಧಾನ ಸಿನಿಮಾದ ಭಾಗವಾಗಲು ಮತ್ತು ಶೀರ್ಷಿಕೆಯ ಪಾತ್ರವನ್ನೇ ನಿಭಾಯಿಸಲು ನನ್ನನ್ನು ಸಂಪರ್ಕಿಸಿದಾಗ, ಒಪ್ಪಿಕೊಳ್ಳದೇ ಇರಲು ನನಗೆ ಯಾವುದೇ ಕಾರಣಗಳು ಇರಲಿಲ್ಲ. ನನ್ನ ಕನಸನ್ನು ನನಸು ಮಾಡಿದ ಅಂಬುಜಾ ಸಿನಿಮಾದ ಭಾಗವಾಗಲು ನನಗೆ ಸಂತೋಷವಾಯಿತು ಎಂದು ಅವರು ಹೇಳುತ್ತಾರೆ.

ಅಂಬುಜಾ ಸಿನಿಮಾದಲ್ಲಿ ರಜಿನಿ ಒಂದು ಬಲಿಷ್ಠವಾದ ಲಂಬಾಣಿ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಲಂಬಾಣಿ ಉಡುಗೆ 25 ಕಿಲೋಗ್ರಾಂಗಳಷ್ಟು ತೂಗುತ್ತದೆ. ಇದು ಒಂದು ವಿಶಿಷ್ಟವಾದ ಸವಾಲುಗಳನ್ನು ಒಡ್ಡುತ್ತದೆ. ನಾನು ನನ್ನ ಪಾತ್ರಕ್ಕೆ ಅಭಿನಯಿಸುವಾಗ ವೇಷಭೂಷಣದ ತೂಕದಿಂದಾಗಿ ನೃತ್ಯವು ಪ್ರಯಾಸದಾಯಕ ಕೆಲಸವಾಯಿತು. ಆದರೂ, ನಾನು ಪಾತ್ರಕ್ಕೆ ಅಗತ್ಯವಿರುವ ನ್ಯಾಯ ಸಲ್ಲಿಸಿದ್ದೇನೆ' ಎನ್ನುತ್ತಾರೆ ರಜಿನಿ.

ಅಂಬುಜಾ ಜೊತೆಗೆ, ರಜಿನಿ ಇನ್ನೂ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಿರ್ಮಾಣದ ವಿವಿಧ ಹಂತಗಳಲ್ಲಿರುವ 'ಅಸುರನ ಕೈಯಲಿ ಪಾರಿಜಾತ' ಮತ್ತು ಇನ್ನೂ ಹೆಸರಿಸದ ಚಿತ್ರವೊಂದರಲ್ಲಿ ರಜಿನಿ ನಟಿಸುತ್ತಿದ್ದಾರೆ. 'ನಾನು ಸದ್ಯ ಧಾರಾವಾಹಿಗಳು ಮತ್ತು ಚಲನಚಿತ್ರಗಳ ಕ್ಷೇತ್ರಗಳ ನಡುವಿನ ಈ ಸ್ಥಿತ್ಯಂತರವನ್ನು ಆನಂದಿಸುತ್ತಿದ್ದೇನೆ ಮತ್ತು ನಾನು ಎರಡೂ ಮಾಧ್ಯಮವನ್ನು ಉತ್ಸಾಹ ಮತ್ತು ಸಂತೋಷದಿಂದ ನಿರ್ವಹಿಸುತ್ತಿದ್ದೇನೆ' ಎಂದು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT