ಹೊಯ್ಸಳ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಧನಂಜಯ್ ನಟನೆಯ ಹೊಯ್ಸಳ ಈಗ 'ಗುರುದೇವ ಹೊಯ್ಸಳ', ಪೊಲೀಸ್ ಇಲಾಖೆಗೆ ಸಿನಿಮಾ ಅರ್ಪಣೆ

ಹೊಯ್ಸಳ ಸಿನಿಮಾ ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಚಿತ್ರದ ಸಂಗೀತ ಮತ್ತು ಟೀಸರ್‌ ಚಿತ್ರಪ್ರೇಮಿಗಳಿಗೆ ಇಷ್ಟವಾಗಿದೆ. ಈ ಸಿನಿಮಾವನ್ನು ಇದೀಗ ಪೊಲೀಸ್ ಇಲಾಖೆಗೆ ಅರ್ಪಿಸುತ್ತಿರುವ ಚಿತ್ರತಂಡ, ಸದ್ಯ ಉತ್ತರ ಕರ್ನಾಟಕದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ.

ಹೊಯ್ಸಳ ಸಿನಿಮಾ ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಚಿತ್ರದ ಸಂಗೀತ ಮತ್ತು ಟೀಸರ್‌ ಚಿತ್ರಪ್ರೇಮಿಗಳಿಗೆ ಇಷ್ಟವಾಗಿದೆ. ಈ ಸಿನಿಮಾವನ್ನು ಇದೀಗ ಪೊಲೀಸ್ ಇಲಾಖೆಗೆ ಅರ್ಪಿಸುತ್ತಿರುವ ಚಿತ್ರತಂಡ, ಸದ್ಯ ಉತ್ತರ ಕರ್ನಾಟಕದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ.

ವಿಜಯ್ ಎನ್ ನಿರ್ದೇಶನದ ಚಿತ್ರವು ರತ್ನನ್ ಪ್ರಪಂಚ ನಂತರ ಧನಂಜಯ್ ಮತ್ತು ನಿರ್ಮಾಪಕರಾದ ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಗೌಡ ನಡುವಿನ ಎರಡನೇ ಸಿನಿಮಾವಾಗಿದೆ. ಮಾಧ್ಯಮಗಳ ಜೊತೆಗಿನ ಸಂವಾದದಲ್ಲಿ, 'ಧನಂಜಯ್ ಅವರು ಯಾವಾಗಲೂ ಸಮಾಜಕ್ಕೆ ಸಂದೇಶವನ್ನು ನೀಡುವ ಚಲನಚಿತ್ರವನ್ನು ಮಾಡಲು ಬಯಸುತ್ತಾರೆ ಮತ್ತು ಹೊಯ್ಸಳ ಮೂಲಕ ಅಂತಹ ಒಂದು ವಿಷಯವನ್ನು ಸಮಾಜಕ್ಕೆ ತಿಳಿಸುತ್ತಿದ್ದಾರೆ' ಎಂದು ಹೇಳಿದರು.

ಗುರುದೇವ ಹೊಯ್ಸಳ ತಂಡ

'ನಾವು ಶೀರ್ಷಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದೇವೆ. ಚಿತ್ರಕ್ಕೆ ಈಗ ಗುರುದೇವ ಹೊಯ್ಸಳ ಎಂದು ಶೀರ್ಷಿಕೆ ಇಡಲಾಗುವುದು. ನಾವು ರಾಮು ಫಿಲ್ಮ್ಸ್‌ನಿಂದ ಶೀರ್ಷಿಕೆಯನ್ನು ಪಡೆದುಕೊಂಡಿದ್ದೇವೆ. ಕುತೂಹಲಕಾರಿಯೆಂದರೆ, ಅದೇ ಹೆಸರಿನ ಮತ್ತೊಂದು ಚಲನಚಿತ್ರವಿದೆ. ಅದರ ಚಿತ್ರೀಕರಣ ಮತ್ತು ಸೆನ್ಸಾರ್ ಈಗಾಗಲೇ ಮುಗಿದಿದೆ. ಹಾಗಾಗಿ ನಮ್ಮ ಚಿತ್ರಕ್ಕೆ ಈಗ ಗುರುದೇವ ಹೊಯ್ಸಳ ಎಂದು ಹೆಸರಿಡಲಾಗುವುದು' ಎಂದು ಧನಂಜಯ್ ಹೇಳಿದರು. 

ಹೊಯ್ಸಳದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನವೀನ್ ಶಂಕರ್ ಅವರು ಧನಂಜಯ್ ಅವರೊಂದಿಗಿನ ತಮ್ಮ ಕೆಲಸದ ಅನುಭವದ ಬಗ್ಗೆ ಮಾತನಾಡಿ, 'ನಾನು ಇದೇ ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದೇನೆ. 'ನನ್ನ ಸ್ನೇಹಿತ ಧನಂಜಯ್ ಅವರೊಂದಿಗೆ ನಟಿಸಲು ನಾನು ಸಂತೋಷಪಡುತ್ತೇನೆ, ಈ ಪಾತ್ರವು ಪ್ರೊಡಕ್ಷನ್ ಹೌಸ್ ಮೂಲಕ ನನಗೆ ಬಂದಿತು. ಪಾತ್ರವು ಅದ್ಭುತವಾಗಿದೆ ಮತ್ತು ಗುರುದೇವ ಹೊಯ್ಸಳ ನನಗೆ ಪ್ರಯೋಗ ಮಾಡಲು ಅವಕಾಶವನ್ನು ನೀಡಿದೆ' ಎಂದರು.
ಗುರುದೇವ ಹೊಯ್ಸಳ ಸಿನಿಮಾದಲ್ಲಿ ಧನಂಜಯ್  ಅವರೊಂದಿಗೆ ಅಮೃತ ಅಯ್ಯಂಗಾರ್ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ಇವರಿಬ್ಬರ ಮೂರನೇ ಚಿತ್ರವಾಗಲಿದೆ.

'ನಾನು ಗಂಗಾ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಮತ್ತು ಪೊಲೀಸ್ ಅಧಿಕಾರಿಯ ಹೆಂಡತಿ ಮತ್ತು ಭರತನಾಟ್ಯ ಶಿಕ್ಷಕಿಯಾಗಿ ಕಾಣಿಸಿಕೊಳ್ಳುತ್ತೇನೆ. ಈ ಪಾತ್ರವನ್ನು ನಿರ್ವಹಿಸುವುದು ನನಗೆ ಸವಾಲಿನ ಕೆಲಸವಾಗಿತ್ತು' ಎನ್ನುತ್ತಾರೆ ಅಮೃತಾ.

ಗುರುದೇವ ಹೊಯ್ಸಳ ಚಿತ್ರದಲ್ಲಿ ಪ್ರತಾಪ್ ನಾರಾಯಣ್ ಮತ್ತು ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಕಾರ್ತಿಕ್ ಎಸ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

ಬಕ್ರೀದ್ ಮೇಕೆ ವಿಷಯವಾಗಿ ಮುಂಬೈ ಸೊಸೈಟಿಯಲ್ಲಿ ಭಾರಿ ವಿವಾದ; VHP ಕಾರ್ಯಕರ್ತರ ಮೇಲೆ ಬ್ಲೇಡ್ ನಿಂದ ಹಲ್ಲೆ!

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

ಬೆಂಗಳೂರು: ದೃಷ್ಟಿಹೀನ ಸ್ನೇಹಿತೆ ಬಳಿ ಇದ್ದ 49.5 ಲಕ್ಷ ರೂ. ನಗದು, ಚಿನ್ನ ಕದ್ದ ಖದೀಮ ದಂಪತಿ ಬಂಧನ!

SCROLL FOR NEXT