ಅಮೃತಾ ಅಯ್ಯಂಗಾರ್ 
ಸಿನಿಮಾ ಸುದ್ದಿ

ಇನ್ನೂ ಹೆಚ್ಚಿನ ಕಥೆಗಳು ಮತ್ತು ವಿಭಿನ್ನ ಪಾತ್ರಗಳಲ್ಲಿ ನಟಿಸ ಬಯಸುತ್ತೇನೆ: ಅಮೃತಾ ಅಯ್ಯಂಗಾರ್

ಈ ಹಿಂದೆ ಸೂರಿಯವರ ಪಾಪ್‌ಕಾರ್ನ್ ಮಂಕಿ ಟೈಗರ್ ಮತ್ತು ಬಡವ ರಾಸ್ಕಲ್‌ ಚಿತ್ರದಲ್ಲಿ ನಟಿಸಿದ್ದ ಅಮೃತಾ ಅಯ್ಯಂಗಾರ್ ಮತ್ತು ಧನಂಜಯ್ ಇದೀಗ ಮತ್ತೊಮ್ಮೆ ಗುರುದೇವ್ ಹೊಯ್ಸಳ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಸೂರಿಯವರ ಪಾಪ್‌ಕಾರ್ನ್ ಮಂಕಿ ಟೈಗರ್ ಮತ್ತು ಬಡವ ರಾಸ್ಕಲ್‌ ಚಿತ್ರದಲ್ಲಿ ನಟಿಸಿದ್ದ ಅಮೃತಾ ಅಯ್ಯಂಗಾರ್ ಮತ್ತು ಧನಂಜಯ್ ಇದೀಗ ಮತ್ತೊಮ್ಮೆ ಗುರುದೇವ್ ಹೊಯ್ಸಳ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

'ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕಿಯರನ್ನು ಹೆಚ್ಚಾಗಿ ನಾಯಕನ ಪ್ರೇಮಕತೆ ಮತ್ತು ಒಂದೆರಡು ಹಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವಂತೆ ಮಾಡಲಾಗುತ್ತದೆ. ಆದರೆ, ಗುರುದೇವ್ ಹೊಯ್ಸಳದಲ್ಲಿ, ನಾನು ಭರತನಾಟ್ಯ ಶಿಕ್ಷಕಿಯಾಗಿ ಮತ್ತು ಗುರುದೇವನ ಹೆಂಡತಿಯಾಗಿ ನಟಿಸುತ್ತೇನೆ. ಚಿತ್ರದಲ್ಲಿ ನನ್ನದು ಪ್ರಮುಖ ಪಾತ್ರವಾಗಿದ್ದು, ಧನಂಜಯ್ ಅವರೊಂದಿಗಿನ ನನ್ನ ದೃಶ್ಯಗಳು ಆಸಕ್ತಿದಾಯಕವಾಗಿರುತ್ತವೆ ಮತ್ತು ಕಥೆಯೊಂದಿಗೆ ಚೆನ್ನಾಗಿ ಮಿಶ್ರಣಗೊಳ್ಳುತ್ತವೆ' ಎಂದು ಅಮೃತಾ ಹೇಳುತ್ತಾರೆ.

ಧನಂಜಯ್ ಅವರೊಂದಿಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾತನಾಡುವ ಅಮೃತಾ, 'ಬಡವ ರಾಸ್ಕಲ್‌ನಲ್ಲಿ ನಮ್ಮ ಜೋಡಿ ಚೆನ್ನಾಗಿ ಕೆಲಸ ಮಾಡಿದೆ ಮತ್ತು ಪ್ರೇಕ್ಷಕರು ಕೂಡ ನಮ್ಮನ್ನು ಮತ್ತೆ ತೆರೆಯ ಮೇಲೆ ಒಟ್ಟಿಗೆ ನೋಡಲು ಬಯಸಿದ್ದರು' ಎನ್ನುತ್ತಾರೆ.

ಈಮಧ್ಯೆ, ಅಮೃತಾ ಅವರು ಕೆಎಂ ಚೈತನ್ಯ ನಿರ್ದೇಶನದ 'ಅಬ್ಬಬ್ಬಾ' ಮತ್ತು ಶರಣ್ ಅವರೊಂದಿಗೆ ಅರವಿಂದ್ ಕೃಪಾಲಿಕರ್ ಅವರ ಮುಂದಿನ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. 

'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಾಯುವ ಆಟವನ್ನು ಆಡುವುದು ಮತ್ತು ಸರಿಯಾದ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡುವುದು ಸ್ವಲ್ಪ ಕಷ್ಟದ ಕೆಲಸವೇ ಆಗಿದೆ. ಆದರೆ, ಅಂತಿಮವಾಗಿ ನಾನು ಹೆಚ್ಚಿನ ಕಥೆಗಳು ಮತ್ತು ಪಾತ್ರಗಳನ್ನು ಅನ್ವೇಷಿಸಲು ಬಯಸುತ್ತೇನೆ. ಆಸಕ್ತಿದಾಯಕ ಸಿನಿಮಾಗಳಲ್ಲಿ ನಟಿಸಲು ಕಾಯಲು ಸಾಧ್ಯವಿಲ್ಲ' ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ನಲ್ಲಿ 2 ವಾರ ಪೂರೈಸಿದ ಪ್ರತಿಭಟನೆ: ಸರ್ಕಾರಿ ಕಟ್ಟಡಗಳಿಗೆ ಬೆಂಕಿ, ಪ್ರತಿಭಟನಾಕಾರರಿಗೆ 'ಮರಣ ದಂಡನೆ' ಬೆದರಿಕೆ!

"Surely It's Time": ಕೊಹ್ಲಿ ನಿವೃತ್ತಿ ಬಗ್ಗೆ ದೊಡ್ಡ ಸಂದೇಶ ರವಾನಿಸಿದ ಉತ್ತಪ್ಪ!

'ಮನ್ರೇಗಾ ಬಚಾವೋ' ಸಂಗ್ರಾಮ: ಕಾಂಗ್ರೆಸ್ ಪಕ್ಷದಿಂದ ದೇಶಾದ್ಯಂತ 45 ದಿನಗಳ ಹೋರಾಟ ಆರಂಭ!

ಮಹಾರಾಷ್ಟ್ರದಲ್ಲಿ ಸಿಎಂ, ಡಿಸಿಎಂ ಮುಸುಕಿನ ಗುದ್ದಾಟ: ಅಜಿತ್ ಪವಾರ್ ವಿರುದ್ಧ ಫಡ್ನವೀಸ್ ಕಿಡಿ!

ಭಾಷಾ ಮಸೂದೆ ವಿರೋಧಿಸಿ ಸಿದ್ದರಾಮಯ್ಯ ಪತ್ರ: ಕೇರಳ ಸಿಎಂ ಸ್ಪಷ್ಟೀಕರಣ; ಪಿಣರಾಯಿ ವಿಜಯನ್ ಹೇಳಿದ್ದೇನು?

SCROLL FOR NEXT