ಸಿನಿಮಾ ಸುದ್ದಿ

ಜಯತೀರ್ಥ ನಿರ್ದೇಶನದ ಬಹು ನಿರೀಕ್ಷಿತ ಕೈವ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿ

Ramyashree GN

ನಿರ್ದೇಶಕ ಜಯತೀರ್ಥ ಅವರ ಮುಂಬರುವ ಚಿತ್ರ, ಧನ್ವೀರ್ ಮತ್ತು ಮೇಘಾ ಶೆಟ್ಟಿ ನಟಿಸಿರುವ ಕೈವ ಸಿನಿಮಾ ಡಿಸೆಂಬರ್ 8ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟೀಸರ್‌, ಹಾಡುಗಳು ಮತ್ತು ವೈವಿಧ್ಯಮಯ ಪಾತ್ರವರ್ಗ ವ್ಯಾಪಕ ನಿರೀಕ್ಷೆ ಹುಟ್ಟುಹಾಕಿದ್ದು, ಇಂದು ಅದ್ಧೂರಿ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚಿತಾ ರಾಮ್, ಆಶಾ ಭಟ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಮುಂತಾದವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಕೈವ ಚಿತ್ರದ ಸ್ಟಿಲ್
<strong>ಕೈವ ಚಿತ್ರದ ಸ್ಟಿಲ್</strong>

ಅಭುವನಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ನಿರ್ಮಿಸಿರುವ ಕೈವ ಚಿತ್ರ ಬೆಂಗಳೂರಿನ ತಿಗಳರಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ. ರಘುನಿಡುವನಹಳ್ಳಿ ಸಂಭಾಷಣೆ ಬರೆದಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಇದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಕೆಎಂ ಪ್ರಕಾಶ್ ಸಂಕಲನದ ಹೊಣೆ ಹೊತ್ತಿದ್ದಾರೆ.

ಜಯತೀರ್ಥ ಅವರ ಲವ್-ಕ್ರೈಮ್ ಸಿನಿಮಾ ಕೈವದಲ್ಲಿ ಜಯರಾಮ್ ಕಾರ್ತಿಕ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಧನ್ವೀರ್ ಮತ್ತು ಮೇಘಾ ಶೆಟ್ಟಿ ಒಟ್ಟಿಗೆ ನಟಿಸಿದ್ದಾರೆ. ಚಿತ್ರದಲ್ಲಿ ನಿರ್ದೇಶಕರಾದ ದಿನಕರ್ ತೂಗುದೀಪ, ಗಿರಿರಾಜ್ ಬಿಎಂ, ರಘು ಶಿವಮೊಗ್ಗ, ರಮೇಶ್ ಇಂದಿರಾ ಮತ್ತು ನಂದಕುಮಾರ್ ಅವರು ನಟರಾಗಿ ಚಿತ್ರಕ್ಕಾಗಿ ಕ್ಯಾಮೆರಾ ಎದುರಿಸಿದ್ದಾರೆ.

ಕರಗ ಉತ್ಸವದ ಹಿನ್ನೆಲೆಯಲ್ಲಿ 1983ರಲ್ಲಿ ನಡೆದ ನೈಜ ಘಟನೆಯ ಆಧಾರದ ಮೇಲೆ ಅಪರಾಧ ಮತ್ತು ಪ್ರೀತಿಯ ಅಂಶಗಳನ್ನು ಕೈವ ಒಳಗೊಂಡಿದೆ. ಕೈವಾರ ಭೀಮ ಎಂಬ ಹೆಸರಿನಿಂದ ಸ್ಫೂರ್ತಿ ಪಡೆದ ಈ ಯೋಜನೆಯು ಜಯತೀರ್ಥ ಅವರು ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಆ್ಯಕ್ಷನ್ ಪ್ರಕಾರವಾಗಿದೆ.

ನಿರ್ದೇಶಕರ ಪ್ರಕಾರ, ಚಿತ್ರವು ಜೆಕೆ ಪಾತ್ರದೊಂದಿಗೆ ಪ್ರಾರಂಭವಾಗುತ್ತದೆ. ಇದು ಪರಿಚಯಾತ್ಮಕ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ಕೊನೆಗೊಳ್ಳುತ್ತದೆ. 'ಕೈವದಲ್ಲಿನ ಪ್ರತಿಯೊಂದು ಪಾತ್ರವು ವಿಶಿಷ್ಟ ಲಕ್ಷಣಗಳನ್ನು ಹೊಂದಿದೆ ಮತ್ತು ಜೆಕೆ ಸೇರಿದಂತೆ ಎಲ್ಲರ ಪಾತ್ರಗಳು ಕಥೆಯಲ್ಲಿ ಮಹತ್ವ ಪಡೆಯುತ್ತವೆ' ಎಂದು ಅವರು ಹೇಳುತ್ತಾರೆ. 

SCROLL FOR NEXT