ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

ಬಿಗ್ ಬಾಸ್ ಒಂದು ಸೈಡ್ ಪ್ರಾಜೆಕ್ಟ್‌ ಅಲ್ಲ, ನನ್ನ ಎರಡನೇ ಮನೆ: ಕಿಚ್ಚ ಸುದೀಪ್

ಪ್ರಸ್ತುತ ಬಹುಭಾಷಾ ಚಿತ್ರ ಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡದ 10ನೇ ಸೀಸನ್‌ನ ನಿರೂಪಕರಾಗಲು ಸಿದ್ಧರಾಗಿದ್ದಾರೆ ಮತ್ತು ಇದು ಅವರ ಕಿರುತೆರೆ ವೃತ್ತಿಜೀವನದ ಮಹತ್ವದ ಮೈಲುಗಲ್ಲು. 

ಪ್ರಸ್ತುತ ಬಹುಭಾಷಾ ಚಿತ್ರ ಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿರುವ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡದ 10ನೇ ಸೀಸನ್‌ನ ನಿರೂಪಕರಾಗಲು ಸಿದ್ಧರಾಗಿದ್ದಾರೆ ಮತ್ತು ಇದು ಅವರ ಕಿರುತೆರೆ ವೃತ್ತಿಜೀವನದ ಮಹತ್ವದ ಮೈಲುಗಲ್ಲು. 

ಅಕ್ಟೋಬರ್ 8 ರಿಂದ ಪ್ರಾರಂಭವಾಗುವ ಈ ಸೀಸನ್ 'ಹ್ಯಾಪಿ ಬಿಗ್ ಬಾಸ್' ಎಂಬ ಆಕರ್ಷಕ ಥೀಮ್ ಅನ್ನು ಹೊಂದಿದೆ.

ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಮತನಾಡಿರುವ ನಟ ಸುದೀಪ್ ಅವರು, “ನಾನು ಬಿಗ್ ಬಾಸ್ ಕನ್ನಡ ಸೀಸನ್ 1ರಿಂದ ನನ್ನ ಪ್ರಯಾಣ ಆರಂಭವಾಯಿತು ಮತ್ತು ಈಗ, ಇದು ಅದ್ಭುತ ದಶಕದ ಸಂಭ್ರಮದಲ್ಲಿದೆ. ಈ ಪ್ರದರ್ಶನವು ನನಗೆ ಕೇವಲ ಒಂದು ಸೈಡ್ ಪ್ರಾಜೆಕ್ಟ್‌ ಅಲ್ಲ. ಇದು ನನ್ನ ಎರಡನೇ ಮನೆ! ಹೊಸ ವ್ಯಕ್ತಿಗಳನ್ನು ಭೇಟಿಯಾಗುವುದು ಮತ್ತು ಮನೆಯಲ್ಲಿ ಅವರ ವೈವಿಧ್ಯಮಯ ಪಾತ್ರಗಳನ್ನು ನೋಡುವುದು ನಿಜಕ್ಕೂ ಸಂತೋಷವಾಗುತ್ತದೆ. ಬಿಗ್ ಬಾಸ್ ಮನೆಯು ಎಂದೆಂದಿಗೂ ಅದ್ದೂರಿಯಾಗಿ, ವಿಶಿಷ್ಟವಾದ ಥೀಮ್ ಮತ್ತು ಅತ್ಯಾಕರ್ಷಕ ಸರ್ಪ್ರೈಸಸ್ ಗಳನ್ನ ಹೊಂದಿರುತ್ತದೆ. ಈ ಸೀಸನ್ ಇನ್ನೂ ಹೆಚ್ಚಿನ ಮನರಂಜನೆ ನೀಡಲಿದೆ ಎಂಬ ಭರವಸೆ ಇದೆ ಎಂದಿದ್ದಾರೆ.

ಬಿಗ್ ಬಾಸ್ ಕನ್ನಡದ ಹೊಸ ಸೀಸನ್ ವಿವಿಧ ಹಿನ್ನೆಲೆಯ 16 ವೈವಿಧ್ಯಮಯ ಸ್ಪರ್ಧಿಗಳನ್ನು ಸ್ವಾಗತಿಸುತ್ತಿದೆ. ಈ ಬಾರಿ ರಕ್ಷಿತ್ ಶೆಟ್ಟಿ ಅವರ 777 ಚಾರ್ಲಿ ಚಿತ್ರದ ಖ್ಯಾತಿಯ ಚಾರ್ಲಿ ನಾಯಿಯು ಬಿಗ್ ಬಾಸ್ ಮನೆ ಸೇರುತ್ತಿದ್ದು, ಹೆಚ್ಚು ಕುತೂಹಲ ಮೂಡಿಸಿದೆ.

ಸಾಕುಪ್ರಾಣಿಗಳ ಭಾಗವಹಿಸುವಿಕೆಗಾಗಿ ಪ್ರಾಣಿ ಮಂಡಳಿಯಿಂದ ಎಲ್ಲಾ ಅಗತ್ಯ ಅನುಮತಿಗಳೊಂದಿಗೆ ಚಾರ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT