ಸಿನಿಮಾ ಸುದ್ದಿ

'ಸಿದ್ಲಿಂಗು 2' ಗಾಗಿ ಸಜ್ಜಾಗುತ್ತಿದ್ದಾರೆ ಲೂಸ್ ಮಾದ ಯೋಗಿ; ರಮ್ಯಾ ಪಾತ್ರದ ಕುರಿತು ವಿಜಯ್ ಪ್ರಸಾದ್ ಹೇಳಿದ್ದೇನು?

Ramyashree GN

2012ರಲ್ಲಿ ತೆರೆಕಂಡ ಸಿದ್ಲಿಂಗು ಚಿತ್ರ ಹಿಟ್ ಆಗಿತ್ತು. ಇದೀಗ ಕೆಲ ದಿನಗಳಿಂದ ಚಿತ್ರದ ಸೀಕ್ವೆಲ್ ಬಗೆಗಿನ ವರದಿಗಳು ಹರಿದಾಡುತ್ತಿವೆ. ನಿರ್ದೇಶಕ ವಿಜಯ ಪ್ರಸಾದ್ ಅವರು ಸದ್ಯ ಸ್ಕ್ರಿಪ್ಟಿಂಗ್‌ನ ಅಂತಿಮ ಹಂತದಲ್ಲಿದ್ದು, ಈ ಸಿನಿಮಾವನ್ನು ಶೀಘ್ರವೇ ಅಧಿಕೃತವಾಗಿ ಘೋಷಿಸಲಿದ್ದಾರೆ ಎನ್ನಲಾಗಿದೆ.

ಇಂದಿನಿಂದ, 'ಸಿದ್ಲಿಂಗು' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಯೋಗೇಶ್ ಅಲಿಯಾಸ್ ಯೋಗಿ 'ಸಿದ್ಲಿಂಗು 2' ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಸಿದ್ಲಿಂಗು 2 ನಲ್ಲಿ ಇನ್ನಷ್ಟು ಆಳವಾದ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ನಾನು ಸದ್ಯ ಸ್ಕ್ರಿಪ್ಟ್ ಅನ್ನು ಉತ್ತಮವಾಗಿ ಹೊಂದಿಸುತ್ತಿದ್ದೇನೆ. ಅಕ್ಟೋಬರ್ ಅಥವಾ ಅಕ್ಟೋಬರ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದೇನೆ' ಎಂದು ಹೇಳುವ ವಿಜಯ ಪ್ರಸಾದ್, ನಾಯಕನ ಪಾತ್ರವನ್ನು ಉತ್ತಮವಾಗಿ ತೋರಿಸಲು ಕೆಲವು ಷರತ್ತುಗಳನ್ನು ಹಾಕಿದ್ದಾರೆ.

ಸದ್ಯ ಶೂನ್ಯಾ ನಿರ್ದೇಶನದ ರೋಸಿ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿರುವ ಯೋಗಿ, ಸಿದ್ಲಿಂಗು 2 ನಲ್ಲಿನ ತಮ್ಮ ಪಾತ್ರಕ್ಕಾಗಿ ಶ್ರದ್ಧೆಯಿಂದ ತಯಾರಿ ನಡೆಸುತ್ತಿದ್ದಾರೆ. 

'ಸಿದ್ಲಿಂಗು 2 ಸಿನಿಮಾಗಾಗಿ ಯೋಗಿ ಅವರು ತಮ್ಮ ತಲೆ ಕೂದಲು ಮತ್ತು ಗಡ್ಡವನ್ನು ಬೆಳೆಸಬೇಕು. ಜೊತೆಗೆ 10 ರಿಂದ 12 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಾವು ಚಿತ್ರೀಕರಣವನ್ನು ಪ್ರಾರಂಭಿಸುವ ಮೊದಲು ಈ ರೂಪಾಂತರಕ್ಕೆ ಅವರಿಗೆ ಸರಿಸುಮಾರು 2 ರಿಂದ 3 ತಿಂಗಳ ಸಮರ್ಪಣೆಯ ಅಗತ್ಯವಿರುತ್ತದೆ' ಎಂದು ಅವರು ಹೇಳುತ್ತಾರೆ.

ಮೂಲ ಸಿದ್ಲಿಂಗು ಕಥೆಯು ಉಪನ್ಯಾಸಕಿಯಾದ ಯುವತಿ ಹಾಗೂ ಕಾರು ಉತ್ಸಾಹಿ ಯುವಕನ ಸುತ್ತ ಸುತ್ತುತ್ತದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ನಾಯಕಿಯ ದುರಂತ ಅಂತ್ಯವಾಗುತ್ತದೆ. ಚಿತ್ರದಲ್ಲಿ ನಾಯಕಿ ಮಂಗಳಾ ಪಾತ್ರದಲ್ಲಿ ನಟಿ ರಮ್ಯಾ ಮತ್ತು ಅಸಾದುಲ್ಲಾ ಬೇಗ್ ಪಾತ್ರದಲ್ಲಿ ಕೆಎಸ್ ಶ್ರೀಧರ್ ಕಾಣಿಸಿಕೊಂಡಿದ್ದರು.

ಮುಂದಿನ ಭಾಗದ ಕಾಸ್ಟಿಂಗ್ ಪ್ರಕ್ರಿಯೆಯ ಬಗ್ಗೆ ಕೇಳಿದಾಗ, ಸುಮನ್ ರಂಗನಾಥ್ ಅವರು ಈ ಚಿತ್ರದಲ್ಲಿ ಮುಂದುವರಿಯುತ್ತಾರೆ. ಸಿದ್ಲಿಂಗು ಚಿತ್ರದಲ್ಲಿ ಅಕಾಲಿಕ ಮೃತ್ಯುವನ್ನು ಕಾಣುವ ಮಂಗಳಾ, ಫ್ಲ್ಯಾಷ್‌ಬ್ಯಾಕ್ ಮೂಲಕ ಸೀಕ್ವೆಲ್‌ನಲ್ಲಿ ಕಾಣಿಸಿಕೊಳ್ಳಬಹುದು. ಆದರೆ, ಸ್ಕ್ರಿಪ್ಟ್ ಪೂರ್ಣಗೊಂಡ ನಂತರ ಅಂತಿಮ ನಿರ್ಧಾರವಾಗಲಿದೆ ಎನ್ನುತ್ತಾರೆ ವಿಜಯ ಪ್ರಸಾದ್. 

ಉಳಿದ ಪಾತ್ರವರ್ಗದ ಆಯ್ಕೆಯ ಕಸರತ್ತು ಅಂತಿಮ ಹಂತದಲ್ಲಿದೆ ಮತ್ತು ಸಿದ್ಲಿಂಗು 2 ಸಿನಿಮಾಗಾಗಿ ಅತ್ಯಾಕರ್ಷಕ ಮೇಳವನ್ನು ಒಟ್ಟಿಗೆ ತರಲು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.

ಸಿದ್ಲಿಂಗು 2 ಚಿತ್ರಕ್ಕೆ ವಿಜಯ ಪ್ರಸಾದ್ ಅವರ ಬಹುಕಾಲದ ಪರಿಚಯಸ್ಥ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಲಿದ್ದಾರೆ. ರೋಸಿ ಹೊರತಾಗಿ, ನಿರ್ದೇಶಕ ಅಭಿಜಿತ್ ಮಹೇಶ್ ಅವರ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಚಿತ್ರೀಕರಣವನ್ನು ಯೋಗಿ ಪೂರ್ಣಗೊಳಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಪರಮವಃ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಲಾದ ಈ ಚಿತ್ರದಲ್ಲಿ ದಿಗಂತ್ ಮಂಚಾಲೆ ಮತ್ತು ಅಚ್ಯುತ್ ಕುಮಾರ್ ಕೂಡ ನಟಿಸಿದ್ದಾರೆ.

SCROLL FOR NEXT