ವಿಖ್ಯಾತ್ ನಿರ್ದೇಶನದಲ್ಲಿ ರಮೇಶ್ ಮತ್ತು ಗಣೇಶ್ 
ಸಿನಿಮಾ ಸುದ್ದಿ

ರಮೇಶ್ - ಗಣೇಶ್ ಕಾಂಬಿನೇಷನ್‌ನ ಮಲ್ಟಿಸ್ಟಾರರ್‌ ಸಿನಿಮಾಗೆ ವಿಖ್ಯಾತ್ ಆ್ಯಕ್ಷನ್ ಕಟ್!

ಪುಷ್ಪಕ ವಿಮಾನ ಮತ್ತು ಮಾನ್ಸೂನ್ ರಾಗದಂತಹ ಸಿನಿಮಾ ನಿರ್ಮಿಸಿರುವ  ವಿಖ್ಯಾತ್ ತಮ್ಮ ಆರನೇ  ಸಿನಿಮಾ ನಿರ್ಮಾಣದ ಮೂಲಕ ದಶಕಗಳ ತಮ್ಮ ನಿರ್ದೇಶನದ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ.

ಪುಷ್ಪಕ ವಿಮಾನ ಮತ್ತು ಮಾನ್ಸೂನ್ ರಾಗದಂತಹ ಸಿನಿಮಾ ನಿರ್ಮಿಸಿರುವ  ವಿಖ್ಯಾತ್ ತಮ್ಮ ಆರನೇ  ಸಿನಿಮಾ ನಿರ್ಮಾಣದ ಮೂಲಕ ದಶಕಗಳ ತಮ್ಮ ನಿರ್ದೇಶನದ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ಚಲನಚಿತ್ರ ನಿರ್ಮಾಪಕ ವಿಖ್ಯಾತ್ ಎಆರ್, ಮೂಲತಃ ನಿರ್ದೇಶಕರಾಗಲು ಬಯಸಿದ್ದರು,  ಆದರೆ ಅನಿರೀಕ್ಷಿತವಾಗಿ ನಿರ್ಮಾಣಕ್ಕೆ ತೊಡಗಿದರು.

ನಟ ರಮೇಶ್ ಮತ್ತು ನಟ ಗಣೇಶ್ ಕಾಂಬಿನೇಷನ್‌ನ ಈ ಮಲ್ಟಿಸ್ಟಾರರ್‌ ಸಿನಿಮಾವನ್ನು ವಿಖ್ಯಾತ್ ಎ ಆರ್ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿ ಪುಷ್ಪಕ ವಿಮಾನ, ಇನ್ಸ್‌ಪೆಕ್ಟರ್ ವಿಕ್ರಮ್, ಮಾನ್ಸೂನ್ ರಾಗ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಖ್ಯಾತ್ ಇದೇ ಮೊದಲ ಬಾರಿಗೆ ನಿರ್ದೇಶನಕ್ಕೂ ಇಳಿದಿದ್ದಾರೆ.  ರಮೇಶ್ ಅರವಿಂದ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ.

ಇನ್ನೂ ಟೈಟಲ್ ಇಡದ ಈ ಸಿನಿಮಾದಲ್ಲಿ ಮೊದಲ ಬಾರಿಗೆ ರಮೇಶ್ ಅರವಿಂದ್ ಮತ್ತು ಗಣೇಶ್ ಒಟ್ಟಾಗಿ ನಡೆಸುತ್ತಿದ್ದಾರೆ. ರಮೇಶ್ ಅರವಿಂದ್ ಮತ್ತು ಗಣೇಶ್ ವಿದೇಶದಲ್ಲಿ ಸೈನಿಕರ ನಡುವೆ ನಿಂತಿರುವ ಒಂದು  ಫೋಟೋ ಕಾಣಬಹುದಾಗಿದೆ. ಇದೊಂದು ಎಮೋಷನಲ್ ಕಥೆಯಾಗಿದ್ದು ವಿಶಿಷ್ಟವಾಗಿದೆ ಎಂದು ಹೇಳಲಾಗುತ್ತಿದೆ.  ಯಾರೆಲ್ಲ ಈ ಸಿನಿಮಾಕ್ಕಾಗಿ ಕೆಲಸ ಮಾಡಲಿದ್ದಾರೆ? ಯಾವಾಗ ಈ ಸಿನಿಮಾ ಶುರುವಾಗಲಿದೆ ಎಂಬೆಲ್ಲ ಮಾಹಿತಿಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

ನನ್ನ 100 ನೇ ಸಿನಿಮಾ ಪುಷ್ಪಕ ವಿಮಾನಕ್ಕೆ ವಿಖ್ಯಾತ್ ನಿರ್ಮಾಣದ ಹೊಣೆ ವಹಿಸಿಕೊಂಡಿದ್ದರು.  ನಿರ್ದೇಶಕನಾಗುವ ಅವರ ಮೂಲ ಕನಸು ನನಸಾಗಬೇಕು ಎಂದು ನಾನು ಯಾವಾಗಲೂ ಬಯಸಿದ್ದೆ. ಅವರ ಮೊದಲ ನಿರ್ದೇಶನದ ಚಿತ್ರದಲ್ಲಿ, ಹೆಚ್ಚಿನ ಸಾಮರ್ಥ್ಯ ಹೊಂದಿರುವ ಅತ್ಯಂತ ಸೂಕ್ಷ್ಮವಾದ ವಿಷಯ ಆಯ್ಕೆ ಮಾಡಿದ್ದಾರೆ ಎಂದು ರಮೇಶ್ ಅರವಿಂದ್ ತಿಳಿಸಿದ್ದಾರೆ.

ಗಣೇಶ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿದ ನಟ ರಮೇಶ್,  ಈ ಹಿಂದೆಯೇ  ರಮೇಶ್ ಮತ್ತು ಗಣೇಶ್ ಒಟ್ಟಿಗೆ ಕೆಲಸ ಮಾಡಿದ್ದರು. ರಾಕ್‌ಲೈನ್ ವೆಂಕಟೇಶ್, ಅಲ್ಲು ಅರವಿಂದ್ ನಿರ್ಮಿಸಿದ್ದ 'ಸುಂದರಾಂಗ ಜಾಣ' ಚಿತ್ರಕ್ಕೆ ರಮೇಶ್‌ ಅರವಿಂದ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅಲ್ಲಿ ಅವರು ಬರೀ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಗಣೇಶ್ ಹೀರೋ ಆಗಿದ್ದರೆ, ಶಾನ್ವಿ ಶ್ರೀವಾಸ್ತವ ನಾಯಕಿಯಾಗಿದ್ದರು. ಆದರೆ ಈಗ ಗಣೇಶ್ ಮತ್ತು ರಮೇಶ್ ಇಬ್ಬರು ಒಟ್ಟಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ.

ನಾವು ಒಟ್ಟಿಗೆ ಕೆಲಸ ಮಾಡಲು ಅನೇಕ ಆಫರ್ ಗಳು  ಬಂದಿವೆ,  ಆದರೆ ನೀವು ಇಬ್ಬರು ನಾಯಕರನ್ನು ಹಾಕಿದಾಗ, ಅವರ ಪಾತ್ರಗಳು ಗಣನೀಯ ಮತ್ತು ಸಮರ್ಥನೀಯವಾಗಿರಬೇಕು ಎಂದು ನಾನು ನಂಬುತ್ತೇನೆ. ಈ ಸಿನಿಮಾದಲ್ಲಿ ಆ  ಎಲ್ಲಾ ಕಾವ್ಯಾತ್ಮಕ ಅಂಶಗಳಿವೆ ಎಂದು ರಮೇಶ್ ಅರವಿಂದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT