ನವೀನ್ ಶಂಕರ್  
ಸಿನಿಮಾ ಸುದ್ದಿ

ಶಿವರಾಜಕುಮಾರ್ ನಟನೆಯ 131 ನೇ ಆಕ್ಷನ್ ಚಿತ್ರದಲ್ಲಿ 'ಗುಲ್ಟೂ' ನವೀನ್ ಶಂಕರ್!

ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಬಹುದಾಗಿದೆ. ಸಿನಿಮಾಗೆ ಪ್ರಸಿದ್ಧ ಸಂಗೀತ ನಿರ್ದೇಶಕ ಸ್ಯಾಮ್ ಸಿಎಸ್ ಅವರ ರೋಮಾಂಚಕ ಮ್ಯೂಸಿಕ್ ಇರಲಿದೆ.

ತಮಿಳಿನ ಪಾಯುಂ ಒಲಿ ನೀ ಎನಕ್ಕು ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ಕಾರ್ತಿಕ್ ಅದ್ವೈತ್, ಶಿವರಾಜಕುಮಾರ್ ಅಭಿನಯದ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಮೂಲಕ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ.

ಬಹುಭಾಷಾ ಸಿನಿಮಾದ ಶೂಟಿಂಗ್ ಈ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿದೆ. ಈ ಚಿತ್ರದಲ್ಲಿ ಶಿವರಾಜಕುಮಾರ್ ಅವರನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ಕಾಣಬಹುದಾಗಿದೆ. ಸಿನಿಮಾಗೆ ಪ್ರಸಿದ್ಧ ಸಂಗೀತ ನಿರ್ದೇಶಕ ಸ್ಯಾಮ್ ಸಿಎಸ್ ಅವರ ರೋಮಾಂಚಕ ಮ್ಯೂಸಿಕ್ ಇರಲಿದೆ. ಇದರ ಜೊತೆಗೆ ಜನಪ್ರಿಯ ನಟ ನವೀನ್ ಶಂಕರ್ ಕೂಡ ಈ ಪ್ರಾಜೆಕ್ಟ್ ನ ಭಾಗವಾಗಲಿದ್ದಾರೆ. ಗುಲ್ಟೂ ಚಿತ್ರದಲ್ಲಿನ ಚೊಚ್ಚಲ ಅಭಿನಯದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದ ನವೀನ್ ಕೊನೆಯದಾಗಿ ಪ್ರಶಾಂತ್ ನೀಲ್ ಅವರ ಸಲಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಶಿವರಾಜಕುಮಾರ್ ಅವರೊಂದಿಗೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಡೈನಾಮಿಕ್ ಜೋಡಿಯ ಆನ್-ಸ್ಕ್ರೀನ್ ಕೆಮಿಸ್ಟ್ರಿ ಈಗಾಗಲೇ ಅಪಾರವಾದ ನಿರೀಕ್ಷೆ ಸೃಷ್ಟಿಸುತ್ತಿದೆ, ಟಗರು ಸಿನಿಮಾದಲ್ಲಿ ಧನಂಜಯ್ ಜೊತೆಗಿನ ಆನ್-ಸ್ಕ್ರೀನ್ ಮ್ಯಾಜಿಕ್ ನೆನಪಿಸುತ್ತದೆ. ಪಾತ್ರದ ಬಗ್ಗೆ ಅಧಿಕೃತ ಪ್ರಕಟಣೆಯಷ್ಟೆ ಹೊರಬೀಳ ಬೇಕಿದೆ. ಎನ್ ಎಸ್ ರೆಡ್ಡಿ ಮತ್ತು ಸುಧೀರ್ ಅವರ ಬೆಂಬಲದೊಂದಿಗೆ, ಚಿತ್ರದ ತಾಂತ್ರಿಕ ತಂಡದಲ್ಲಿ ಬರಹಗಾರರಾದ ವಿಎಂ ಪ್ರಸನ್ನ ಮತ್ತು ಜಯ ಕೃಷ್ಣ, ಛಾಯಾಗ್ರಾಹಕ ಎಜೆ ಶೆಟ್ಟಿ ಮತ್ತು ಕಲಾ ನಿರ್ದೇಶಕ ರವಿ ಸಂತೆಹಖ್ಲು ಇದ್ದಾರೆ. ಈ ಸಿನಿಮಾದ ಜೊತೆಗೆ, ನವೀನ್ ಶಂಕರ್ ಬಾಕ್ಸಿಂಗ್ ವಿಷಯದ ಸುತ್ತ ಕೇಂದ್ರೀಕೃತವಾಗಿರುವ ವಿಕಾಸ್ ಪುಷ್ಪಗಿರಿ ಅವರ ಮುಂಬರುವ ಚಿತ್ರದಲ್ಲಿ ನಟಿಸಲು ಸಹ ಸಿದ್ಧರಾಗಿದ್ದಾರೆ. ಏತನ್ಮಧ್ಯೆ, ಸದಾ ಬ್ಯುಸಿಯಾಗಿರುವ ಶಿವರಾಜಕುಮಾರ್ ಭೈರತಿ ರಣಗಲ್ ಬಿಡುಗಡೆಗೆ ಕಾಯುತ್ತಿದ್ದಾರೆ ಮತ್ತು ತಮ್ಮ 131 ನೇ ಚಿತ್ರವನ್ನು ಪ್ರಾರಂಭಿಸಲು ಸಜ್ಜಾಗುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel