ಹರೀಶ್ ರಾಜ್ 
ಸಿನಿಮಾ ಸುದ್ದಿ

ಹರೀಶ್ ರಾಜ್ ನಿರ್ದೇಶಿಸಿ, ನಟಿಸುತ್ತಿರುವ 'ವೆಂಕಟೇಶಾಯ ನಮಃ' ಚಿತ್ರಕ್ಕೆ ಮುಹೂರ್ತ

ಭರ್ಜರಿ ಚೇತನ್ ಕಥೆ ಬರೆದಿದ್ದು, ಶಿವಶಂಕರ್ ಛಾಯಾಗ್ರಾಹಣ ಹಾಗೂ ಶ್ರೀನಿವಾಸ ಮೂರ್ತಿ ಸಂಗೀತ ಸಂಯೋಜಿಸುತ್ತಿದ್ದಾರೆ.

ಹರೀಶ್ ರಾಜ್ ನಿರ್ದೇಶಿಸಿ, ನಟಿಸುತ್ತಿರುವ ಹೊಸ ಚಿತ್ರ ವೆಂಕಟೇಶಾಯ ನಮ:ದ ಮುಹೂರ್ತ ನೆರವೇರಿದೆ. ಇದು ರೋಮ್ಯಾಂಟಿಕ್, ಹಾಸ್ಯ ಪ್ರಧಾನವಾಗಿದ್ದು, ಪ್ರೀತಿ ಪ್ರೇಮದ ಜೊತೆಗೆ ಕೌಟುಂಬಿಕ ಅಂಶಗಳನ್ನು ಹೊಂದಿದೆ.

ಜನಾರ್ಧನ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅವರು ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನಟನೆ ಜೊತೆಗೆ ಹರೀಶ್ ರಾಜ್ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹಂಚಿಕೊಂಡಿದ್ದಾರೆ.

ಕಿರುತೆರೆ ಹಾಗೂ ಸಿನಿಮಾಗಳಿಂದ ಚಿರಪರಿಚಿತವಾಗಿರುವ ಹರೀಶ್ ರಾಜ್, ಹಲವು ವರ್ಷಗಳ ನಟನೆ ಬಳಿಕ ಇದೀಗ ನಿರ್ದೇಶಕ ಕ್ಯಾಪ್ ಧರಿಸಿದ್ದಾರೆ. ತಮ್ಮ ನಿರ್ದೇಶನದ ವೆಂಕಟೇಶಾಯ ನಮ: ಚಿತ್ರದಲ್ಲಿ ರೋಮ್ಯಾಂಟಿಕ್ ಜೊತೆಗೆ ಕೌಟುಂಬಿಕ ಭಾವಾನಾತ್ಮಕ ಅಂಶಗಳಿದ್ದು, ಪ್ರೇಕ್ಷಕರ ಹೃದಯ ಮಟ್ಟುತ್ತದೆ ಎಂದು ಹರೀಶ್ ರಾಜ್ ಹೇಳಿದ್ದಾರೆ.

ಭರ್ಜರಿ ಚೇತನ್ ಕಥೆ ಬರೆದಿದ್ದು, ಶಿವಶಂಕರ್ ಛಾಯಾಗ್ರಾಹಣ ಹಾಗೂ ಶ್ರೀನಿವಾಸ ಮೂರ್ತಿ ಸಂಗೀತ ಸಂಯೋಜಿಸುತ್ತಿದ್ದಾರೆ. 45 ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು, ಹರೀಶ್ ರಾಜ್ ಅವರೊಂದಿಗೆ ಉಮಾಶ್ರೀ, ತಬಲಾ ನಾಣಿ ಮತ್ತಿತರ ಕಲಾವಿದರು ನಟಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT