ಕೆ.ಎಂ ಚೈತನ್ಯ ಮತ್ತು ವಿನೋದ್ ಪ್ರಭಾಕರ್ 
ಸಿನಿಮಾ ಸುದ್ದಿ

ವಿನೋದ್ ಪ್ರಭಾಕರ್ 25ನೇ ಸಿನಿಮಾಗೆ ಕೆ.ಎಂ ಚೈತನ್ಯ ಆ್ಯಕ್ಷನ್ ಕಟ್!

ಕೆಎಂ ಚೈತನ್ಯ ನಿರ್ದೇಶನದ ರೋಮ್ಯಾಂಟಿಕ್ ಸಿನಿಮಾ ಅಬ್ಬಬ್ಬಾ ಫೆಬ್ರವರಿ 16 ರಂದು ತೆರೆ ಕಾಣಲಿದೆ, ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಇದೇ ವೇಳೆ ಮತ್ತೊಂದು ಸಿನಿಮಾದ ಅಪ್ ಡೇಟ್ ಸಿಕ್ಕಿದೆ.

ಕೆಎಂ ಚೈತನ್ಯ ನಿರ್ದೇಶನದ ರೋಮ್ಯಾಂಟಿಕ್ ಸಿನಿಮಾ ಅಬ್ಬಬ್ಬಾ ಫೆಬ್ರವರಿ 16 ರಂದು ತೆರೆ ಕಾಣಲಿದೆ, ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ. ಇದೇ ವೇಳೆ ಮತ್ತೊಂದು ಸಿನಿಮಾದ ಅಪ್ ಡೇಟ್ ಸಿಕ್ಕಿದೆ.

ಚೈತನ್ಯ ಅವರು ವಿನೋದ್ ಪ್ರಭಾಕರ್ ಅವರ 25 ನೇ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭೂಗತ ಜಗತ್ತಿನ ಮೇಲೆ ಕೇಂದ್ರೀಕೃತವಾಗಿರುವ ಈ ಕಥೆಯನ್ನು ಪದ್ಮಾವತಿ ಜಯರಾಮ್ ನಿರ್ಮಿಸಲಿದ್ದಾರೆ.

ಈ ಹಿಂದೆ ಸಿನಿಮಾ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದ ಕೆ.ಎಂ ಚೈತನ್ಯ ಅವರು ಭೂಗತ ಜಗತ್ತಿಗೆ ಸಂಬಂಧಿಸಿದ ಕಥೆ ಬರೆಯುತ್ತಿರುವುದಾಗಿ ಮಾಹಿತಿ ನೀಡಿದ್ದರು. ಈ ಚಿತ್ರವು ನಿಜವಾದ ಕಥೆಯಲ್ಲ ಮತ್ತು ಅವರ  ಆ ದಿನಗಳು ಚಿತ್ರದ ಮುಂದುವರಿದ ಭಾಗವಲ್ಲ ಎಂದು ಅವರು ಒತ್ತಿ ಹೇಳಿದರು.

ಆದರೆ ಚಿತ್ರ ಕಥೆ ಕರ್ನಾಟಕದ ಇತಿಹಾಸದೊಂದಿಗೆ ಸಂಪರ್ಕ ಹೊಂದಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಚಿತ್ರದ ಸ್ಕ್ರಿಪ್ಟ್ ರೂಪುಗೊಂಡಿದೆ ಮತ್ತು ಸಿನಿಮಾದಲ್ಲಿ ವಿನೋದ್ ಪ್ರಭಾಕರ್  ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಚೈತನ್ಯ ಅವರು ಈ ಹಿಂದೆ ಆ ದಿನಗಳು ಎಂಬ ಅಂಡರ್ ವರ್ಲ್ಡ್ ಕಥೆ ತೆರೆದಿಟ್ಟಿದ್ದರು. ಮುಂಬರುವ ಚಿತ್ರವು ಮಾಸ್ ಹೀರೋ ಎಂದು ಕರೆಯಲ್ಪಡುವ ವಿನೋದ್ ಅವರೊಂದಿಗೆ ನಿರ್ದೇಶಕರ ಮೊದಲ ಸಹಯೋಗವನ್ನು ಗುರುತಿಸುತ್ತದೆ. ಪ್ರಾಜೆಕ್ಟ್ ಬಗ್ಗೆ ವಿವರಗಳನ್ನು ಮುಚ್ಚಿಡಲಾಗಿದ್ದರೂ, ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ. ಏತನ್ಮಧ್ಯೆ, ವಿನೋದ್ ಪ್ರಭಾಕರ್ ಅವರು ಹಂತಗಳಲ್ಲಿ ಮಾದೇವ ಮತ್ತು ಲಂಕಾಸುರ ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT