ರಮೇಶ್ ಇಂದಿರಾ - ಶ್ರುತಿ ನಾಯ್ಡು ಅವರೊಂದಿಗೆ ಪ್ರಮೋದ್ - ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ನಟ ಪ್ರಮೋದ್ ಜೊತೆಗಿನ ನನ್ನ ಮುಂದಿನ ಯೋಜನೆ ಯೂತ್‌ಫುಲ್ ಎಂಟರ್‌ಟೈನರ್: ಶ್ರುತಿ ನಾಯ್ಡು

ನಟ ಪ್ರಮೋದ್, ನಿರ್ಮಾಪಕಿ ಶ್ರುತಿ ನಾಯ್ಡು ಮತ್ತು ರಮೇಶ್ ಇಂದಿರಾ ಇದೀಗ ಮತ್ತೊಮ್ಮೆ ಸಿನಿಮಾವೊಂದಕ್ಕೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ನಿರ್ಮಾಪಕಿ ಶ್ರುತಿ ನಾಯ್ಡು, 'ಇದು ಪ್ರೀಮಿಯರ್ ಪದ್ಮಿನಿ ಸಿನಿಮಾದ ಸೀಕ್ವೆಲ್ ಆಗಿರುವುದಿಲ್ಲ. ಆದರೆ, ಯೂತ್‌ಫುಲ್ ಎಂಟರ್‌ಟೈನರ್‌ ಆಗಿರುತ್ತದೆ' ಎಂದು ಹೇಳುತ್ತಾರೆ.

ಪ್ರೀಮಿಯರ್ ಪದ್ಮಿನಿಗಾಗಿ ಒಂದಾಗಿದ್ದ ನಟ ಪ್ರಮೋದ್, ನಿರ್ಮಾಪಕಿ ಶ್ರುತಿ ನಾಯ್ಡು ಮತ್ತು ರಮೇಶ್ ಇಂದಿರಾ ಇದೀಗ ಮತ್ತೊಮ್ಮೆ ಸಿನಿಮಾವೊಂದಕ್ಕೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಪ್ರಮೋದ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ ನಿರ್ಮಾಪಕಿ ಶ್ರುತಿ ನಾಯ್ಡು, 'ಮೊದಲೇ ಯೋಜಿಸಿದಂತೆ ಇದು ಪ್ರೀಮಿಯರ್ ಪದ್ಮಿನಿ ಸಿನಿಮಾದ ಸೀಕ್ವೆಲ್ ಆಗಿರುವುದಿಲ್ಲ. ಆದರೆ, ಯೂತ್‌ಫುಲ್ ಎಂಟರ್‌ಟೈನರ್‌ ಆಗಿರುತ್ತದೆ' ಎಂದು ಹೇಳುತ್ತಾರೆ. 

ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಫೆಬ್ರುವರಿ ಅಂತ್ಯಕ್ಕೆ ಪ್ರಾರಂಭವಾಗಲಿದೆ.

'ಪ್ರೀಮಿಯರ್ ಪದ್ಮಿನಿ ಚಿತ್ರದ ಸೀಕ್ವೆಲ್ ಕೂಡ ಬರಬೇಕಿದೆ. ಆದರೆ, ಕೋವಿಡ್‌ನಿಂದಾಗಿ ವಿಳಂಬವಾಯಿತು. ಹಾಗಾಗಿ, ಪ್ರಮೋದ್ ಅವರ ವೃತ್ತಿಜೀವನದಲ್ಲಿ ಗಮನಾರ್ಹ ಬದಲಾವಣೆ ತಂದಿರುವ ಸಲಾರ್‌ನಲ್ಲಿನ ಅವರ ಉಪಸ್ಥಿತಿಯನ್ನು ಪರಿಗಣಿಸಿ ಇದೀಗ ಪ್ರತ್ಯೇಕ ಯೋಜನೆ ಮಾಡಲು ನಾವು ನಿರ್ಧರಿಸಿದ್ದೇವೆ. ಇದು ಸರಿಯಾದ ಸಮಯ ಎಂದು ನಾವು ಭಾವಿಸಿದ್ದೇವೆ. ಇದಲ್ಲದೆ, ನಮ್ಮ ನಿರ್ದೇಶಕ ರಮೇಶ್ ಇಂದಿರಾ ಅವರು ಸ್ಕ್ರಿಪ್ಟ್‌ನೊಂದಿಗೆ ಸಿದ್ಧರಾಗಿದ್ದರು. ಪ್ರಮೋದ್ ಅವರ ವೃತ್ತಿಜೀವನದ ಈ ಹಂತದಲ್ಲಿ ಅವರಿಗೆ ಇದು ಸೂಕ್ತವಾಗಿರುತ್ತದೆ. ವಿಶೇಷವಾಗಿ ಹಾಡು ಮತ್ತು ಭಾವನೆಗಳ ಮೂಲಕ ಯುವಕರೊಂದಿಗೆ ಸಂಪರ್ಕ ಸಾಧಿಸುವ ಎಲ್ಲಾ ಗುಣಲಕ್ಷಣಗಳನ್ನು ಅವರು ಹೊಂದಿದ್ದಾರೆ ಮತ್ತು ನಾನು ಪ್ರಮೋದ್ ಅನ್ನು ಈ ರೀತಿಯಲ್ಲಿ ಪ್ರಸ್ತುತಪಡಿಸಲು ಬಯಸುತ್ತೇನೆ' ಎಂದು ಶ್ರುತಿ ಹೇಳುತ್ತಾರೆ.

10 ವರ್ಷಗಳ ಟೈಮ್‌ಲೈನ್ ವ್ಯತ್ಯಾಸ ಹೊಂದಿರುವ ಈ ಚಿತ್ರವು ಕಾಲೇಜು ಹಿನ್ನೆಲೆಯನ್ನು ಹೊಂದಿದೆ. 'ಈಗಾಗಲೇ, ನಿರ್ದೇಶಕರು ಮತ್ತು ನಟನನ್ನು ಅಂತಿಮಗೊಳಿಸಲಾಗಿದೆ. ಪ್ರೀಮಿಯರ್ ಪದ್ಮಿನಿ ಸಿನಿಮಾ ಭಾಗವಾಗಿದ್ದ ತಂತ್ರಜ್ಞರನ್ನೇ ಮರಳಿ ಕರೆತರಲು ನಾವು ಯೋಜಿಸಿದ್ದೇವೆ. ನಾವು ಅಧಿಕೃತವಾಗಿ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ಘೋಷಿಸುವ ಮೊದಲು ನಾವು ಯೋಜನೆಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇವೆ' ಎಂದು ಅವರು ಹೇಳುತ್ತಾರೆ.

ಪ್ರೀಮಿಯರ್ ಪದ್ಮಿನಿಯ ಸೀಕ್ವೆಲ್‌ ಕೆಲಸದಲ್ಲೂ ಮುಂದುವರಿಯಲು ಶೃತಿ ನಿರ್ಧರಿಸಿದ್ದಾರೆ. 'ಪ್ರೀಮಿಯರ್ ಪದ್ಮಿನಿಯಲ್ಲಿ ನಾಯಕನಾಗಿ ನಟಿಸಿದ ಜಗ್ಗೇಶ್ ಅವರು ಸೀಕ್ವೆಲ್ ಕಥೆಯನ್ನು ಇಷ್ಟಪಟ್ಟಿದ್ದಾರೆ ಮತ್ತು ಪ್ರಮೋದ್ ಅವರ ಈ ಚಿತ್ರ ಮುಗಿಸಿದ ನಂತರ ನಾವು ಆ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತೇವೆ' ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT