ಹಾಡು ಬಿಡುಗಡೆ ಮಾಡಿದ ಒಂದು ಸರಳ ಪ್ರೇಮ ಕಥೆ ತಂಡ 
ಸಿನಿಮಾ ಸುದ್ದಿ

ಸರಳವಾದ ಕಥೆಗಳನ್ನು ನೇರವಾಗಿ ಹೇಳುವುದೂ ಒಂದು ಚಾತುರ್ಯ; ಅದು ಸಿಂಪಲ್ ಸುನಿಗೆ ಇದೆ: ನಟ ಗಣೇಶ್

ಈ ಹಿಂದೆ ಗಣೇಶ್ ಜೊತೆ 'ಸಕತ್'  ಎಂಬ ಸಿನಿಮಾ ಮಾಡಿದ್ದ  'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಸುನಿ ತಮ್ಮ ಮುಂದಿನ ಪ್ರಾಜೆಕ್ಟ್‌ನೊಂದಿಗೆ ಮರಳಿದ್ದಾರೆ.

ಈ ಹಿಂದೆ ಗಣೇಶ್ ಜೊತೆ 'ಸಕತ್' ಎಂಬ ಸಿನಿಮಾ ಮಾಡಿದ್ದ  'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಸುನಿ ತಮ್ಮ ಮುಂದಿನ ಪ್ರಾಜೆಕ್ಟ್‌ನೊಂದಿಗೆ ಮರಳಿದ್ದಾರೆ.

ಈ ಬಾರಿ ನಿರ್ದೇಶಕರು ವಿನಯ್ ರಾಜ್‌ಕುಮಾರ್ ಜೊತೆ 'ಒಂದು ಸರಳ ಪ್ರೇಮ ಕಥೆ' ಎಂಬ ರೊಮ್ಯಾಂಟಿಕ್ ಡ್ರಾಮಾಕ್ಕೆ ಕೈಜೋಡಿಸಿದ್ದಾರೆ. ಫೆಬ್ರವರಿ 8 ರಂದು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿರುವ ನಿರ್ಮಾಪಕರು ಚಿತ್ರದ ಮೊದಲ ಹಾಡನ್ನು ಅನಾವರಣಗೊಳಿಸಿದ್ದಾರೆ. ಇದನ್ನು ಗುರುವಾರ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು.

ಗುನು ಗುನುಗು ಶೀರ್ಷಿಕೆಯ ಸುಮಧುರ ಟ್ರ್ಯಾಕ್‌ನಲ್ಲಿ ನಾಯಕ ನಟರಾದ ವಿನಯ್ ರಾಜ್‌ಕುಮಾರ್ ಮತ್ತು ಮಲ್ಲಿಕಾ ಸಿಂಗ್ ಇದ್ದಾರೆ, ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಗಣೇಶ್ ಹಾಡಿನ ಬಗ್ಗೆ ತಮ್ಮ ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ.

ವಿನಯ್ ರಾಜ್‌ಕುಮಾರ್ ಅವರ ಸಮರ್ಪಣೆಯನ್ನು ಶ್ಲಾಘಿಸಿದ ಅವರು ಇಡೀ ತಂಡವನ್ನು ಹೊಗಳಿದರು. ನಿರ್ದೇಶಕ ಸುನಿ ಅವರು ಸರಳವಾದ ಕಥೆಗಳನ್ನು ನೇರವಾಗಿ ಹೇಳುವ ಜಾಣ್ಮೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಹಾಡಿನ ಬಗ್ಗೆ ಮಾತನಾಡಿದ ವಿಜಯ್ ರಾಜ್‌ಕುಮಾರ್, ಗುನುಗು ಗುನುಗು ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಅತ್ಯುತ್ತಮ ಕೆಲಸವನ್ನು ಶ್ಲಾಘಿಸಿದರು. ಗೀತರಚನೆಕಾರರಾದ ಸಚಿನ್, ಹಾಡಿನ ಸರಳ ಮತ್ತು ಆಕರ್ಷಕ ಸ್ವಭಾವದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ಏತನ್ಮಧ್ಯೆ,  ಸಿನಿಮಾಗೆ ನಟ ವಿಜಯ್ ಸೇತುಪತಿ ಅವರಿಂದ ಬೆಂಬಲ ನೀಡಿದ್ದಾರೆ. ಜನವರಿ 22 ರಂದು ಸ್ವಾತಿಷ್ಟ ಕೃಷ್ಣನ್ ಅವರ ಪಾತ್ರದ ಲುಕ್ ಅನಾವರಣಗೊಳಿಸಲಿದ್ದಾರೆ. ವಿಕ್ರಮ್ ಚಿತ್ರದಲ್ಲಿ ವಿಜಯ್ ಸೇತುಪತಿಯೊಂದಿಗೆ ನಟಿಸಿದ ನಂತರ ಅವರು ಒಂದು ಸರಳ ಪ್ರೇಮ ಕಥೆಯಲ್ಲಿ ನಾಯಕಿಯಾಗಿದ್ದಾರೆ.

ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್, ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಟ ಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಜೊತೆಯಲ್ಲಿ, ರಾಜೇಶ್ ನಟರಂಗ, ಅರುಣಾ ಬಾಲರಾಜ್ ಮತ್ತು ಸಾಧು ಕೋಕಿಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT