ಹಾಡು ಬಿಡುಗಡೆ ಮಾಡಿದ ಒಂದು ಸರಳ ಪ್ರೇಮ ಕಥೆ ತಂಡ 
ಸಿನಿಮಾ ಸುದ್ದಿ

ಸರಳವಾದ ಕಥೆಗಳನ್ನು ನೇರವಾಗಿ ಹೇಳುವುದೂ ಒಂದು ಚಾತುರ್ಯ; ಅದು ಸಿಂಪಲ್ ಸುನಿಗೆ ಇದೆ: ನಟ ಗಣೇಶ್

ಈ ಹಿಂದೆ ಗಣೇಶ್ ಜೊತೆ 'ಸಕತ್'  ಎಂಬ ಸಿನಿಮಾ ಮಾಡಿದ್ದ  'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಸುನಿ ತಮ್ಮ ಮುಂದಿನ ಪ್ರಾಜೆಕ್ಟ್‌ನೊಂದಿಗೆ ಮರಳಿದ್ದಾರೆ.

ಈ ಹಿಂದೆ ಗಣೇಶ್ ಜೊತೆ 'ಸಕತ್' ಎಂಬ ಸಿನಿಮಾ ಮಾಡಿದ್ದ  'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಚಿತ್ರದ ನಿರ್ದೇಶಕ ಸುನಿ ತಮ್ಮ ಮುಂದಿನ ಪ್ರಾಜೆಕ್ಟ್‌ನೊಂದಿಗೆ ಮರಳಿದ್ದಾರೆ.

ಈ ಬಾರಿ ನಿರ್ದೇಶಕರು ವಿನಯ್ ರಾಜ್‌ಕುಮಾರ್ ಜೊತೆ 'ಒಂದು ಸರಳ ಪ್ರೇಮ ಕಥೆ' ಎಂಬ ರೊಮ್ಯಾಂಟಿಕ್ ಡ್ರಾಮಾಕ್ಕೆ ಕೈಜೋಡಿಸಿದ್ದಾರೆ. ಫೆಬ್ರವರಿ 8 ರಂದು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿರುವ ನಿರ್ಮಾಪಕರು ಚಿತ್ರದ ಮೊದಲ ಹಾಡನ್ನು ಅನಾವರಣಗೊಳಿಸಿದ್ದಾರೆ. ಇದನ್ನು ಗುರುವಾರ ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು.

ಗುನು ಗುನುಗು ಶೀರ್ಷಿಕೆಯ ಸುಮಧುರ ಟ್ರ್ಯಾಕ್‌ನಲ್ಲಿ ನಾಯಕ ನಟರಾದ ವಿನಯ್ ರಾಜ್‌ಕುಮಾರ್ ಮತ್ತು ಮಲ್ಲಿಕಾ ಸಿಂಗ್ ಇದ್ದಾರೆ, ವೀರ್ ಸಮರ್ಥ್ ಸಂಗೀತ ಸಂಯೋಜಿಸಿದ್ದಾರೆ. ಗಣೇಶ್ ಹಾಡಿನ ಬಗ್ಗೆ ತಮ್ಮ ಮೆಚ್ಚುಗೆ  ವ್ಯಕ್ತಪಡಿಸಿದ್ದಾರೆ.

ವಿನಯ್ ರಾಜ್‌ಕುಮಾರ್ ಅವರ ಸಮರ್ಪಣೆಯನ್ನು ಶ್ಲಾಘಿಸಿದ ಅವರು ಇಡೀ ತಂಡವನ್ನು ಹೊಗಳಿದರು. ನಿರ್ದೇಶಕ ಸುನಿ ಅವರು ಸರಳವಾದ ಕಥೆಗಳನ್ನು ನೇರವಾಗಿ ಹೇಳುವ ಜಾಣ್ಮೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಹಾಡಿನ ಬಗ್ಗೆ ಮಾತನಾಡಿದ ವಿಜಯ್ ರಾಜ್‌ಕುಮಾರ್, ಗುನುಗು ಗುನುಗು ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಅತ್ಯುತ್ತಮ ಕೆಲಸವನ್ನು ಶ್ಲಾಘಿಸಿದರು. ಗೀತರಚನೆಕಾರರಾದ ಸಚಿನ್, ಹಾಡಿನ ಸರಳ ಮತ್ತು ಆಕರ್ಷಕ ಸ್ವಭಾವದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ಏತನ್ಮಧ್ಯೆ,  ಸಿನಿಮಾಗೆ ನಟ ವಿಜಯ್ ಸೇತುಪತಿ ಅವರಿಂದ ಬೆಂಬಲ ನೀಡಿದ್ದಾರೆ. ಜನವರಿ 22 ರಂದು ಸ್ವಾತಿಷ್ಟ ಕೃಷ್ಣನ್ ಅವರ ಪಾತ್ರದ ಲುಕ್ ಅನಾವರಣಗೊಳಿಸಲಿದ್ದಾರೆ. ವಿಕ್ರಮ್ ಚಿತ್ರದಲ್ಲಿ ವಿಜಯ್ ಸೇತುಪತಿಯೊಂದಿಗೆ ನಟಿಸಿದ ನಂತರ ಅವರು ಒಂದು ಸರಳ ಪ್ರೇಮ ಕಥೆಯಲ್ಲಿ ನಾಯಕಿಯಾಗಿದ್ದಾರೆ.

ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್, ಮಲ್ಲಿಕಾ ಸಿಂಗ್ ಮತ್ತು ಸ್ವಾತಿಷ್ಟ ಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಜೊತೆಯಲ್ಲಿ, ರಾಜೇಶ್ ನಟರಂಗ, ಅರುಣಾ ಬಾಲರಾಜ್ ಮತ್ತು ಸಾಧು ಕೋಕಿಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT