ಅವತಾರ ಪುರುಷ 2 ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಶರಣ್ ಅಭಿನಯದ ಬಹುನಿರೀಕ್ಷಿತ 'ಅವತಾರ ಪುರುಷ 2' ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ

ಇತ್ತೀಚೆಗಷ್ಟೇ 'ಒಂದು ಸರಳ ಪ್ರೇಮ ಕಥೆ' ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿರುವ ಸಂತಸದಲ್ಲಿರುವ ನಿರ್ದೇಶಕ ಸಿಂಪಲ್ ಸುನಿ, ತಮ್ಮ ಬಹುನಿರೀಕ್ಷಿತ ಅವತಾರ ಪುರುಷ ಸಿನಿಮಾದ ಸೀಕ್ವೆಲ್ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ 'ಒಂದು ಸರಳ ಪ್ರೇಮ ಕಥೆ' ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿರುವ ಸಂತಸದಲ್ಲಿರುವ ನಿರ್ದೇಶಕ ಸಿಂಪಲ್ ಸುನಿ, ತಮ್ಮ ಬಹುನಿರೀಕ್ಷಿತ ಅವತಾರ ಪುರುಷ ಸಿನಿಮಾದ ಸೀಕ್ವೆಲ್ ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಶರಣ್, ಆಶಿಕಾ ರಂಗನಾಥ್ ಮತ್ತು ಶ್ರೀನಗರ ಕಿಟ್ಟಿ ನಟಿಸಿದ್ದ ಮಾಟಮಂತ್ರದ ಸುತ್ತ ಸುತ್ತುವ ಅವತಾರ ಪುರುಷ ಚಿತ್ರವು 2022ರ ಮೇನಲ್ಲಿ ಬಿಡುಗಡೆಯಾಗಿತ್ತು. ಇದೀಗ, ಒಂದೂವರೆ ವರ್ಷಗಳ ನಂತರ ಚಿತ್ರದ ಮುಂದುವರಿದ 'ಅವತಾರ ಪುರುಷ- ತ್ರಿಶಂಕು ಪಯಣ' ಮಾರ್ಚ್ 22ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಇತ್ತೀಚೆಗಷ್ಟೇ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದ್ದಾರೆ. 'ಅವತಾರ ಪುರುಷ ಸಿನಿಮಾ ಸೀಕ್ವೆಲ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ ಮತ್ತು ಏನೆಲ್ಲಾ ನಿರೀಕ್ಷೆಗಳು ಇದ್ದವೋ ಅದು ಭಾಗ 2 ರಲ್ಲಿದೆ. ಸೀಕ್ವೆಲ್ ನಡುವಿನ ಅಂತರವು ಉತ್ತಮವಾಗಿದೆ. ಬಾಹುಬಲಿ ಅಥವಾ ಕೆಜಿಎಫ್‌ನಂತಹ ಚಿತ್ರಗಳು 2 ವರ್ಷಗಳ ಅಂತರದೊಂದಿಗೆ ಬಿಡುಗಡೆಯಾಗಿವೆ. ಸೀಕ್ವೆಲ್‌ಗಳು ಸಮಯ ತೆಗೆದುಕೊಳ್ಳುತ್ತದೆ ಮತ್ತು ಅವತಾರ ಪುರುಷ 2 ಗಾಗಿ ನಾನು ಪರಿಪೂರ್ಣ ದಿನಾಂಕವನ್ನು ಕಂಡುಕೊಂಡಿದ್ದೇನೆ' ಎಂದು ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಹೇಳುತ್ತಾರೆ.

ಅವತಾರ ಪುರುಷ ಸೀಕ್ವೆಲ್‌ನಲ್ಲಿ ಸಾಯಿಕುಮಾರ್, ವಿಜಯ್ ಚೆಂಡೂರ್, ಸುಧಾರಾಣಿ, ಭವ್ಯ, ಅಯ್ಯಪ್ಪ ಪಿ ಶರ್ಮಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ.

ಅವತಾರ ಪುರುಷ 2 ಚಿತ್ರದ ಪೋಸ್ಟರ್

ಈಮಧ್ಯೆ, ಪುಷ್ಕರ ಸಂಸ್ಥೆಯು ಪ್ರತಿಭಾವಂತ ನಿರ್ದೇಶಕರು ಮತ್ತು ನಟರನ್ನು ಒಳಗೊಂಡ ಹಲವು ಸಿನಿಮಾಗಳನ್ನು ಸಿದ್ಧಪಡಿಸುತ್ತಿದೆ. 'ನನ್ನ ನಿರ್ಮಾಣ ಸಂಸ್ಥೆ ಪುಷ್ಕರ್ ಫಿಲ್ಮ್ಸ್ ಮೂಲಕ ಪ್ರೇಕ್ಷಕರಿಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ನೀಡಲು ನಾನು ಬಯಸುತ್ತೇನೆ. ಇದೀಗ, ನಾನು ಅವತಾರ ಪುರುಷಕ್ಕಾಗಿ ಕಾಯುತ್ತಿದ್ದೇನೆ' ಎಂದು ಪುಷ್ಕರ್ ಹೇಳುತ್ತಾರೆ.

'ನನ್ನ ನಿರ್ಮಾಣಧ 12 ಸಿನಿಮಾಗಳ ಪೈಕಿ 9 ಚಿತ್ರಗಳು ಹೊಸಬರ ಚಿತ್ರಗಳಾಗಿವೆ. ನಾನು ಅದನ್ನು ಮುಂದುವರಿಸಲು ಬಯಸುತ್ತೇನೆ. ನಾನು ಯಾವಾಗಲೂ ಹೊಸ ಪ್ರತಿಭೆಗಳನ್ನು ನಂಬುತ್ತೇನೆ. ಇದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಮೂಲಕ ಪ್ರಾರಂಭವಾಯಿತು. ನಾನು ಯಶಸ್ವಿಯಾಗಿದ್ದೇನೆ ಮತ್ತು ನನ್ನ ಮುಂದಿನ ಪ್ರಯತ್ನಗಳಲ್ಲಿ ನಾನು ಹೆಚ್ಚು ಹೊಸಬರು ಮತ್ತು ತಂತ್ರಜ್ಞರನ್ನು ಒಳಗೊಳ್ಳುತ್ತಿದ್ದೇನೆ' ಎನ್ನುತ್ತಾರೆ ಅವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT