ಭುವನಂ ಗಗನಂ ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

ಪ್ರಮೋದ್- ಪೃಥ್ವಿ ಅಂಬಾರ್ ನಟನೆಯ 'ಭುವನಂ ಗಗನಂ' ಚಿತ್ರ ಬಿಡುಗಡೆಗೆ ಸಜ್ಜು

ಭುವನಂ ಗಗನಂ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಅನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದರು. 'ಭುವನಂ ಗಗನಂ' ನನಗೆ ಪುನೀತ್ ರಾಜ್‌ಕುಮಾರ್ ಅಭಿನಯದ ವಂಶಿ ಚಿತ್ರದ ಹಾಡನ್ನು ನೆನಪಿಸಿತು ಎಂದರು ಧ್ರುವ.

ಭುವನಂ ಗಗನಂ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಅನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿದರು. 'ಭುವನಂ ಗಗನಂ' ನನಗೆ ಪುನೀತ್ ರಾಜ್‌ಕುಮಾರ್ ಅಭಿನಯದ ವಂಶಿ ಚಿತ್ರದ ಹಾಡನ್ನು ನೆನಪಿಸಿತು ಎಂದರು ಧ್ರುವ.

'ನಾನು ಇಂದು ಇಲ್ಲಿಗೆ ಬರಲು ಮುಖ್ಯ ಕಾರಣ ನನ್ನ ಅಣ್ಣ (ಚಿರಂಜೀವಿ ಸರ್ಜಾ) ಮತ್ತು ಸುದೀಪ್ ಸರ್ ನಟಿಸಿದ ವರದನಾಯಕ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ತಂತ್ರಜ್ಞ ಗಿರೀಶ್ ಮೂಲಿಮನಿ ಅವರಾಗಿದ್ದು, ಅವರೇ ಈ ಚಿತ್ರದ ನಿರ್ದೇಶಕರು. ನಾನು ಬಹದ್ದೂರ್ ಮತ್ತು ಭಜರಂಗಿ ಚಿತ್ರಗಳಲ್ಲಿ ಛಾಯಾಗ್ರಾಹಕ ಉದಯ್ ಲೀಲಾ ಅವರೊಂದಿಗೆ ಕೆಲಸ ಮಾಡಿದ್ದೇನೆ. ಒಂದಲ್ಲ ಒಂದು ರೀತಿಯಲ್ಲಿ ನನ್ನ ಜೊತೆ ಒಡನಾಟವಿರುವ ತಂತ್ರಜ್ಞರ ಜೊತೆ ಈ ಸಿನಿಮಾದ ಭಾಗವಾಗಲು ಖುಷಿಯಾಗುತ್ತಿದೆ. ಭುವನಂ ಗಗನಂ ಸಿನಿಮಾದಲ್ಲಿ ಅವರು ಅತ್ಯುತ್ತಮವಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಧ್ರುವ.

ಚಿತ್ರದಲ್ಲಿ ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ನಾಯಕರಾಗಿ ನಟಿಸಿದ್ದಾರೆ. 'ನಾನು ಈ ಮೊದಲು ಪೂರ್ಣ ಪ್ರಮಾಣದ ಪ್ರೇಮಕಥೆಯನ್ನು ಮಾಡಿಲ್ಲ ಮತ್ತು ಭುವನಂ ಗಗನಂ ಚಿತ್ರವು ನನ್ನ ಗಮನ ಸೆಳೆಯಲು ಇದು ಒಂದು ಕಾರಣವಾಗಿತ್ತು. ನಾವು ಶೂಟಿಂಗ್ ಮುಗಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಡಬ್ಬಿಂಗ್ ಪ್ರಕ್ರಿಯೆಯನ್ನೂ ಆರಂಭಿಸಿದ್ದೇವೆ’ ಎನ್ನುತ್ತಾರೆ ಪ್ರಮೋದ್.

ಮುನೇಗೌಡ ನಿರ್ಮಾಣದ ಈ ಚಿತ್ರಕ್ಕೆ ಗಿರೀಶ್ ಮೂಲಿಮನಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಭುವನಂ ಗಗನಂ ಲವ್, ರೊಮ್ಯಾನ್ಸ್ ಮತ್ತು ಕುಟುಂಬದೊಂದಿಗೆ ವ್ಯವಹರಿಸುವ ಭಾವನಾತ್ಮಕ ಕಥೆಯಾಗಿದೆ. ಇದು ನಗರ ಮತ್ತು ಗ್ರಾಮೀಣ ಭಾಗದ ಎರಡೂ ಸನ್ನಿವೇಶಗಳಲ್ಲಿ ತೆರೆದುಕೊಳ್ಳುವ ಕಥೆಯಾಗಿದೆ.

ಚಿತ್ರಕ್ಕೆ ರಾಚೇಲ್ ಡೇವಿಡ್ (ಲವ್ ಮಾಕ್‌ಟೇಲ್) ಮತ್ತು ಪೊನ್ನು ಅಶ್ವತಿ ನಾಯಕಿಯರಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ದಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ ಮತ್ತು ಚೇತನ್ ದುರ್ಗ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರಕ್ಕೆ ಗುಮಿನೇನಿ ವಿಜಯ್ ಅವರ ಸಂಗೀತ ಸಂಯೋಜನೆಯಿದ್ದು, ಸುನಿಲ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT