ನಟ ವಸಿಷ್ಠ ಸಿಂಹ 
ಸಿನಿಮಾ ಸುದ್ದಿ

VIP ಚಿತ್ರೀಕರಣ ಬಹುತೇಕ ಪೂರ್ಣ; ನಟ ವಸಿಷ್ಠ ಸಿಂಹ ಪಾತ್ರದ ಫಸ್ಟ್ ಲುಕ್ ಬಿಡುಗಡೆ

ನಿರ್ದೇಶಕ ಬ್ರಹ್ಮ ಜೊತೆಗಿನ ವಸಿಷ್ಠ ಸಿಂಹ ಅವರ ಮುಂಬರುವ ಚಿತ್ರವು ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಇನ್ನು ಕೇವಲ ಎರಡು ಹಾಡುಗಳು ಮತ್ತು ಫೈಟ್ ಸೀಕ್ವೆನ್ಸ್ ಮಾತ್ರ ಉಳಿದಿದೆ. ಈಮಧ್ಯೆ, ವಸಿಷ್ಠ ಸಿಂಹ ಅವರ ಪಾತ್ರದ ಫಸ್ಟ್ ಲುಕ್ ಅನ್ನು ನಿರ್ಮಲಾನಂದ ಸ್ವಾಮೀಜಿ ಬಿಡುಗಡೆ ಮಾಡಿದ್ದಾರೆ.

ನಿರ್ದೇಶಕ ಬ್ರಹ್ಮ ಜೊತೆಗಿನ ವಸಿಷ್ಠ ಸಿಂಹ ಅವರ ಮುಂಬರುವ ಚಿತ್ರವು ಬಹುತೇಕ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಇನ್ನು ಕೇವಲ ಎರಡು ಹಾಡುಗಳು ಮತ್ತು ಫೈಟ್ ಸೀಕ್ವೆನ್ಸ್ ಮಾತ್ರ ಉಳಿದಿದೆ. ಈಮಧ್ಯೆ, ವಸಿಷ್ಠ ಸಿಂಹ ಅವರ ಪಾತ್ರದ ಫಸ್ಟ್ ಲುಕ್ ಅನ್ನು ನಿರ್ಮಲಾನಂದ ಸ್ವಾಮೀಜಿ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರವು ಆಕ್ಷನ್-ಪ್ಯಾಕ್ಡ್ ಡ್ರಾಮಾ ಆಗಿದ್ದು, ಸ್ಟಂಟ್ ಮಾಸ್ಟರ್‌ಗಳಾದ ಅರ್ಜುನ್ ಮತ್ತು ವಿಕ್ರಮ್ ಮೋರ್, ಸಾಹಸ ದೃಶ್ಯಗಳ ಸಂಯೋಜನೆ ಮಾಡಿದ್ದಾರೆ ಮತ್ತು ಶಿವ ಅವರು ಫೈಟ್ ದೃಶ್ಯಗಳನ್ನು ವಿನ್ಯಾಸಗೊಳಿಸಿದ್ದಾರೆ. ವರದಿ ಪ್ರಕಾರ, ನಟ ವಸಿಷ್ಠ ಅವರು ಪ್ರೊಫೆಸರ್ ಸೇರಿದಂತೆ ಅನೇಕ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ವಿಐಪಿ ಎಂದರೆ ಇದು 'ಪ್ರತೀಕಾರ ಪ್ರಗತಿಯಲ್ಲಿದೆ' (Vengeance in Progress) ಎಂದರ್ಥ. ಇದೊಂದು ಕ್ರೈಮ್ ಥ್ರಿಲ್ಲರ್ ಆಗಿದೆ ಎಂದು ಚಿತ್ರತಂಡ ತಿಳಿಸಿದೆ.

ವಿಐಪಿ ಚಿತ್ರದ ಪೋಸ್ಟರ್

ವಿಐಪಿ ಚಿತ್ರವನ್ನು ಕಲಾಸೃಷ್ಟಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆರ್‌ಎಸ್ ಮೋಹನ್ ಕುಮಾರ್ ಮತ್ತು ಆರ್ ಅಚ್ಯುತ ರಾವ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅಫ್ಜಲ್ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ತೇಜಸ್ವಿನಿ ಶರ್ಮಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಇಂಗ್ಲಿಷ್ ಮಂಜ, ಮೇರಿ, ಮತ್ತು ಫ್ಲಾಟ್ ನಂ.9 ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ಇನ್ನುಳಿದ ಪಾತ್ರವರ್ಗದಲ್ಲಿ ಬಾಲರಾಜವಾಡಿ, ಸುನಿಲ್ ಪುರಾಣಿಕ್ ಮತ್ತು ಸ್ಪರ್ಶ ರೇಖಾ ಇದ್ದಾರೆ. ವಿಐಪಿ ಚಿತ್ರಕ್ಕೆ ರಾಜೀವ್ ಗಣೇಶನ್ ಅವರ ಛಾಯಾಗ್ರಹಣ ಮತ್ತು ರಾಘವನ್ ಕಾರ್ತಿಕ್ ಅವರ ಸಂಗೀತವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT