ಭಾವನಾ ರೆಡ್ಡಿ - ಪ್ರಖ್ಯಾತ್ 
ಸಿನಿಮಾ ಸುದ್ದಿ

'ಜೆಸಿ- ದಿ ಯೂನಿವರ್ಸಿಟಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಭಾವನಾ ರೆಡ್ಡಿ ಪದಾರ್ಪಣೆ

ಕನ್ನಡ ಚಿತ್ರರಂಗದ ಉದಯೋನ್ಮುಖ ಪ್ರತಿಭೆ ಭಾವನಾ ರೆಡ್ಡಿ ಅವರು ಪ್ರಖ್ಯಾತ್-ಚೇತನ್ ಜಯರಾಂ ಅವರ 'ಜೆಸಿ - ದಿ ಯೂನಿವರ್ಸಿಟಿ' ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ತಲೆಮಾರುಗಳಿಂದ ಕರ್ನಾಟಕದಲ್ಲಿಯೇ ಬೇರುಗಳನ್ನು ಹೊಂದಿರುವ ಈ ಯುವ ಪ್ರತಿಭೆ ಚಲನಚಿತ್ರ ಹಿನ್ನೆಲೆಯಿಂದ ಬಂದವರು.

ಕನ್ನಡ ಚಿತ್ರರಂಗದ ಉದಯೋನ್ಮುಖ ಪ್ರತಿಭೆ ಭಾವನಾ ರೆಡ್ಡಿ ಅವರು ಪ್ರಖ್ಯಾತ್-ಚೇತನ್ ಜಯರಾಂ ಅವರ 'ಜೆಸಿ - ದಿ ಯೂನಿವರ್ಸಿಟಿ' ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ತಲೆಮಾರುಗಳಿಂದ ಕರ್ನಾಟಕದಲ್ಲಿಯೇ ಬೇರುಗಳನ್ನು ಹೊಂದಿರುವ ಈ ಯುವ ಪ್ರತಿಭೆ ಚಲನಚಿತ್ರ ಹಿನ್ನೆಲೆಯಿಂದ ಬಂದವರು.

ಆಕೆಯ ತಂದೆ ಕನ್ನಡದ ಪ್ರಸಿದ್ಧ ವಿತರಕರು ಮತ್ತು ನಿರ್ಮಾಪಕ ಜೆ ಶ್ರೀನಿವಾಸಲು ಆಗಿದ್ದು, ಅವರು ದೂರದರ್ಶನಕ್ಕಾಗಿ ಕೆಲವು ಟೆಲಿಫಿಲ್ಮ್‌ಗಳನ್ನು ಸಹ ನಿರ್ದೇಶಿಸಿದ್ದಾರೆ. ಆದರೆ, ಭಾವನಾ ಇಂಡಸ್ಟ್ರಿಯಲ್ಲಿ ತನ್ನದೇ ಆದ ನೆಲೆಯನ್ನು ಕಂಡುಕೊಳ್ಳಲು ನಿರ್ಧರಿಸಿದ್ದಾರೆ. 'ನಾನು ಯಾವಾಗಲೂ ಮಾಡೆಲ್ ಆಗಬೇಕೆಂಬ ನನ್ನ ಆರಂಭಿಕ ಕನಸಿನೊಂದಿಗೆ ಗ್ಲಾಮರ್ ಜಗತ್ತಿಗೆ ಕಾಲಿಡಲು ಬಯಸುತ್ತೇನೆ' ಎಂದರು.

ನಾನು ಇದನ್ನು ನನ್ನ ತಂದೆಯೊಂದಿಗೆ ಹಂಚಿಕೊಂಡಾಗ, ನಾನು ಮಾಡೆಲಿಂಗ್ ಅನ್ನು ಪರಿಗಣಿಸುತ್ತಿದ್ದರೆ, ನಟನೆಯನ್ನು ಮುಂದುವರಿಸಬಹುದು ಎಂದು ಅವರು ಸಲಹೆ ನೀಡಿದರು. ಅವರ ಸಲಹೆಯನ್ನು ನಾನು ಸ್ವೀಕರಿಸಿದೆ. ಅದನ್ನು ನನ್ನ ಆಶಯಗಳೊಂದಿಗೆ ಜೋಡಿಸಿದೆ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನೆಮಾದಲ್ಲಿ ತರಬೇತಿ ಪಡೆದಿದ್ದೇನೆ ಎಂದರು.

ಜೆಸಿ- ದಿ ಯೂನಿವರ್ಸಿಟಿ ಪೋಸ್ಟರ್

ಸ್ಟೇಜ್ ಶೋನಲ್ಲಿ ಭಾಗವಹಿಸಿದ ನಂತರ ನಟನೆ ಬಗ್ಗೆ ಉತ್ಸಾಹವು ಮತ್ತಷ್ಟು ಹೆಚ್ಚಾಯಿತು ಮತ್ತು ನಾನು ಸರಿಯಾದ ಅವಕಾಶಕ್ಕಾಗಿ ಕಾತುರದಿಂದ ಕಾಯುತ್ತಿದ್ದೆ. ಸ್ವಲ್ಪ ಕಾಯುವಿಕೆಯ ನಂತರ, ನಾನು ಅಂತಿಮವಾಗಿ ಜೆಸಿಯೊಂದಿಗೆ ಚೊಚ್ಚಲ ಅವಕಾಶ ಪಡೆದುಕೊಂಡೆ ಎಂದು ಈಗಾಗಲೇ ಕೆಲವು ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿರುವ ಭಾವನಾ ಹೇಳುತ್ತಾರೆ.

ಹೊಸ ಪ್ರತಿಭೆಗಳನ್ನು ಉತ್ತಮವಾಗಿ ಅನ್ವೇಷಿಸುವ ಪರಿಪೂರ್ಣ ಸಮಯದಲ್ಲಿ ನಾನು ಚಿತ್ರರಂಗಕ್ಕೆ ಪ್ರವೇಶಿಸಿದ್ದೇನೆ ಎಂದು ನಾನು ನಂಬುತ್ತೇನೆ ಮತ್ತು ಅದರಲ್ಲಿ ಹೆಚ್ಚಿನದನ್ನು ಮಾಡಲು ನಾನು ನಿರ್ಧರಿಸಿದ್ದೇನೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT