ಧೀರ ಭಗತ್ ರಾಯ್ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಡಿಸೆಂಬರ್ 6ಕ್ಕೆ 'ಧೀರ ಭಗತ್ ರಾಯ್' ಬಿಡುಗಡೆ!

ನಾಯಕ ನಟನಾಗಿ ರಾಕೇಶ್ ದಳವಾಯಿ ಹಾಗೂ ನಟಿ ಸುಚರಿತ ಸಹಾಯಾರ ಅವರನ್ನು ಈ ಚಿತ್ರ ಪರಿಚಯಿಸುತ್ತಿದೆ. ಇವರಿಬ್ಬರಿಗೂ ಇದು ಚೊಚ್ಚಲ ಚಿತ್ರವಾಗಿದೆ.

ಡಿಸೆಂಬರ್ 6 ರಂದು ಬಿಡುಗಡೆಗೆ ಸಜ್ಜಾಗಿರುವ ಧೀರ ಭಗತ್ ರಾಯ್ ಬಹುನಿರೀಕ್ಷಿತ ಪುಷ್ಪ 2 ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಮುಖಾಮುಖಿಯಾಗುತ್ತಿದೆ. ಕನ್ನಡ ಸಿನಿಮಾ ಯಶಸ್ವಿಯಾಗುವ ಭರವಸೆಯಲ್ಲಿ ನಿರ್ದೇಶಕ ಕರ್ಣನ್ ಮತ್ತವರ ತಂಡ ಇದ್ದಾರೆ. ಇದು ಕೇವಲ ಸ್ಪರ್ಧೆಯ ಬಗ್ಗೆ ಅಲ್ಲ, ಇದು ಎತ್ತರವಾಗಿ ನಿಲ್ಲುವ ಧೈರ್ಯವಾಗಿದೆ. ಬಾಹುಬಲಿ ವಿರುದ್ಧ ರಂಗಿ ತರಂಗದ ಯಶಸ್ಸು ನಮಗೆ ಈ ಹೆಜ್ಜೆ ಇಡುವ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದು ಕರ್ಣನ್ ಹೇಳಿದ್ದಾರೆ.

ನಿರ್ಮಾಪಕ ಪ್ರವೀಣ್ ಗೌಡ, ಕನ್ನಡಿಗರು ನಮ್ಮನ್ನು ಬೆಂಬಲಿಸಲಿದ್ದಾರೆ. ನಾವು ನಮ್ಮ ಪ್ರೇಕ್ಷಕರನ್ನು ನಂಬುತ್ತೇವೆ ಎಂದರು. ನಾಯಕ ನಟನಾಗಿ ರಾಕೇಶ್ ದಳವಾಯಿ ಹಾಗೂ ನಟಿ ಸುಚರಿತ ಸಹಾಯಾರ ಅವರನ್ನು ಈ ಚಿತ್ರ ಪರಿಚಯಿಸುತ್ತಿದೆ. ಇವರಿಬ್ಬರಿಗೂ ಇದು ಚೊಚ್ಚಲ ಚಿತ್ರವಾಗಿದೆ.

ಪುಷ್ಪ 2 ಜೊತೆಗೆ ಸ್ಪರ್ಧಿಸುತ್ತಿರುವುದಕ್ಕೆ ರಾಕೇಶ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ."ನಾನು ಬಳ್ಳಾರಿ ಹುಡುಗ ಕನ್ನಡ ಚಿತ್ರರಂಗ ನನ್ನ ಹೃದಯ ಎಂದಿದ್ದಾರೆ.

ಶ್ರೀ ಓಂ ಸಿನಿ ಎಂಟರ್‌ಟೈನರ್ಸ್ ನಿರ್ಮಾಣದ ಧೀರ ಭಗತ್ ರಾಯ್ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಸೆಲ್ವಂ ಜಾನ್ ಅವರ ಛಾಯಾಗ್ರಹಣ ಮತ್ತು ಎನ್ ಎಂ ವಿಶ್ವ ಅವರ ಸಂಕಲನವಿದೆ. ಉತ್ತಮವಾಗಿ ಚಿತ್ರ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ ಕರ್ಣನ್, ಪುಷ್ಪ 2 ರ ವಿತರಕರ ದುರಹಂಕಾರವನ್ನು ಬಲವಾಗಿ ವಿರೋಧಿಸಿದರು.

ಕನ್ನಡೇತರ ಚಿತ್ರಗಳ ಪ್ರಭಾವಕ್ಕೆ ಕನ್ನಡಿಗರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಪ್ರಸಾದ್ ಹೇಳಿದ್ದಾರೆ. ಸಲಗ ನಿರ್ದೇಶಕ ವಿಜಯ್ ಕುಮಾರ್ ಅವರ ಬೆಂಬಲದೊಂದಿಗೆ ಧೀರಾ ಭಗತ್ ರಾಯ್ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸುವ ಗುರಿ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ