ರಂಜಿತ್ ಮತ್ತು ಜಗದೀಶ್ 
ಸಿನಿಮಾ ಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಮಾರಾಮಾರಿ: ದೊಡ್ಮನೆಯಿಂದ ಹೊರದಬ್ಬಿಸಿಕೊಂಡ್ರಾ ರಂಜಿತ್ ಮತ್ತು ವಕೀಲ ಜಗದೀಶ್?

ವಕೀಲ ಜಗದೀಶ್‌ ಜೊತೆಗೆ ಮತ್ತೋರ್ವ ಸ್ಪರ್ಧಿಯೂ ಔಟ್ ಆಗಿದ್ದಾರಂತೆ. ಶನಿ ಸೀರಿಯಲ್‌ನ ಸೂರ್ಯದೇವ ಖ್ಯಾತಿಯ ರಂಜಿತ್ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಮೂರನೇ ವಾರವೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ‘ಬಿಗ್ ಬಾಸ್‌’ ಮನೆಯಲ್ಲಿ ಜಗಳ ತಾರಕಕ್ಕೇರಿದೆ. ಸ್ಪರ್ಧಿಗಳ ತಾಳ್ಮೆ, ಸಹನೆಯ ಮಿತಿ ಮೀರಿದ ಪರಿಣಾಮ ಜಗದೀಶ್‌ ಹೊರಬಿದ್ದಿದ್ದಾರೆ ಎನ್ನಲಾಗಿದೆ. ವಕೀಲ ಜಗದೀಶ್‌ ಜೊತೆಗೆ ಮತ್ತೋರ್ವ ಸ್ಪರ್ಧಿಯೂ ಔಟ್ ಆಗಿದ್ದಾರಂತೆ.‘ಶನಿ’ ಸೀರಿಯಲ್‌ನ ಸೂರ್ಯದೇವ ಖ್ಯಾತಿಯ ರಂಜಿತ್ ಕೂಡ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್’ ಮನೆಯಲ್ಲಿ ಜಗದೀಶ್ ಮತ್ತು ರಂಜಿತ್ ಮಧ್ಯೆ ಮಾರಾಮಾರಿ ನಡೆದಿದ್ಯಂತೆ. ಪರಿಣಾಮ, ರೂಲ್ಸ್ ಅನ್ವಯ ಇಬ್ಬರನ್ನೂ ಹೊರದಬ್ಬಲಾಗಿದೆ ಅಂತ ಹೇಳಲಾಗುತ್ತಿದೆ. ಶಿಶಿರ್ ಮನೆ ಕ್ಯಾಪ್ಟನ್ ಆದ ಕ್ಷಣದಿಂದ ಲಾಯರ್ ಜಗದೀಶ್ ಮೂಲೆ ಗುಂಪಾಗಿದ್ದರು.

ಇತರೆ ಸ್ಪರ್ಧಿಗಳ ಒಂದು ಗುಂಪು ಮಾಡಿಕೊಂಡು, ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡುತ್ತಿದ್ದರು. ಎರಡು ಮೂರು ಸಲ ರಂಜಿತ್ ಕೂಡ ಪರೋಕ್ಷವಾಗಿ ಬೆದರಿಕೆ ಹಾಕಿದ್ದರು. ಮಾನಸ ಅವರ ವಿಚಾರದಲ್ಲಿ ಜಗದೀಶ್‌ ಅವರು ಮಧ್ಯ ಮಾತನಾಡಿದ ಸಂದರ್ಭದಲ್ಲಿ ರಂಜಿತ್‌, ಜಗದೀಶ್‌ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಹಲ್ಲೆ ಮಾಡುವವರೆಗೂ ಹೋಗಿದೆ. ಇಬ್ಬರು ಈ ಸಂದರ್ಭದಲ್ಲಿ ಹೊಡೆದಾಡಿಕೊಂಡಿದ್ದು, ನಿಯಮದ ಉಲ್ಲಂಘನೆ ಆದ ಕಾರಣ ಇಬ್ಬರನ್ನೂ ಮನೆಯಿಂದ ಆಚೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.

ಆದರೆ ರಂಜಿತ್ ಮತ್ತು ಜಗದೀಶ್ ಹೊರ ಬಂದಿರುವ ಫೋಟೋ ಅಥವಾ ವಿಡಿಯೋ ಸಾಕ್ಷಿಯೂ ಸಿಕ್ಕಿಲ್ಲ. ವಾಹಿನಿಯವರು ಕೂಡ ಯಾವುದೇ ಸ್ಪಷ್ಟನೆ ನೀಡಿಲ್ಲ, ಹೀಗಾಗಿ ಹೊರಗಿನಿಂದ ಪಬ್ಲಿಸಿಟಿ ಸಿಗಬೇಕು ಎಂದು ಜಗದೀಶ್ ತಂಡದವರು ಈ ಗೇಮ್ ಪ್ಲ್ಯಾನ್ ಮಾಡಿರಬಹುದು ಎಂಬ ಗೊಂದಲವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT