ಬಿಲ್ಲಾ ರಂಗ ಬಾಷಾ ಸಿನಿಮಾ 
ಸಿನಿಮಾ ಸುದ್ದಿ

ಸುದೀಪ್ ಅಭಿನಯದ 'ಬಿಲ್ಲಾ ರಂಗ ಬಾಷಾ' ಸಿನಿಮಾ ನಿರ್ಮಾಣ ಮಾಡಲಿದ್ದಾರೆ 'ಹನು-ಮಾನ್' ಪ್ರೊಡ್ಯೂಸರ್

ಎ ಟೇಲ್ ಫ್ರಮ್ ದಿ ಫ್ಯೂಚರ್". ಬಿಲ್ಲಾ ರಂಗ ಭಾಷಾ- ಫಸ್ಟ್‌ ಬ್ಲಡ್‌ ಸಿನಿಮಾದ ಆಫೀಶಿಯಲ್‌ ಟೈಟಲ್‌ ಲೋಗೊ ಮತ್ತು ಕಾನ್ಸೆಪ್ಟ್‌ ವಿಡಿಯೋ ಇಲ್ಲಿದೆ" ಎಂದು ಸುದೀಪ್‌ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್‌ ತನ್ನ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ಬಿಲ್ಲಾ ರಂಗ ಭಾಷಾ ಸಿನಿಮಾದ ಟೈಟಲ್‌ ಲೋಗೋ ಮತ್ತು ಪರಿಕಲ್ಪನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಕ್ರಾಂತ್‌ ರೋಣ ಸಿನಿಮಾದ ಬಳಿಕ ಅಭಿನಯ ಚಕ್ರವರ್ತಿಯವರ ಜತೆ ಅನೂಪ್‌ ಭಂಡಾರಿಯವರ ಮುಂದಿನ ಸಿನಿಮಾ ಬಿಲ್ಲಾ ರಂಗ ಭಾಷಾ.

ಎ ಟೇಲ್ ಫ್ರಮ್ ದಿ ಫ್ಯೂಚರ್". ಬಿಲ್ಲಾ ರಂಗ ಭಾಷಾ- ಫಸ್ಟ್‌ ಬ್ಲಡ್‌ ಸಿನಿಮಾದ ಆಫೀಶಿಯಲ್‌ ಟೈಟಲ್‌ ಲೋಗೊ ಮತ್ತು ಕಾನ್ಸೆಪ್ಟ್‌ ವಿಡಿಯೋ ಇಲ್ಲಿದೆ" ಎಂದು ಸುದೀಪ್‌ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸುದೀಪ್‌ ಪ್ರೊಫೈಲ್‌ನಡಿ ಅಭಿಮಾನಿಗಳು "ಅಪ್‌ಡೇಟ್‌ ಬೇಕು ಬಾಸ್‌" ಎಂದು ಹೇಳುತ್ತಿದ್ದಾರೆ. "ಬಾಸ್‌ ಅಪ್‌ಡೇಟ್‌ ಬಾಸ್‌" "ಅಪ್‌ಡೇಟ್‌ ಬೇಕು ಬಾಸ್‌" ಎಂದೆಲ್ಲ ಧ್ವನಿ ಕೇಳುತ್ತಾರೆ. ತಕ್ಷಣ ವಿಡಿಯೋದಲ್ಲಿ ಅನೂಪ್‌ ಭಂಡಾರಿ ಅವರು ಪುಸ್ತಕ ಓದುವಂತೆ ಆ ಪುಸ್ತಕದಲ್ಲಿ ಬಿಲ್ಲಾ ರಂಗ ಭಾಷಾದ ಟೀಮ್‌ ಕುರಿತು ವಿವರವೂ ದೊರಕುತ್ತದೆ. "ಹನುಮಾನ್‌ ನಿರ್ಮಾಪಕರಿಂದ, ರಂಗಿತರಂಗ, ರಾಜರಥ ವಿಕ್ರಾಂತ್‌ ರೋಣ ನಿರ್ದೇಶಕರಿಂದ ಬಿಲ್ಲಾ ರಂಗ ಭಾಷಾ ಸಿನಿಮಾ" ಎಂಬ ಅಪ್‌ಡೇಟ್‌ ಅನ್ನು ಹಂಚಿಕೊಳ್ಳಲಾಗಿದೆ.

ಒಂದಾನೊಂದು ಕಾಲದಲ್ಲಿ ಕ್ರಿ.ಶಕ 2209ರಲ್ಲಿ ಎಂದು ಆರಂಭವಾಗುವ ವಿಡಿಯೋದಲ್ಲಿ ಬಿಲ್ಲಾ ರಂಗ ಭಾಷಾ ಎಂಬ ಮೂವರ ಕಥೆಯನ್ನು ಹೊಂದಿರುವ ಸೂಚನೆಯನ್ನು ಈ ವಿಡಿಯೋ ನೀಡಿದೆ. ಸಿನಿಮಾದ ನಿರ್ಮಾಣದ ಬಗ್ಗೆ ಅಧಿಕೃತ ವಿವರಗಳನ್ನು ಇಂದು ಪ್ರಕಟಿಸಲಾಗುವುದು. ಈ ಮಧ್ಯೆ, ಸುದೀಪ್ ಮ್ಯಾಕ್ಸ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಸೆಟ್ ನಿರ್ಮಾಣಕ್ಕೆ ಬರೋಬ್ಬರಿ ಮೂರು ತಿಂಗಳು ಬೇಕಾಗುವ ನಿರೀಕ್ಷೆ ಇದ್ದು, ಈ ವರ್ಷದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಬಿಲ್ಲಾ ರಂಗ ಬಾಷಾ, ಸುದೀಪ್ ಅವರ ಅತಿ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಲಿದೆ, ಅನುಪ್ ಭಂಡಾರಿ ಬರೆದಿರುವ ಈ ಚಿತ್ರವು ವೈಜ್ಞಾನಿಕ ಕಾದಂಬರಿಯ ಅಂಶಗಳನ್ನು ಒಳಗೊಂಡಿರುತ್ತದೆ. ಈ ಆಸಕ್ತಿದಾಯಕ ಯೋಜನೆಗಳ ಹೊರತಾಗಿ, ಸುದೀಪ್ ತಮ್ಮದೇ ಆದ ನಿರ್ದೇಶನದ ಸಾಹಸದಲ್ಲಿ ಕೆಲಸ ಮಾಡುತ್ತಿದ್ದಾರೆ, ಇದನ್ನು KRG ಸ್ಟುಡಿಯೋಸ್ ನಿರ್ಮಿಸಲಿದೆ.

ಸುದೀಪ್ ಅಭಿನಯದ ನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಮ್ಯಾಕ್ಸ್ ಸಿನಿಮಾ ರಿಲೀಸ್ ಮಾಡಲು ಇನ್ನೂ ಅಧಿಕೃತ ಬಿಡುಗೆ ದಿನಾಂಕ ನಿಗದಿ ಮಾಡಿಲ್ಲ. ನಿರ್ದೇಶಕರು ಚಿತ್ರದ ಮೊದಲ ಸಿಂಗಲ್‌ ಲಿರಿಕಲ್ ವೀಡಿಯೊವನ್ನು ಬಿಡುಗಡೆ ಮಾಡುವುದರೊಂದಿಗೆ ಅಭಿಮಾನಿಗಳ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದ್ದಾರೆ. ಈ ವಿಡಿಯೋ ಸುದೀಪ್ ಹುಟ್ಟುಹಬ್ಬದಂದು ಸರಿಗಮ ಕನ್ನಡದಲ್ಲಿ ಪ್ರೀಮಿಯರ್ ಆಗಲಿದೆ.

ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆಯಲ್ಲಿ ಮತ್ತು ಅನುಪ್ ಭಂಡಾರಿಯವರ ಸಾಹಿತ್ಯದೊಂದಿಗೆ ಚೇತನ್ ಗಂಧರ್ವ ಮತ್ತು ರಾಪರ್ ಎಂಸಿ ಬಿಜ್ಜು ಅವರ ಹಿನ್ನೆಲೆ ಗಾಯನವಿದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT