ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ  
ಸಿನಿಮಾ ಸುದ್ದಿ

ನನಗೂ ಒಬ್ಬ ಗೆಳೆಯ ಬೇಕು! ನಾನ್ಯಾಕೆ 2ನೇ ಮದುವೆಯಾಗಿಲ್ಲ ಅಂದರೆ...: ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಹೇಳಿಕೆ ವೈರಲ್

2000ದ ದಶಕದ ಆರಂಭದಲ್ಲಿ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರೊಂದಿಗೆ ಡೀಪ್ ಲವ್​​ನಲ್ಲಿದ್ದು ಆ ನಂತರ ಮದುವೆಯಾಗಿದಾಂಪತ್ಯ ಜೀವನ ನಡೆಸಿದ್ದ ನಟಿ ರೇಣು ದೇಸಾಯಿ ಈಗ ಸಿಂಗಲ್ ಮದರ್.

ಟಾಲಿವುಡ್ ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಅವರು ತಾವ್ಯಾಕೆ 2ನೇ ಮದುವೆಯಾಗಿಲ್ಲ ಎಂಬುದರ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

2000ದ ದಶಕದ ಆರಂಭದಲ್ಲಿ ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರೊಂದಿಗೆ ಡೀಪ್ ಲವ್​​ನಲ್ಲಿದ್ದು ಆ ನಂತರ ಮದುವೆಯಾಗಿದಾಂಪತ್ಯ ಜೀವನ ನಡೆಸಿದ್ದ ನಟಿ ರೇಣು ದೇಸಾಯಿ ಈಗ ಸಿಂಗಲ್ ಮದರ್. ವಿಚ್ಛೇದನದ ನಂತರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸಿ ಮಕ್ಕಳ ಕಡೆ ತಮ್ಮ ಸಂಪೂರ್ಣ ಗಮನ ನೀಡಿದರು. ನನ್ನ ಮಕ್ಕಳ ಬಗ್ಗೆ ನನಗಿರುವ ಜವಾಬ್ದಾರಿ ನಾನು 2ನೇ ಮದುವೆ ಆಗದಂತೆ ತಡೆಯುತ್ತಿದೆ ಎಂದಿದ್ದಾರೆ.

ಆದರೆ ಈಗ ಅವರ ಹೇಳಿಕೆಯೊಂದು ವೈರಲ್ ಆಗಿದೆ. ಮಗಳಿಗೆ 18 ವರ್ಷ ತುಂಬುವುದನ್ನು ಕಾಯುತ್ತಿದ್ದೇನೆ. ಮಗಳಿಗೆ 18 ವರ್ಷದವಾದರೆ ಮದುವೆಯಾಗುತ್ತೇನೆ. ನನಗೂ ಬಾಯ್​ಫ್ರೆಂಡ್ ಬೇಕು ಎಂದು ಹೇಳಿರುವ ಮಾತು ಎಲ್ಲೆಡೆ ವೈರಲ್ ಆಗಿದೆ.

ಡಿವೋರ್ಸ್ ನಂತರ ಪವನ್ ಕಲ್ಯಾಣ್ ಅವರು 2013 ರಲ್ಲಿ ರಷ್ಯಾದ ನಟಿ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು. ಆದರೆ ರೇಣು ಮರುಮದುವೆಯಾಗಲು ನಿರ್ಧರಿಸಲಿಲ್ಲ. ನಿಖಿಲ್ ವಿಜಯೇಂದ್ರ ಸಿಂಹ ಪಾಡ್‌ಕ್ಯಾಸ್ಟ್‌ನಲ್ಲಿ ನಡೆದ ನೇರ ಸಂಭಾಷಣೆಯಲ್ಲಿ ನಟಿ ತಾನು ಏಕೆ ಒಂಟಿಯಾಗಿ ಉಳಿದಿದ್ದಾರೆ.

ನಿಮ್ಮ ಜೀವನವನ್ನು ಹಂಚಿಕೊಳ್ಳಲು ಸಂಗಾತಿಯ ಅಗತ್ಯವಿದೆಯೇ ಎಂದು ರೇಣು ಕೇಳಿದಾಗ, "ಖಂಡಿತ, ನನಗೂ ಒಬ್ಬ ಸಂಗಾತಿ ಬೇಕು ಅನಿಸುತ್ತದೆ. ಆದರೆ ನನ್ನ ಮಕ್ಕಳ ಬಗ್ಗೆ ನನಗಿರುವ ಜವಾಬ್ದಾರಿಯ ಪ್ರಜ್ಞೆಯೇ ನನ್ನನ್ನು ಹಾಗೆ ಮಾಡದಂತೆ ತಡೆಯುತ್ತದೆ ಎಂದು ಹೇಳಿದ್ದಾರೆ. ನಾನು ಮರು ಮದುವೆ ಎಂಬ ವಿಷಯವನ್ನು ಪ್ರತ್ಯೇಕವಾಗಿ ನೋಡಿದರೆ, ಹೌದು, ನನಗೆ ಒಬ್ಬ ಗೆಳೆಯ ಇರಬೇಕು. ನನಗೆ ಮದುವೆ ಆಗಬೇಕು, ನನಗೆ ಒಂದು ಜೀವನ ಇರಬೇಕು. ಆದರೆ ನಾನು ಅದನ್ನು ಮಕ್ಕಳ ದೃಷ್ಟಿಕೋನದಿಂದ ನೋಡಿದಾಗ ಇದು ಬದಲಾಗುತ್ತದೆ ಎಂದಿದ್ದಾರೆ.

ಅವರು 2018 ರ ನಿಶ್ಚಿತಾರ್ಥದ ಬ್ರೇಕಪ್ ಬಗ್ಗೆಯೂ ಮಾತನಾಡಿದರು. ನಾನು ಮತ್ತೆ ಮದುವೆಯಾಗಲು ಪ್ರಯತ್ನಿಸಿದೆ. ನಾನು ನಿಶ್ಚಿತಾರ್ಥ ಮಾಡಿಕೊಂಡೆ. ಅದು ಒಂದು ವ್ಯವಸ್ಥಿತ ವಿಷಯವಾಗಿತ್ತು. ಆದರೆ ಮದುವೆಯಾದರೆ ಆ ಹೊಸ ಸಂಬಂಧಕ್ಕೆ ಅಥವಾ ಮಕ್ಕಳಿಗೆ ನಾನು ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ಅರಿತುಕೊಂಡೆ ಎಂದಿದ್ದಾರೆ.

ಈ ಜೋಡಿ 2009 ರಲ್ಲಿ ವಿವಾಹವಾದರು. 2004 ರಲ್ಲಿ ಅಕಿರಾ ನಂದನ್ ಮತ್ತು 2010 ರಲ್ಲಿ ಆದ್ಯಾ ಎಂಬ ಇಬ್ಬರು ಮಕ್ಕಳನ್ನು ಪಡೆದರು. ನಂತರ 2011 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. 2012 ರಲ್ಲಿ ಡಿವೋರ್ಸ್ ಫೈನಲ್ ಆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT