ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಚಿತ್ರದ ಮೊದಲ ಹಾಡು ಬಿಡುಗಡೆ; ಜುಲೈನಲ್ಲಿ ತೆರೆಕಾಣುವ ನಿರೀಕ್ಷೆ

'ಹರ ಓಂ' ಗೀತೆಯನ್ನು ಜೂಡಾ ಸ್ಯಾಂಡಿ ಸಂಯೋಜಿಸಿದ್ದು, ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಹಾಡಿಗೆ ಉಷಾ ಭಂಡಾರಿ ಮತ್ತು ದರ್ಶನ್ ನೃತ್ಯ ಸಂಯೋಜನೆ ಮಾಡಿದ್ದಾರೆ.

ರಂಗಿತರಂಗ ಮತ್ತು ಅವನೇ ಶ್ರೀಮನ್ನಾರಾಯಣ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಎಚ್‌ಕೆ ಪ್ರಕಾಶ್ ಇದೀಗ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಎಂಬ ಹೊಸ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಭಿಷೇಕ್ ಎಂ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ದಿಯಾ ಮತ್ತು ಬ್ಲಿಂಕ್ ಖ್ಯಾತಿಯ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಂಆರ್‌ಟಿ ಮ್ಯೂಸಿಕ್ (ಲಹರಿ) ಚಾನಲ್‌ನಲ್ಲಿ ಚಿತ್ರದ ಮೊದಲ ಹಾಡು 'ಹರ ಓಂ' ಬಿಡುಗಡೆ ಮಾಡಲಾಗಿದೆ.

'ಹರ ಓಂ' ಗೀತೆಯನ್ನು ಜುಡಾ ಸ್ಯಾಂಡಿ ಸಂಯೋಜಿಸಿದ್ದು, ನಾಗಾರ್ಜುನ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಹಾಡಿಗೆ ಉಷಾ ಭಂಡಾರಿ ಮತ್ತು ದರ್ಶನ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಉಷಾ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರೇಮಂ ಪೂಜ್ಯಂ ಮತ್ತು ಕೌಸಲ್ಯಾ ಸುಪ್ರಜಾ ರಾಮ ಚಿತ್ರಗಳಿಗೆ ಹೆಸರುವಾಸಿಯಾದ ನಟಿ ಬೃಂದಾ ಆಚಾರ್ಯ, 'ಶಿವನ ಹೆಸರಿನಿಂದ ನನ್ನ ದಿನ ಪ್ರಾರಂಭವಾಗುತ್ತದೆ. ಈ ಹಾಡನ್ನು ಕೇಳಿದ ನಂತರ, ನಾನು ಅದನ್ನು ನಿರಂತರವಾಗಿ ಗುನುಗುತ್ತಿರುತ್ತೇನೆ' ಎಂದರು.

ನಿರ್ದೇಶಕ ಅಭಿಷೇಕ್ ಮಾತನಾಡಿ, 'ನಾನು ಈ ಹಿಂದೆ ನಿರ್ದೇಶಕ ಸಿಂಪಲ್ ಸುನಿ ಜೊತೆ ಕೆಲಸ ಮಾಡಿದ್ದರೂ, ನಿರ್ದೇಶಕನಾಗಿ ಇದು ನನ್ನ ಮೊದಲ ಚಿತ್ರ. ನಾನು ರಕ್ಷಿತ್ ಶೆಟ್ಟಿ ಮತ್ತು ಸಚಿನ್ ಜೊತೆ VFX ಸ್ಟುಡಿಯೋವನ್ನು ನಡೆಸುತ್ತಿದ್ದೇನೆ. 'ಹರ ಓಂ' ಹಾಡು ಕ್ಲೈಮ್ಯಾಕ್ಸ್‌ಗೆ ಸ್ವಲ್ಪ ಮೊದಲು ಕಾಣಿಸಿಕೊಳ್ಳುತ್ತದೆ ಮತ್ತು ಭಾವನಾತ್ಮಕ ತೂಕವನ್ನು ಹೊಂದಿದೆ. ನಾವು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆ ಮತ್ತು ಬಿಡುಗಡೆಯತ್ತ ಇದು ನಮ್ಮ ಮೊದಲ ಹೆಜ್ಜೆಯಾಗಿದೆ' ಎಂದು ಹೇಳಿದರು.

ಈ ಚಿತ್ರ ಜುಲೈನಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ದಶಕದ ಹಿಂದೆ ಅದೇ ತಿಂಗಳು ರಂಗಿತರಂಗ ಚಿತ್ರ ಬಿಡುಗಡೆಯಾಗಿತ್ತು. 'ಇದು ಪೂರ್ಣ ವೃತ್ತದಂತೆ ಭಾಸವಾಗುತ್ತಿದೆ. ನಿರ್ಮಾಪಕನಾಗಿ ಅದು ನನ್ನ ಚೊಚ್ಚಲ ಚಿತ್ರ ಮತ್ತು ಇದು ನನ್ನ ಆರನೇ ಚಿತ್ರವಾಗಿದೆ' ಎಂದು ನಿರ್ಮಾಪಕ ಎಚ್‌ಕೆ ಪ್ರಕಾಶ್ ಹೇಳಿದರು.

ದೀಕ್ಷಿತ್ ಶೆಟ್ಟಿ ಮಾತನಾಡಿ, 'ಬ್ಲಿಂಕ್ ಚಿತ್ರ ತೆರೆಕಂಡ ಒಂದು ವರ್ಷದ ನಂತರ, ನಾನು ಹಿಂತಿರುಗಿದ್ದೇನೆ. ಈ ಹಾಡಿನಲ್ಲಿ ನನ್ನ ಗುರು ಮತ್ತು ನನ್ನ ವಿದ್ಯಾರ್ಥಿಗಳು ಇದ್ದಾರೆ ಎಂಬುದು ವಿಶೇಷವಾಗಿದೆ. ಥಿಯೇಟರ್‌ಗಳಲ್ಲಿ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ ಚಿತ್ರವನ್ನು ನೋಡಲು ಎದುರು ನೋಡುತ್ತಿದ್ದೇನೆ' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT