ಶಿವರಾಜ್‌ಕುಮಾರ್ - ಸರ್ವೈವರ್ ಪೋಸ್ಟರ್ 
ಸಿನಿಮಾ ಸುದ್ದಿ

ತೆರೆ ಮೇಲೆ ಬರಲಿದೆ ನಟ ಶಿವರಾಜ್‌ಕುಮಾರ್ ಕ್ಯಾನ್ಸರ್ ಪ್ರಯಾಣ; 'Survivor' ಚಿತ್ರಕ್ಕೆ ಪ್ರದೀಪ್ ಕೆ ಶಾಸ್ತ್ರಿ ಆ್ಯಕ್ಷನ್ ಕಟ್

ಸರ್ವೈವರ್ ಸಾಕ್ಷ್ಯಚಿತ್ರವು ನಟ ಶಿವರಾಜ್‌ಕುಮಾರ್ ಅವರ ನೈಜ ಜೀವನ ಶೈಲಿಯನ್ನು ಅವರ ವಿಶಿಷ್ಟವಾದ ಆ್ಯಕ್ಷನ್ ದೃಶ್ಯಗಳು, ಹಾಡುಗಳನ್ನು ಒಳಗೊಂಡಿರುವ ರೋಮಾಂಚಕಾರಿ ಮತ್ತು ಮನರಂಜನಾ ಅಂಶಗಳೊಂದಿಗೆ ತೆರೆಮೇಲೆ ತರಲು ಯೋಜಿಸಲಾಗಿದೆ.

130ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಇದೀಗ ಡಾಕ್ಯು-ಡ್ರಾಮಾ ಆಗಿರುವ Survivor ನಲ್ಲಿ, ನಿಜ ಜೀವನದ ಹೋರಾಟದ ಕುರಿತು ಹೇಳಲಿದ್ದಾರೆ. ಕ್ಯಾನ್ಸರ್‌ನೊಂದಿಗಿನ ತಮ್ಮ ಹೋರಾಟವನ್ನೇ ತೆರೆಮೇಲೆ ತೋರಿಸಲಿದ್ದಾರೆ. ರೋಗ ಪತ್ತೆಯಾದಂದಿನಿಂದ ಹಿಡಿದು ಚೇತರಿಕೆಯವರೆಗಿನ ಅವರ ಪ್ರಯಾಣದ ಫಿಲ್ಟರ್ ಮಾಡದ, ಭಾವನಾತ್ಮಕ ನೋಟವನ್ನು ಪ್ರೇಕ್ಷಕರಿಗೆ ನೀಡಲಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶಿವರಾಜ್‌ಕುಮಾರ್ ಅವರ ಪತ್ನಿ ಗೀತಾ ನಿರ್ಮಿಸಲಿರುವ ಚಿತ್ರವನ್ನು 'ಮೇಡ್ ಇನ್ ಬೆಂಗಳೂರು' ಖ್ಯಾತಿಯ ಪ್ರದೀಪ್ ಕೆ ಶಾಸ್ತ್ರಿ ನಿರ್ದೇಶಿಸಲಿದ್ದಾರೆ.

ಸರ್ವೈವರ್ ಸಾಕ್ಷ್ಯಚಿತ್ರವು ನಟ ಶಿವರಾಜ್‌ಕುಮಾರ್ ಅವರ ನೈಜ ಜೀವನ ಶೈಲಿಯನ್ನು ಅವರ ವಿಶಿಷ್ಟವಾದ ಆ್ಯಕ್ಷನ್ ದೃಶ್ಯಗಳು, ಹಾಡುಗಳನ್ನು ಒಳಗೊಂಡಿರುವ ರೋಮಾಂಚಕಾರಿ ಮತ್ತು ಮನರಂಜನಾ ಅಂಶಗಳೊಂದಿಗೆ ತೆರೆಮೇಲೆ ತರಲು ಯೋಜಿಸಲಾಗಿದೆ. ಇದು 90 ನಿಮಿಷಗಳು ಇರುತ್ತದೆ.

ಚಿತ್ರೀಕರಣ ಆರಂಭಿಸಿರುವ ಪ್ರದೀಪ್, ಸರ್ವೈವರ್ 'ಸೂಪರ್‌ಸ್ಟಾರ್‌ನ ಸಾಕ್ಷ್ಯಚಿತ್ರ'ವಾಗಲಿದೆ. ಭಯ, ಅನಿಶ್ಚಿತತೆ ಮತ್ತು ನೋವಿನ ಮೂಲಕ ಹೋರಾಡಿ, ಬಲವಾಗಿ ಹೊರಹೊಮ್ಮಿದ ಜೀವನದ ಪ್ರತಿಬಿಂಬವಾಗಿರುತ್ತದೆ ಎಂದು ಹೇಳುತ್ತಾರೆ. ನೇರ ಸಾಕ್ಷ್ಯಚಿತ್ರವಾಗಿರುವುದಕ್ಕಿಂತ ಭಿನ್ನವಾಗಿ, ಸರ್ವೈವರ್ ಅನ್ನು ಲೈವ್-ಆಕ್ಷನ್ ಸೀಕ್ವೆನ್ಸ್‌ಗಳು, ಸಂದರ್ಶನಗಳು, ನಾಟಕೀಯ ಭಾಗಗಳು ಮತ್ತು ಮರಣವನ್ನು ಎದುರಿಸುವುದರಿಂದ ಹಿಡಿದು ಕುಟುಂಬ ಮತ್ತು ನಂಬಿಕೆಯಲ್ಲಿ ಬಲವನ್ನು ಹುಡುಕುವವರೆಗೆ ಅವರ ಜೀವನದ ಆಳವಾದ ಭಾವನಾತ್ಮಕ ಕ್ಷಣಗಳನ್ನು ಡಾಕ್ಯು-ಡ್ರಾಮಾವಾಗಿ ವಿನ್ಯಾಸಗೊಳಿಸಲಾಗಿದೆ.

ಈ ಯೋಜನೆಯನ್ನು ಹೇಗೆ ಕಲ್ಪಿಸಿಕೊಂಡಿರಿ ಎಂದು ಕೇಳಿದಾಗ ಪ್ರದೀಪ್, 'ಕಳೆದ ವರ್ಷ ಮತ್ತೊಂದು ಯೋಜನೆಗಾಗಿ ಶಿವಣ್ಣ ಮತ್ತು ನಾನು ಒಟ್ಟಿಗೆ ಕೆಲಸ ಮಾಡಬೇಕಿತ್ತು. ಅದು ಕ್ರೀಡಾ ನಾಟಕ. ಆದರೆ, ಅದೇ ಸಮಯದಲ್ಲಿ ಸೆಪ್ಟೆಂಬರ್‌ನಲ್ಲಿ ಅವರ ಕ್ಯಾನ್ಸರ್ ಬಗ್ಗೆ ತಿಳಿಯಿತು. ನಮ್ಮ ಯೋಜನೆಗಳ ಸಂಪೂರ್ಣ ಹಾದಿ ಬದಲಾಯಿತು ಮತ್ತು ಈಗ, ಸರ್ವೈವರ್‌ ನಿರ್ದೇಶಿಸುವುದು ಗೌರವ ಎಂದು ನಾನು ಭಾವಿಸುತ್ತೇನೆ ಮತ್ತು ಆ ಕ್ರೀಡಾ ನಾಟಕಕ್ಕಾಗಿ ನಾವು ಮತ್ತೆ ಒಟ್ಟಿಗೆ ಸೇರುತ್ತೇವೆ. ಇತರ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿರುವುದರಿಂದ 25-30 ದಿನಗಳ ವೇಳಾಪಟ್ಟಿಯಲ್ಲಿ ಚಿತ್ರವನ್ನು ಚಿತ್ರೀಕರಿಸಲು ಯೋಜಿಸುತ್ತಿದ್ದೇವೆ' ಎಂದು ಹೇಳಿದರು.

'ಅವರ ಹಿಂದಿನ ಆರೋಗ್ಯ ಸಮಸ್ಯೆಗಳ ಬಗ್ಗೆ ಹಲವರಿಗೆ ತಿಳಿದಿಲ್ಲ. ಮೆದುಳಿನ ಸಮಸ್ಯೆ, ಹೃದಯಾಘಾತ ಮತ್ತು ಈಗ ಕ್ಯಾನ್ಸರ್ ಸೇರಿ ಮೂರು ಬಾರಿ ಸಾವನ್ನು ಎದುರಿಸಿದ್ದಾರೆ. ಆದರೆ, ಈ ಕಥೆಯು ಪ್ರಾಥಮಿಕವಾಗಿ ಕ್ಯಾನ್ಸರ್ ವಿರುದ್ಧದ ಅವರ ವಿಜಯೋತ್ಸವದ ಮೇಲೆ ಕೇಂದ್ರೀಕರಿಸುತ್ತದೆ. ನಾಗರಾಜು ಅವರಿಂದ ಶಿವರಾಜ್‌ಕುಮಾರ್ ಆಗಿ ಅವರ ರೂಪಾಂತರವು ಸಾಂಕೇತಿಕವಾಗಿದೆ. ಜನಸಾಮಾನ್ಯರಿಗೆ, ಅವರು ಯಾವಾಗಲೂ ಸೂಪರ್‌ಹೀರೋ ಆಗಿದ್ದಾರೆ. ಆದರೆ, ಮಾನವನಾಗಿ ಅವರ ಹೋರಾಟ ಮತ್ತು ಧೈರ್ಯವನ್ನು ಶ್ಲಾಘಿಸುವುದಾಗಿದೆ' ಎಂದರು.

ನಿರ್ದೇಶಕರು ಮಿಯಾಮಿಯಲ್ಲಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಸಹ ಭೇಟಿಯಾಗಿದ್ದು, ಈ ಸಾಕ್ಷ್ಯಚಿತ್ರವು ಅವರ ಅಳಿಯ ಡಾ. ದಿಲೀಪ್ ಅವರ ವಿಶೇಷ ನೋಟವನ್ನು ಒಳಗೊಂಡಿದೆ. ಅವರ ನಿರಂತರ ಬೆಂಬಲದ ಆಧಾರಸ್ತಂಭವಾದ ಗೀತಾ ಶಿವರಾಜ್‌ಕುಮಾರ್ ಮತ್ತು ವಿವಿಧ ಉದ್ಯಮಗಳ ಪ್ರಸಿದ್ಧ ನಟರು ಸಹ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವಾಗಲೂ ಅವರು '45' ಚಿತ್ರಕ್ಕಾಗಿ ಫೈಟ್ ಸನ್ನಿವೇಶವನ್ನು ಸಹ ಚಿತ್ರೀಕರಿಸಿದ್ದಾರೆ. ಇದು ಸಾಕ್ಷ್ಯಚಿತ್ರದ ಭಾಗವಾಗಲಿದೆ.

'ಶಿವಣ್ಣ ಅವರ ಹೋರಾಟದ ಕುರಿತು ಮಾತನಾಡುವುದರಿಂದ, ಅದು ಇತರರಲ್ಲಿ ಜಾಗೃತಿ ಮೂಡಿಸುತ್ತದೆ ಮತ್ತು ಭರವಸೆ ನೀಡುತ್ತದೆ. ನಾವು ತಡೆಗಟ್ಟುವ ಆರೋಗ್ಯ ಸೇವೆಯನ್ನು ನೀಡಲು ಸಾಧ್ಯವಿಲ್ಲ. ಆದರೆ, ಒಂದು ಚಿತ್ರವಾಗಿ ಆ ವಿಚಾರದ ಕುರಿತು ಮುಖ್ಯವಾದ ವಿಚಾರಗಳನ್ನು ಹೇಳಬಹುದು. ಶಿವಣ್ಣನ ಕಥೆ ಕೇಳಲು ಅರ್ಹವಾಗಿದೆ' ಎಂದು ಪ್ರದೀಪ್ ಹೇಳುತ್ತಾರೆ.

ಸರ್ವೈವರ್ ಚಿತ್ರವನ್ನು ಅಂತಾರಾಷ್ಟ್ರೀಯ ಬಿಡುಗಡೆಗಾಗಿ ಸಿದ್ಧಪಡಿಸಲಾಗುತ್ತಿದೆ ಮತ್ತು ಚಿತ್ರತಂಡ ಅದರ ಸುತ್ತ ಕೆಲಸ ಮಾಡುತ್ತಿದೆ.

'ಶಿವರಾಜ್‌ಕುಮಾರ್ ಅವರ ಮುಂಬರುವ ಚಿತ್ರ 45 ನಂತರ ಶೀಘ್ರದಲ್ಲೇ ಇದನ್ನು ಬಿಡುಗಡೆ ಮಾಡಲು ನಾವು ಯೋಜಿಸಿದ್ದೇವೆ. ಸರ್ವೈವರ್ ಕಥೆ ಹೇಳುವಿಕೆಯನ್ನು ಮೀರಿದ್ದು; ಇದು ಶಿವಣ್ಣ ಅವರ ತಾರಾಪಟ್ಟದ ಹಿಂದಿನ ಶಕ್ತಿಯನ್ನು ಸಾಕಾರಗೊಳಿಸುತ್ತದೆ. ಮೇಡ್ ಇನ್ ಬೆಂಗಳೂರು ಚಿತ್ರಕ್ಕಾಗಿ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಇದರಲ್ಲೂ ಕೆಲಸ ಮಾಡುತ್ತಿದೆ. ಅಶ್ವಿನ್ ಪಿ ಕುಮಾರ್ ಸಂಗೀತ ಸಂಯೋಜನೆ, ಬಜರಂಗ್ ಕೊನಾಥಮ್ ಛಾಯಾಗ್ರಹಣ ಮತ್ತು ಕಿರಣ್ ಜಿಎಸ್ ಸಂಪಾದಕರಾಗಿದ್ದಾರೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT