ಮಹಾವತಾರ ನರಸಿಂಹ 
ಸಿನಿಮಾ ಸುದ್ದಿ

Mahavatar Narsimha ಬಾಕ್ಸ್ ಆಫಿಸ್ ಅಬ್ಬರ; ಹಿಂದಿಯಲ್ಲೇ 100 ಕೋಟಿ ಗಳಿಕೆಯತ್ತ ದಾಪುಗಾಲು!

ಭಾರತೀಯ ಸಿನಿಮಾ ಬಾಕ್ಸಾಫಿಸ್ ಗಳಿಕೆಯಲ್ಲಿ ಮಹಾವತಾರ ನರಸಿಂಹ ಚಿತ್ರದ ಅಬ್ಬರ ಮುಂದುವರೆದಿದ್ದು. ಹಿಂದಿ ಭಾಷೆಯೊಂದರಲ್ಲೇ ಚಿತ್ರದ ಗಳಿಕೆ 80 ಕೋಟಿ ರೂ ದಾಟಿದ್ದು, ಚಿತ್ರ 100 ಕೋಟಿ ರೂಗಳಿಕೆಯತ್ತ ದಾಪುಗಾಲಿರಿಸಿದೆ.

ಬೆಂಗಳೂರು: ಕನ್ನಡದ ಆ್ಯನಿಮೇಷನ್ ಸಿನಿಮಾ ಮಹಾವತಾರ ನರಸಿಂಹ ಚಿತ್ರ ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದ್ದು, ಹಿಂದಿ ಭಾಷೆಯೊಂದರಲ್ಲೇ ಚಿತ್ರ 100 ಕೋಟಿ ರೂಗಳಿಕೆಯತ್ತ ದಾಪುಗಾಲಿರಿಸಿದೆ.

ಹೌದು.. ಭಾರತೀಯ ಸಿನಿಮಾ ಬಾಕ್ಸಾಫಿಸ್ ಗಳಿಕೆಯಲ್ಲಿ ಮಹಾವತಾರ ನರಸಿಂಹ ಚಿತ್ರದ ಅಬ್ಬರ ಮುಂದುವರೆದಿದ್ದು. ಹಿಂದಿ ಭಾಷೆಯೊಂದರಲ್ಲೇ ಚಿತ್ರದ ಗಳಿಕೆ 80 ಕೋಟಿ ರೂ ದಾಟಿದ್ದು, ಚಿತ್ರ 100 ಕೋಟಿ ರೂಗಳಿಕೆಯತ್ತ ದಾಪುಗಾಲಿರಿಸಿದೆ.

ಈ ಬಗ್ಗೆ ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಮಾಹಿತಿ ನೀಡಿದ್ದು, ಮಹಾವತಾರ ನರಸಿಂಹ ಇದೇ ಜುಲೈ 25 ಶುಕ್ರವಾರದಂದು ಬಿಡುಗಡೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಚಿತ್ರ ತನ್ನ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಅಬ್ಬರ ಆರ್ಭಟ ನಡೆಸುತ್ತಿದೆ.

ಈಗಾಗಲೇ ಚಿತ್ರ ಜಾಗತಿಕವಾಗಿ ನೂರು ಕೋಟಿ ಕ್ಲಬ್ ಸೇರಿದ್ದು, ಬ್ಲಾಕ್ ಬಸ್ಟರ್ ಪಟ್ಟಿಗೆ ಸೇರ್ಪಡೆಯಾಗಿದ್ದು ಮಾತ್ರವಲ್ಲದೇ ಹಿಂದಿಯಲ್ಲಿ 100 ಕೋಟಿ ರೂಗಳಿಕೆಯತ್ತ ಮುನ್ನುಗ್ಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಮಹಾವತಾರ ನರಸಿಂಹ ಚಿತ್ರ ಹಿಂದಿಯಲ್ಲಿ 2ನೇ ವಾರವೂ ಭರ್ಜರಿ ಗಳಿಕೆ ಮಾಡುತ್ತಿದ್ದು, ಮೊದಲ ವಾರಕ್ಕಿಂತ ಶೇ.57.28 ರಷ್ಟು ಹೆಚ್ಚು ಗಳಿಕೆ ಮಾಡಿದೆ. 2ನೇ ವಾರಾಂತ್ಯಕ್ಕೆ ಚಿತ್ರದ ಒಟ್ಟು ಗಳಿಕೆ 84.44 ಕೋಟಿ ರೂ ಏರಿಕೆಯಾಗಿದೆ. ಆ ಮೂಲಕ ಚಿತ್ರವು ಹಿಂದಿ ಭಾಷೆಯೊಂದರಲ್ಲೇ 100 ಕೋಟಿ ರೂಗಳತ್ತ ದಾಪುಗಾಲಿರಿಸಿದೆ.

ಯಾವುದೇ ಸ್ಟಾರ್​ ಕಲಾವಿದರು ಅಥವಾ ಬಹುದೊಡ್ಡ ಪಾತ್ರವರ್ಗವಿಲ್ಲದೆ ರಿಲೀಸ್ ಆದ ಈ ಚಿತ್ರವು ಇದೀಗ ಭಾರತೀಯ ಚಿತ್ರೋದ್ಯಮದಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಅಶ್ವಿನ್ ಕುಮಾರ್​ ನಿರ್ದೇಶನದ ಹಾಗೂ ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದ ಕ್ಲೀಮ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಣ್ಣಲ್ಲಿ ಮಣ್ಣಾದ ʻವೃಕ್ಷಮಾತೆʼ; ಸಕಲ ಸರ್ಕಾರಿ ಗೌರವಗಳೊಂದಿಗೆ ತಿಮ್ಮಕ್ಕ ಅಂತ್ಯಕ್ರಿಯೆ

ಜಮ್ಮು-ಕಾಶ್ಮೀರ ನೌಗಮ್ ಪೋಲಿಸ್ ಠಾಣೆ ಸ್ಫೋಟ, ಮೃತರ ಸಂಖ್ಯೆ 9ಕ್ಕೆ ಏರಿಕೆ, 32 ಮಂದಿ ಗಾಯ, ಭಯೋತ್ಪಾದಕ ಕೃತ್ಯವೇ? ಪೊಲೀಸರು ಹೇಳುವುದೇನು-Video

ಬಿಹಾರದಲ್ಲಿ ಮೋಡಿ ಮಾಡಿದ NDAನ ಮಖಾನಾ ಮಂಡಳಿ!

ಬಿಹಾರದಲ್ಲಿ ಹೀನಾಯ ಸೋಲು: ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ; ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಚರ್ಚೆ

ಬಿಹಾರ ವಿಧಾನಸಭೆ ಚುನಾವಣೆ: NDA ಜನರಿಗೆ ಲಂಚ ನೀಡಿ ಮತಗಳ ಖರೀದಿ- 'ಜನ್ ಸುರಾಜ್' ಪಕ್ಷದ ಮೊದಲ ಪ್ರತಿಕ್ರಿಯೆ!

SCROLL FOR NEXT