ಸಿನಿಮಾ ಸುದ್ದಿ

ನಿಧಿ ಅಗರ್ವಾಲ್ ಘಟನೆ ಬಳಿಕ ಹೈದರಾಬಾದ್‌ನಲ್ಲಿ ಸಮಂತಾ ರುತ್ ಪ್ರಭುಗೆ ಸಂಕಷ್ಟ; ಜನಸಂದಣಿಯಿಂದ ಬೇಸತ್ತ ನಟಿ!

ಸಿರಿಮಲ್ಲೆ ಸೀರೆಗಳ ಉದ್ಘಾಟನೆಗಾಗಿ ಸಮಂತಾ ಜುಬಿಲಿ ಹಿಲ್ಸ್‌ಗೆ ಬಂದಿದ್ದರು. ಅವರ ಉಪಸ್ಥಿತಿಯ ಕುರಿತು ಸುದ್ದಿ ಹರಡುತ್ತಿದ್ದಂತೆ, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ವೀಕ್ಷಕರ ಬೃಹತ್ ಗುಂಪು ಆ ಸ್ಥಳದ ಹೊರಗೆ ಜಮಾಯಿಸಿದೆ.

ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ 'ದಿ ರಾಜಾ ಸಾಬ್' ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮ ಮುಗಿಸಿಕೊಂಡು ಹಿಂತಿರುಗುತ್ತಿದ್ದ ವೇಳೆ ನಟಿ ನಿಧಿ ಅಗರ್ವಾಲ್ ಸುತ್ತ ನೂರಾರು ಅಭಿಮಾನಿಗಳು ಸುತ್ತುವರೆದಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಇದೀಗ ಭಾನುವಾರವೂ ಅಂತಹದ್ದೇ ಘಟನೆ ವರದಿಯಾಗಿದ್ದು, ಜುಬಿಲಿ ಹಿಲ್ಸ್‌ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಜನಸಂದಣಿಯಿಂದ ಹೊರಬರಲು ನಟಿ ಸಮಂತಾ ರುತ್ ಪ್ರಭು ಹೆಣಗಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಸಿರಿಮಲ್ಲೆ ಸೀರೆಗಳ ಉದ್ಘಾಟನೆಗಾಗಿ ಸಮಂತಾ ಜುಬಿಲಿ ಹಿಲ್ಸ್‌ಗೆ ಬಂದಿದ್ದರು. ಅವರ ಉಪಸ್ಥಿತಿಯ ಕುರಿತು ಸುದ್ದಿ ಹರಡುತ್ತಿದ್ದಂತೆ, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ವೀಕ್ಷಕರ ಬೃಹತ್ ಗುಂಪು ಆ ಸ್ಥಳದ ಹೊರಗೆ ಜಮಾಯಿಸಿದೆ.

ಕಾರ್ಯಕ್ರಮ ಮುಗಿದ ನಂತರ ನಟಿ ತಮ್ಮ ವಾಹನದ ಬಳಿಗೆ ಹೋಗಲು ಮುಂದಾದಾಗ ಏಕಾಏಕಿ ಸಾರ್ವಜನಿಕರು ಅವರನ್ನು ಸುತ್ತುವರಿದಿದ್ದಾರೆ. ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ಉಪಸ್ಥಿತಿಯ ಹೊರತಾಗಿಯೂ, ಜನಸಮೂಹ ಬ್ಯಾರಿಕೇಡ್ ಅನ್ನು ದಾಟಿ ಒಳನುಗ್ಗಿದೆ. ಹಲವಾರು ವ್ಯಕ್ತಿಗಳು ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಮತ್ತು ಅವರು ನಡೆಯುತ್ತಿರುವಾಗ ಅವರನ್ನು ತಳ್ಳುತ್ತಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ಅಂತಿಮವಾಗಿ ಅವರನ್ನು ರಕ್ಷಿಸುತ್ತಾ ಕಾರಿಗೆ ಹತ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆಯು ಡಿಸೆಂಬರ್ 17 ರಂದು ಲುಲು ಮಾಲ್‌ನಲ್ಲಿ ನಿಧಿ ಅಗರ್ವಾಲ್ ಎದುರಿಸಿದ ಅದೇ ಪರಿಸ್ಥಿತಿಯಂತೆ ಕಂಡುಬಂದಿದೆ.

ಸೂಕ್ತ ಅನುಮತಿ ಪಡೆಯದಿರುವುದು ಮತ್ತು ಅಸಮರ್ಪಕ ಭದ್ರತೆ ಒದಗಿಸಿದ್ದಕ್ಕಾಗಿ ಹೈದರಾಬಾದ್ ಪೊಲೀಸರು ಲುಲು ಮಾಲ್ ಆಡಳಿತ ಮಂಡಳಿ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಸತತವಾಗಿ ನಡೆಯುತ್ತಿರುವ ಇಂತಹ ಘಟನೆಗಳು ದೇಶದಲ್ಲಿ 'ಅಭಿಮಾನಿಗಳ ಮಿತಿ' ಮತ್ತು ಸೆಲೆಬ್ರಿಟಿಗಳ ಆರಾಧನೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ- ನ್ಯೂಜಿಲೆಂಡ್ 'ಮುಕ್ತ ವ್ಯಾಪಾರ ಒಪ್ಪಂದ' ಅಂತಿಮ: ಭಾರಿ ಪ್ರಮಾಣದ ಸುಂಕ ಕಡಿತ! Video

ನಾಯಕತ್ವ ಬದಲಾವಣೆ ಬಗ್ಗೆ ಹೆಚ್ಚು ಚರ್ಚಿಸುತ್ತಿರುವುದು ನೀವು, ಇಷ್ಟೊಂದು ಪ್ರಶ್ನೆ ಕೇಳಬೇಕಾದ ಅಗತ್ಯ ಏನಿದೆ?: ಮಾಧ್ಯಮಗಳ ವಿರುದ್ಧ ಸಿದ್ದರಾಮಯ್ಯ ಸಿಡಿಮಿಡಿ

ಮುಂಬೈ ತೆರಳುತ್ತಿದ್ದ Air India ವಿಮಾನ ತುರ್ತು ಭೂಸ್ಪರ್ಶ: ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ..!

ರಷ್ಯಾ ಸೇನೆ ಸೇರಲು ಒತ್ತಾಯ: ಉಕ್ರೇನ್ ನಿಂದ SOS ವಿಡಿಯೋ ಕಳಿಸಿದ ಗುಜರಾತ್ ವಿದ್ಯಾರ್ಥಿ!

Op Sindoor:'ದೇವರ ದಯೆ'ಯಿಂದ ಬದುಕುಳಿದಿದ್ದೇವೆ, ಕೊನೆಗೊ ಸತ್ಯ ಒಪ್ಪಿಕೊಂಡ ಅಸಿಮ್ ಮುನೀರ್!

SCROLL FOR NEXT